ಬಿಂದು

ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು
ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು

ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ
ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ

ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹನಿಯು
ತಲೆಯ ತುಂಬ ಸವಿಗನಸ ತುಂಬಿ ತುಂಬಿಗಳ ರಸದ ಗನಿಯು

ಅದರ ಇದರ ಬಾಯಿಯಲಿ ಜೊಲ್ಲು ಹನಿ ಬೀಳೆ ಅಮೃತವೆಂದು
ಉದರ ಭರಿಸಿ ನಾಲಗೆಯ ಚಲಿಸಿ ಕಹಿಗೊಲಿದು ಸಿಹಿಯದೆಂದು

ನೀಲಿ ಮೈಯನಲೆದಾಡಿ ದುಡಿಯುತಿಹ ಬಿಂದು ಬಿಂದು ಕರೆಗೆ
ಸಾಲು ಪುಳಕ ಮೈಗಾಗೆ ತಿರೆಯ ಹನಿ ಒಳಗೆ ಒಳಗೆ ಕೊರಗೆ

ಬಿಂದು ಕರಗಿ ಹೊರನೋಟದಲ್ಲಿ ಬರಿಗುಳ್ಳೆಯಾಗಿ ಹೊಳೆದು
ಅಂದವೆಂದು ಬಂಧಿಸಲು ಅದನು ಏನೇನೊ ಕವಚ ತಳೆದು

ಬಿಂದುವೊಂದು ಇದು ಅಂದಗುಂದಿ ಕಳೆಗುಂದುತಿಹುದು ಇಲ್ಲಿ
ಚೆಂದ ಚೆಲುವುಗಳು ಕಂದಿ ಕರಗಿರಲು ಕರೆಯು ಮಾತ್ರದಲ್ಲಿ

ಒಂದು ಬಿಂದು ನೂರೊಂದು ವೇಷಗಳ ಅಂಗ ಅಂಗಿಯಾಯ್ತ
ಚೆಂದ ಚೆಂದವೆಂದಂದಗೆಟ್ಟರೂ ಅದುವೆ ದೊಂದಿಯಾಯ್ತು

ಹನಿಯ ಮೋಹ ಹನಿಗೂಡಿ ಹಳ್ಳದಲಿ ಬಿರಿದು ಮುಚ್ಚಿ ಹೋಯ್ತು
ತನಗೆ ತಾನೆ ಕಂದಕದಿ ಧುಮುಕಿ ಆ ರೂಪ ಕೊಚ್ಚಿ ಹೋಯ್ತು

ನುಚ್ಚು ನೂರು ಛಿದ್ರಗಳ ತಾಳಿ ಬಂಡೆಗಳ ಮೇಲೆ ಢಿಕ್ಕಿ
ಹುಚ್ಚು ಹಿಡಿದು ಎಳೆ‌ಎಳೆಯ ನಾಡಿ ಕೂದಲಲೆ ಹರಣಸಿಕ್ಕಿ

ಉಬ್ಬಿ ಒಡೆದು ಮತ್ತುಬ್ಬಿಯುಬ್ಬಿ ಉದರಕ್ಕೆ ಬರಿಯ ಬೇನೆ
ಹಬ್ಬಿ ಬೆಳೆವ ಹಂದರದ ಮೇಲೆ ಬೀಳುತಿರೆ ಬೆಂಕಿ ಸೋನೆ

ಬಿದ್ದ ಅಗುಳ ನನ ನನಗೆ ಎಂದು ಮುಗಿಬಿದ್ದವೆಷ್ಟೊ ಮೀನು
ಹದ್ದು ಕಚ್ಚಿ ಕಣ ಕಣವನೆಲ್ಲ ಬರುಸೂರೆ ಗೈಯೆ ತಾನು

ಎಲ್ಲ ಮೀನುಗಳು ಕಿತ್ತು ತಿಂದರೂ ನೀರಿನೊಡನೆ ಬೆರೆತು
ಇಲ್ಲವಾದರೂ ಇರುವ ಛಲದ ಸೂತ್ರವನೆ ಅರಿತು ಕುರಿತು

ಚಿಮ್ಮಿ ಚೀರುತಿಹ ಛಿದ್ರ ತುಂತರಲೆ ಅಯಸ್ಕಾಂತ ಸೆಳೆತ
ಹೊಮ್ಮಿ ತೋರಿತಿದೆ ಕಂಡು ಕಾಣದೆಯೆ ರೂಹುಗೊಡುವ ಹರಿತ

ಬಿಂದು ಅಳಿಯಿತೋ ಬಿಂದು ಬೆಳೆಯಿತೋ ಅಂತು ರೂಪ ಹೋಯ್ತು
ತಿಂದು ಕಳೆಯಿತೋ ಕೊಂದು ನರಳಿತೋ ಬಿಕ್ಕು ಬೀಗಿ ಹೋಯ್ತು

ಕಣ್ಣಿನಂಚಿನಲಿ ಉರುಳಿ ಬೀಳ್ವ ಕರುಳುಗಳ ಬಿಂದು ಮಾಲೆ
ಹಣ್ಣಿನಲ್ಲಿ ಹರಿದು ಕಾಣದೆಯೆ ಉಳಿದ ಬೀಜಕ್ಕೆ ಭವ್ಯ ಲೀಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀಜಗನ ಗೂಡೊಳಗೆ
Next post ಲಿಂಗಮ್ಮನ ವಚನಗಳು – ೫೦

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys