ಭವ್ಯ ಭಾರತ ಭೂಮಿ

ಭವ್ಯ ಭಾರತ ಭೂಮಿ ನಮ್ಮದು
ನವ್ಯ ಭಾರತ ಭೂಮಿ ನಮ್ಮದು
ಶಾಂತಿ ಸಹನೆ ನೀತಿ ನೇಮಗಳ
ಭಾವೈಕ್ಯತೆಯ ಗೂಡು ನಮ್ಮದು

ಜನನಿ ಜನುಮ ಭೂಮಿ ಸ್ವರ್‍ಗ
ತಾಣ ಮುಗಿಲ ಕಾನನದೊಳಗಣ
ಸಮೃದ್ಧಿ ಚೆಂದ ಗಂಧ ಮೆರೆದ
ಸಂಪದ್ಭರಿತ ನಾಡು ನಮ್ಮದು

ಕನಕ ವೃಷ್ಟಿವನಿತ ಭಾವ
ನಿತ್ಯ ವರ್‍ಣ ಚೇತನ ಕಾಮನ
ಸತ್ಯ ಧರ್‍ಮಕರ್‍ಮ ಮರ್‍ಮ
ಬೆಸೆದ ಭೂಮಿ ನಮ್ಮದು

ಋತು ಚಕ್ರಧಾರೆಯಲಿ
ಕೀರ್ತಿ ಶಿಖರಕೇರಿ ಉದಯ ಕಿರಣ
ಸುದಯ ಅಭಿಮಾನದಾನಂದ ಮೆರೆವ
ಪುಣ್ಯ ಭೂಮಿ ನಮ್ಮದು

ಸಂತ ಸಾಧು ವೀರಗಾಥ
ತ್ಯಾಗ ರೂಪ ದೀಪವಂದನ
ಅಮರಗಾನ ವಿರಾಟ ಮನನ
ಜನ್ಮ ಕರ್‍ಮಭೂಮಿ ನಮ್ಮದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ದೇವಾಲಯ
Next post ಹಳೇ ಮಂದಿ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…