Home / ಕವನ / ಕವಿತೆ / ಹ್ಯಾಂಗ ಹೋಗಲೇ

ಹ್ಯಾಂಗ ಹೋಗಲೇ

ಈ ಮಂದಿಯಾಗೆ ಹೋಗಲಾರೆನೇ ತಾಯೀ
ಕಣ್ಣ ಬಾಣ ಬಿಟ್ಟು ಬಿಟ್ಟು | ನೋವ ಮಾಡತಾರೆ ತಾಯಿ

ಹುಟ್ಟಿದಾಗ ತೊಟ್ಟಿಲಾಗೆ | ಕೆಟ್ಟ ಕಣ್ಣು ಮುಟ್ಟದ್ಹಾಂಗೆ
ದಿಟ್ಟಿಯಿಟ್ಟು ಕಾಯುತಿದ್ದ | ನೆಟ್ಟಗಿದ್ದೆನೇ ತಾಯಿ

ಹತ್ತು ವರುಷ ಬೆಳೆದೆ ನಾನು | ಮುತ್ತಿನಂಗಿ ಲಂಗ ಹಾಕಿ
ಕತ್ತು ತಿರುಗಿ ನೋಡಿದರವ್ವ | ಮತ್ತ ಮನುಜರು

ಹನ್ನೆಳ್ಡ ವರುಷದ್ದಾಕೀ ನಾನು | ಚಿನ್ನದಿಂದ ಮುಚ್ಚಿಕೊಂಡೆ
ಬಿನ್ನಾಣಿಂದ ನೋಡಿದರವ್ವಾ | ತಿನ್ನೊ ಗಂಡಸ್ರು

ಹದಿನೈದು ವರುಷಾದವು | ಹದವಾಯ್ತು ಮೈಯಕಾಂತಿ
ಎದೆಯ ಮೊಗ್ಗ ನೋಡಿ ನೋಡಿ | ಜೊಲ್ಲು ಸುರಿಸಿದ್ರು

ಹದಿನಾರು ವರುಷ ನನಗೆ | ಬೆದರುತೈತೆ ಹೆಣ್ಣ ಜೀವಾ
ಚದರು ಕಣ್ಣು ಇರಿಯುತಾವೇ | ತಾಳೆಲಾರೆನೇ ತಾಯಿ

ತಿನ್ನೋ ಹಂಗೆ ನೋಡುತಾರೆ | ಕಣ್ಣು ಹೊಡೆದು ಕರೆಯುತಾರೆ
ಓಣಿಯಾಗೆ ಹೋಗಲಾರೆ | ಹ್ಯಾಂಗೆ ಮಾಡಲೇ ಅವ್ವಾ

ಬಳ್ಳಿಯಾಗೆ ಮೊಗ್ಗು ಮೂಡಿ | ನಡುಗುವಂಗೆ ನಡುವು ನಿಲುವು
ಕಳ್ಳನೋಟ ತೂರುತಾರೆ | ಮಳ್ಳ ಹುಡುಗರು

ತಲೀಭಾರಾ ಕುತ್ತಿಗ್ಯಾಗೆ | ಎದೀ ಭಾರ ನಡುವಿನ್ಯಾಗೆ
ಕಾಲ ಮ್ಯಾಲೆ ಮೈಯಿ ಭಾರ | ಹ್ಯಾಂಗ ನಡೆಯಲೇ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...