ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಪ||

ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ
ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಅ.ಪ.||

ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ
ತಾಂಡವ ತುಳದಾರೆ ಮ್ಯಾಲೆ
ದೇಶಕ್ಕೆ ಅನ್ನವ ನೀಡುವನಂತಾರೆ
ನಿನ್ನ ಕೈಗೆ ಕೊಟ್ಟಾರೆ ಪ್ಯಾಲೆ ||೧||

ನಿನಗಾಗಿ ಅಂತ ಚುನಾವಣೆ ನಡಿತಾವೆ
ಉದ್ದುದ್ದ ವಾಗ್ದಾನಗಳು
ಕೇಂದ್ರದ ರಾಜ್ಯದ ಶಾಸಕ ಸೂರರು
ನೀನೇ ಹಡೆದ ಕುನ್ನಿಗಳು ||೨||

ನಿನಗಾಗಿ ಹಾಡ್ತಾವೆ ಓಡ್ತಾವೆ ರೇಡಿಯೋ
ನಿನಗಾಗಿ ಕುಣಿತಾವೆ ಟೀವೀ
ನಿನಗಾಗಿ ಬರಿತಾವೆ ನಿನಗಾಗಿ ಕೊರಿತಾವೆ
ಸುದ್ದಿಯ ಪತ್ರಿಕೆ ಬಾವೀ ||೩||

ಯೋಜನೆಗಳಾಗ್ತಾವೆ ಬಡ್ಜೆಟ್ಟು ಬರ್ತಾವೆ
ಕೋಟಿ ಕೋಟಿ ಹಣದ ರಾಶೀ
ಕಾರುಗಳೋಡ್ತಾವೆ ಫೈಲು ಹಾರಾಡ್ತಾವೆ
ನಿನ್ನದೆ ನಾಮವ ನೆನೆಸೀ ||೪||

ನಿನ್ನ ಸೇವೆಗೆ ಅಂತ ಅಧಿಕಾರ ವರ್ಗವು
ಪೋಲೀಸು ಕೋರ್ಟು ಕಛೇರಿ
ನಿನ್ನನ್ನ ಗಾಣಕ್ಕೆ ಹಾಕುತ್ತ ಹಿಂಡುತ್ತ
ರಸ ಹೀರಿ ಕೊಬ್ಯಾವೆ ಸೇರಿ ||೫||

ನಿನ್ನನ್ನ ಚೆನ್ನಾಗಿ ಚಿತ್ರಿಸಿ ತೋರಸ್ಯಾರೆ
ಅಂತಂದು ಸೀನಿಮಾಕ ಪ್ರೈಜು
ಕತೆ ಕಾದಂಬರಿಯಾಗೆ ಕಾವ್ಯ ನಾಟಕದಾಗೆ
ನಿನ್ನನ್ನೇ ಕೊಡತಾರೆ ಪೋಜು ||೬||

ಎಲ್ಲಾ ನಿನ್ನೆಸರ ಮ್ಯಾಲೇ ಬದಿಕ್ಯಾರೆ
ನೀನಾದಿ ಸತ್ತಂಥ ಹೆಣವು
ಬೆನ್ನಿಗಂಟಿದ ಹೊಟ್ಟೆ ಮೈಯಿ ತೋರುವ ಬಟ್ಟೆ
ನೀನಾದೆ ಪ್ರಶ್ನೆಗಳ ಮಣವು ||೭||

ಝಾಡಿಸಿ ಎದ್ದೇಳೋ ಮೈಕೊಡವಿ ನಿಂತ್ಕೊಳೊ
ನಿನ್ನ ಉದ್ಧಾರ ನಿನ್ಕೈಲಿ
ಅಕ್ಷರ ಕಲಿಯುತ ಕಲಿಯು ನೀನಾಗುತ
ತಕ್ಕೊಳ್ಳೋ ಲಗಾಮ್ ನಿನ್ಕೈಲಿ ||೮||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಳಿ ಗೂಡಿಗೆ
Next post ಸೈಕಲ್ಲಿನ ಆಯ್ಕೆ ಹೇಗೆ?

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys