Home / ಕವನ / ಕವಿತೆ / ನಗ್ತಾರಲ್ಲೋ ತಮ್ಮಾ

ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಪ||

ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ
ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಅ.ಪ.||

ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ
ತಾಂಡವ ತುಳದಾರೆ ಮ್ಯಾಲೆ
ದೇಶಕ್ಕೆ ಅನ್ನವ ನೀಡುವನಂತಾರೆ
ನಿನ್ನ ಕೈಗೆ ಕೊಟ್ಟಾರೆ ಪ್ಯಾಲೆ ||೧||

ನಿನಗಾಗಿ ಅಂತ ಚುನಾವಣೆ ನಡಿತಾವೆ
ಉದ್ದುದ್ದ ವಾಗ್ದಾನಗಳು
ಕೇಂದ್ರದ ರಾಜ್ಯದ ಶಾಸಕ ಸೂರರು
ನೀನೇ ಹಡೆದ ಕುನ್ನಿಗಳು ||೨||

ನಿನಗಾಗಿ ಹಾಡ್ತಾವೆ ಓಡ್ತಾವೆ ರೇಡಿಯೋ
ನಿನಗಾಗಿ ಕುಣಿತಾವೆ ಟೀವೀ
ನಿನಗಾಗಿ ಬರಿತಾವೆ ನಿನಗಾಗಿ ಕೊರಿತಾವೆ
ಸುದ್ದಿಯ ಪತ್ರಿಕೆ ಬಾವೀ ||೩||

ಯೋಜನೆಗಳಾಗ್ತಾವೆ ಬಡ್ಜೆಟ್ಟು ಬರ್ತಾವೆ
ಕೋಟಿ ಕೋಟಿ ಹಣದ ರಾಶೀ
ಕಾರುಗಳೋಡ್ತಾವೆ ಫೈಲು ಹಾರಾಡ್ತಾವೆ
ನಿನ್ನದೆ ನಾಮವ ನೆನೆಸೀ ||೪||

ನಿನ್ನ ಸೇವೆಗೆ ಅಂತ ಅಧಿಕಾರ ವರ್ಗವು
ಪೋಲೀಸು ಕೋರ್ಟು ಕಛೇರಿ
ನಿನ್ನನ್ನ ಗಾಣಕ್ಕೆ ಹಾಕುತ್ತ ಹಿಂಡುತ್ತ
ರಸ ಹೀರಿ ಕೊಬ್ಯಾವೆ ಸೇರಿ ||೫||

ನಿನ್ನನ್ನ ಚೆನ್ನಾಗಿ ಚಿತ್ರಿಸಿ ತೋರಸ್ಯಾರೆ
ಅಂತಂದು ಸೀನಿಮಾಕ ಪ್ರೈಜು
ಕತೆ ಕಾದಂಬರಿಯಾಗೆ ಕಾವ್ಯ ನಾಟಕದಾಗೆ
ನಿನ್ನನ್ನೇ ಕೊಡತಾರೆ ಪೋಜು ||೬||

ಎಲ್ಲಾ ನಿನ್ನೆಸರ ಮ್ಯಾಲೇ ಬದಿಕ್ಯಾರೆ
ನೀನಾದಿ ಸತ್ತಂಥ ಹೆಣವು
ಬೆನ್ನಿಗಂಟಿದ ಹೊಟ್ಟೆ ಮೈಯಿ ತೋರುವ ಬಟ್ಟೆ
ನೀನಾದೆ ಪ್ರಶ್ನೆಗಳ ಮಣವು ||೭||

ಝಾಡಿಸಿ ಎದ್ದೇಳೋ ಮೈಕೊಡವಿ ನಿಂತ್ಕೊಳೊ
ನಿನ್ನ ಉದ್ಧಾರ ನಿನ್ಕೈಲಿ
ಅಕ್ಷರ ಕಲಿಯುತ ಕಲಿಯು ನೀನಾಗುತ
ತಕ್ಕೊಳ್ಳೋ ಲಗಾಮ್ ನಿನ್ಕೈಲಿ ||೮||

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...