Home / ಲೇಖನ / ಇತರೆ / ಹೆಸರಿಸಲಾರದ ಸಂಬಂಧಗಳು !

ಹೆಸರಿಸಲಾರದ ಸಂಬಂಧಗಳು !

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ನಮಗೆ ಎಲ್ಲ ಸಂಬಧಗಳಿಗೂ ಹೆಸರಿಟ್ಟು ಕರೆಯುವ ಹುಚ್ಚು. ಅಪ್ಪ, ಅಮ್ಮ, ಅಣ್ಣ, ಅಕ್ಕ, ಚಿಕ್ಕಮ್ಮ, ದೊಡ್ಡಪ್ಪ, ಅಂಕಲ್, ಆಂಟಿ, ಗಂಡ, ಹೆಂಡತಿ, ಫ್ರೆಂಡ್…. ಇತ್ಯಾದಿ ಹೆಸರುಗಳನ್ನಿಟ್ಟು ಸಂಬಂಧಗಳ ವ್ಯಾಪ್ತಿ ಮಿತಿಗೊಳಿಸಿಬಿಡುತ್ತೇವೆ. ಆದರೆ ಈ ಹೆಸರಿಟ್ಟ ಸಂಬಂಧಗಳು ಕೆಲವೊಮ್ಮೆ ಹೆಸರಿನ ಮಿತಿಯಷ್ಟೇ ಪರಿಮಿತಿಯನ್ನು ಹೊಂದಿರುವುದಿಲ್ಲ. ಇನ್ನೂ ವಿಸ್ತಾರವಾಗಿ ಬೆಳೆದಿರುತ್ತದೆ. ಹಾಗೇ ಇನ್ನೂ ಕೆಲವೊಮ್ಮೆ ಆ ಸಂಬಂಧಗಳು ಆಳಕ್ಕಿಳಿಯದೆ ಬರಿಯ ‘ನಾಮಕಾವಾಸ್ತೆ’ ಸಂಬಂಧಗಳಾಗಿ ಹೆಸರಿನ ಮಿತಿಯಲ್ಲೇ ನಿಂತುಬಿಡುತ್ತವೆ.

ಆದರೆ ಇಂತಹಾ ಹೆಸರಿರುವ ಸಂಬಂಧಗಳನ್ನೂ ಮೀರಿ ಹೆಸರೇ ಇಲ್ಲದ ಅನೇಕ ಸಂಬಂಧಗಳು ಕೆಲ ಗಂಟೆಗಳು, ಕೆಲ ದಿನಗಳು ವರ್ಷಗಳು ಕೆಲವೊಮ್ಮೆ ಜೀವನ ಪರ್ಯಂತ ಕಾಡುತ್ತವೆ. ಬದುಕು ನಡೆಸುತ್ತವೆ, ಹೆಸರಿರುವ ಎಷ್ಟೆಷ್ಟೋ ಸಂಬಂಧಗಳಿಗಿಂತಾ ಆತ್ಮೀಯವಾಗಿ ಹೃದಯ ತಟ್ಟುತ್ತವೆ. ಮುಟ್ಟುತ್ತವೆ.  ಅದೇ ಸೋಜಿಗದ ವಿಷಯ. ಬಸ್ಸಿನಲ್ಲಿ ಕೆಲವೇ ಗಂಟೆ ಸಹಪ್ರಯಾಣಿಕನಾಗಿದ್ದ ವ್ಯಕ್ತಿಯೊಂದಿಗಿನ ಸಂಬಂಧ, ಕಳೆದುಹೋದ ಅತ್ಯಮೂಲ್ಯ ವಸ್ತುವನ್ನು ಜೋಪಾನವಾಗಿ ಹಿಂದಿರುಗಿಸಿದ ಪ್ರಾಮಾಣಿಕ ವ್ಯಕ್ತಿಯೊಂದಿಗಿನ ಸಂಬಂಧ, ಬದುಕಿನಲ್ಲಿ ಇನ್ನುಳಿದಿರುವುದು ಸಾವು ಮಾತ್ರ ಎಂದು ನಿರ್ಧರಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನಿಗೆ ಇನ್ನುಳಿದ ಬದುಕು ಪೂರ್ತಿ ಆಶಾವಾದಿಯಾಗಿ ಬದುಕಲು ಸ್ಪೂರ್ತಿ ನೀಡಿದ ಅಪರಿಚಿತ ವ್ಯಕ್ತಿಯೊಂದಿಗಿನ ಸಂಬಂಧ, ಮಧ್ಯದಲ್ಲೆಲ್ಲೋ ಕೆಲವೇ ನಿಮಿಷಗಳು ಪ್ರತ್ಯಕ್ಷವಾಗಿ ಒಂದು ಪೋಷಕ ಪಾತ್ರ ದಿನಗಟ್ಟಲೇ ಕಾಡುವಾಗಿನ ಸಂಬಂಧ, ಜೀವನವಿಡೀ  ಕಷ್ಟಗಳನ್ನೆದುರಿಸಿಯೇ ಬದುಕುವ ದುರಂತ ಕಥೆಯೊಂದರ ಪಾತ್ರದೊಳಗಿನ ಸಂಬಂಧ, ಬದುಕಿನಲ್ಲಿ ಸೋತು ಕುಸಿವ ಗಳಿಗೆಯಲ್ಲೆಲ್ಲಾ ‘ಏಳು ಎದ್ದೇಳು ಗುರಿ ಸೇರುವವರೆಗೂ ನಿಲ್ಲಬೇಡ’ ಎಂದು ಸಂತೈಸುವ ವಿವೇಕಾನಂದರೊಂದಿಗಿನ ಮಾನಸಿಕ ಸಂಬಂಧ….. ಇಂತಹ ಹತ್ತು ಹಲವು ಸಂಬಂಧಗಳಿಗೆ ಯಾವ ಹೆಸರು?

ಕೆಲವೊಂದು ಸಂಬಂಧಗಳಿಗೆ ಹೆಸರಿರುವುದಿಲ್ಲ. ಮತ್ತೆ ಕೆಲವಕ್ಕೆ ಹೆಸರೇ ಬೇಕಿಲ್ಲ. ಆದರೂ ನಮ್ಮ ಸಮಾಜ ಹೆಸರಿರುವ ಸಂಬಂಧಗಳನ್ನು ಪುರಸ್ಕರಿಸುವಂತೆ ಹೆಸರಿಲ್ಲದ ಸಂಬಂಧಗಳನ್ನು ಪುರಸ್ಕರಿಸುವುದಿಲ್ಲ. ಸಂಬಂಧಗಳಿಗೆಲ್ಲಾ ಬಲವಂತವಾಗಿಯಾದರೂ ಯಾವುದೇ ಒಂದು ಹೆಸರಿಟ್ಟರೆ  ನಂತರ ಜೀವಮಾನವಿಡೀ ಆ ಹೆಸರಿಟ್ಟ ಸಂಬಂಧಗಳ ಚೌಕಟ್ಟಿನೊಳಗೇ ಸಂಬಂಧ ಕಲ್ಪಿಸಿಕೊಳ್ಳುತ್ತಾ ಹೋಗುವ ಸರ್ಕಸ್ಸು!

ಸಖಿ, ಒಮ್ಮೆಯೂ ನಾವು ಕಣ್ಣಾರೆ ಕಂಡಿರದ ವ್ಯಕ್ತಿ ಕೂಡ ಎಷ್ಟೋ ಬಾರಿ ನಮ್ಮ ಆತ್ಮೀಯನಾಗಿ, ಹೃದಯ ಭಾಂಧವನಾಗಿ ಮನಸ್ಸಿನಾಳದಲ್ಲಿ  ಸೇರಿಹೋಗುವುದಿಲ್ಲವೇ? ಹೆಸರಿಲ್ಲಿದ ಎಷ್ಟೋ ಸಂಬಂಧಗಳು, ನಾವು ಹೆಸರಿಟ್ಟು ಚೌಕಟ್ಟು ನಿರ್ಮಿಸಿದ ಸಂಬಂಧಗಳಿಗಿಂತಾ ಹೆಚ್ಚು ಅಮೂಲ್ಯವಾಗಿರುತ್ತವೆ ಕಾಡುತ್ತವೆ, ಬದುಕು ಮುನ್ನಡೆಸುತ್ತವೆ. ವೃಥಾ ಅವುಗಳಿಗೆ ಹೆಸರಿಡುವ ತೆವಲು ನಮಗೇಕೆ “?
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...