Home / ಕಥೆ / ಸಣ್ಣ ಕಥೆ / ಪಂಜುಗಳ ಯುದ್ಧ

ಪಂಜುಗಳ ಯುದ್ಧ

ಚಿಕ್ಕದೇವರಾಜ ಒಡೆಯರು ರಾಜರಾದಮೇಲೆ ಮರಾಟೆಯವರು ದಂಡೆತ್ತಿ ಬರುವುದಕ್ಕೆ ಮೊದಲಾಯಿತು. ಪಟ್ಟಕ್ಕೆ ಬಂದ ಮೇಲೆ ರಾಜರು ತಮ್ಮ ದಳವಾಯಿ ಕುಮಾರಯ್ಯನನ್ನೂ ಆತನ ಮಗ ದೊಡ್ಡಯ್ಯನನ್ನೂ ತಿರುಚನಾಪಳ್ಳಿಯನ್ನು ಗೆಲ್ಲಲು ಕೊಟ್ಟು ಕಳುಹಿಸಿದರು. ಆಗ ಅಕಸ್ಮಾತ್ತಾಗಿ ಮರಾಟೆಯವರ ಒಂದು ದಂಡು ನುಗ್ಗಿ ಬಂದು ಶ್ರೀರಂಗಪಟ್ಟಣದ ಸಮೀಪದಲ್ಲಿ ಕಲಸಗೆರೆ ಕೊತ್ತತ್ತಿ ಎಂಬ ಗ್ರಾಮದ ಬಳಿ ಮೈದಾನದಲ್ಲಿ ಇಳಿದುಕೊಂಡರು.

ಒಡೆಯರು ಆಗಲೇ ದೊಡ್ಡಯ್ಯನನ್ನು ಕೆಲವು ಸೇನೆಯೊಡನೆ ಶ್ರೀರಂಗಪಟ್ಟಣಕ್ಕೆ ಕಳುಹಿಸುವಂತೆ ದಳವಾಯಿ ಕುಮಾರಯ್ಯನಿಗೆ ಹೇಳಿ ಕಳುಹಿಸಿದ್ದರು. ದೊಡ್ಡಯ್ಯನು ಕಾವೇರೀ ಪುರದ ಕಣಿವೆಯ ಮಾರ್ಗವಾಗಿ ಬರುತ್ತಿದ್ದನು. ಅಷ್ಟರಲ್ಲಿ ಮೊರಾಟೆಯವರ ದಂಡು ಬಂದು ಪ್ರತ್ಯಕ್ಷವಾಗಲು ರಾಜರು ದೊಡ್ಡಯ್ಯನಿಗೆ “ಈ ಕಲಸಗೆರೆ ಕೊತ್ತತ್ತಿ ಗ್ರಾಮದ ಬಳಿ ಇಳಿದಿರುವ ಮರಾಟೆಯವರ ಸೈನ್ಯದ ಸಮೀಪಕ್ಕೆ ಯಾರೂ ಅರಿಯದಂತೆ ಸಂಚರಿಸತಕ್ಕದ್ದು; ಅಲ್ಲಿ ಸೇರಿದ ಕೂಡಲೆ ನಮ್ಮ ದಂಡಿನಲ್ಲಿರುವ ೨-೩ ಸಾವಿರ ದನದ ಕೊಂಬುಗಳಿಗೆ ಅಪಾಯವಿಲ್ಲದ ಹಾಗೆ ಪಂಜುಗಳನ್ನು ಕಟ್ಟಿ ಮೂರು ಕಡೆಯಿಂದಲೂ ಸೈನ್ಯವು ತಮ್ಮನ್ನು ಸುತ್ತಿಕೊಂಡಿತೆಂಬ ಭ್ರಾಂತಿಯು ಮರಾಟೆಯವರ ಮನಸ್ಸಿನಲ್ಲಿ ಹುಟ್ಟುವಂತೆ ಅವುಗಳನ್ನು ರಾತ್ರಿಯಲ್ಲಿ ಚದರಿಸತಕ್ಕದ್ದು; ಅವರು ಭ್ರಾಂತರಾದ ವೇಳೆಯಲ್ಲಿ ನೀವು ಅವರನ್ನು ತಾಗತಕ್ಕದ್ದು. ಸಮಯಕ್ಕೆ ಸಹಾಯಮಾಡುವಂತೆ ಶ್ರೀರಂಗಪಟ್ಟಣದಿಂದ ಬೇರೊಂದು ಸೈನ್ಯವನ್ನು ಕಳುಹಿಸುತ್ತಿದ್ದೇವೆ” ಎಂದು ಆಜ್ಞೆ ಮಾಡಿದರು. ದೊಡ್ಡಯ್ಯ ಮುಂತಾದ ಸೇನಾನಾಯಕರು ಅದರಂತೆಯೇ ದನಗಳಿಗೆ ಪಂಜುಗಳನ್ನು ಕಟ್ಟಿಸಿ ಮೂರು ದಿಕ್ಕಿಗೂ ಓಡಿಸಿ, ಉಳಿದ ದಿಕ್ಕಿನಿಂದ ಸಂಚರಿಸುತ್ತ ಮರಾಟೆಯವರ ಮೇಲೆ ಬಿದ್ದರು. ಮರಾಟೆಯವರಿಗೆ ದಿಕ್ಕು ತೋಚದಂತಾಗಿ ತಾರುಮಾರಾಗಿ ಪಲಾಯನಮಾಡಿದರು. ಬೆಳಕು ಹರಿದಾಗ ಅವರ ಉಗ್ರಾಣವೆಲ್ಲವೂ ದೊಡ್ಡಯ್ಯನ ಕೈಗೆ ಬಂತು. ಮರಾಟೆಯವರ ನಾಯಕರ ತಲೆಗಳನ್ನು ಕತ್ತರಿಸಿ ಸೈನಿಕರು ದೊಡ್ಡಯ್ಯನಿಗೆ ಸಮರ್ಪಿಸಿದರು. ದೊಡ್ಡಯ್ಯನು ಆ ತಲೆಗಳನ್ನು ತೆಗೆಸಿಕೊಂಡು ದೊರೆಗಳ ಸನ್ನಿಧಿಗೆ ಬಂದು ಅಡ್ಡ ಬಿದ್ದು ಎಲ್ಲ ಸಂಗತಿಯನ್ನೂ ಬಿನ್ನಯಿಸಿದನು. ಒಡೆಯರು ಆ ತಲೆಗಳಲ್ಲಿ ಶ್ರೀರಂಗಪಟ್ಟಣದ ಕೋಟೆ ಬಾಗಲಿಗೊಂದನ್ನೂ ಮೈಸೂರು ಕೋಟೆ ಬಾಗಲಿಗೊಂದನ್ನೂ ಕಟ್ಟಿಸಿದರು. ದೊಡ್ಡಯ್ಯ ಮುಂತಾದ ಸೇನಾ ನಾಯಕರಿಗೆ ಬಹಳ ಸನ್ಮಾನವು ದೊರೆಯಿತು.
*****
[ವಂಶರತ್ನಾಕರ, ಪುಟ ೧೦೮, ವಂಶಾವಳಿ ೧೧೪-೫, ವಿಲ್ಕ್ಸ್, ಪುಟ ೬೧]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...