ಹಳೇ ಮಂದಿ

ಅವರ ಪಾದಗಳು ನೆರಿಗೆಗಟ್ಟಿವೆ ಹಾಗೂ
ಹಾಕಿಕೊಂಡ ಬೂಟುಗಳು ಮೆತ್ತಗಾಗಿವೆ.
ಅವರು ಏನನ್ನೂ ಹುಡುಕುತ್ತಿಲ್ಲ ಬರೀ ನಿಧಾನವಾಗಿ
ನಡೆಯುತ್ತಿದ್ದಾರೆ. ಅವರೀಗ ಹಳದಿ ಎಲೆ.
ಹಗುರಾಗಿದ್ದಾರೆ ಮಾಗಿದ್ದಾರೆ.

ಅವರಿಗೆ ಹೊಸದೇನು ಬೇಕಾಗಿಲ್ಲ. ನಡೆದ
ದಾರಿಯ ಹಳವಂಡಗಳು ನೆನಪುಗಳು,
ಅವರಲ್ಲಿ ಹೂತು ಹೋಗಿವೆ. ರಾತ್ರಿಯ
ಕತ್ತಲಲ್ಲಿ ಅವರು ಕನವರಿಸುತ್ತಿದ್ದಾರೆ, ಮತ್ತು
ದಾಟಿ ಹೋಗುವ ದಾರಿಯನು ಕಣ್ಣುಗಳು ಅರಸುತ್ತಿವೆ.

ಒಮ್ಮೊಮ್ಮೆ ಖಾಲಿ ಆಕಾಶದ ಕಡೆ ಮುಖ
ಮಾಡುತ್ತಾರೆ, ನಡುಗುವ ಕೈಗಳಿಂದ ನೀರು
ಕುಡಿಯುತ್ತಾರೆ, ಗೋಡೆಯ ಮೇಲಿನ ಭಾವಚಿತ್ರಗಳ
ಅವರು ಗುರುತಿಸುತ್ತಿಲ್ಲ. ಕಣ್ಣುಗಳ ತುಂಬ ರಾತ್ರಿಯ
ಭಾವ ಭರವಾಗಿ ಸುಮ್ಮನೆ ನಿಟ್ಟುಸಿರು ಬಿಡುತ್ತಾರೆ.

ಅವರ ಕೋಣೆಗಳಲಿ ನಿಶ್ಯಬ್ದ ದಾಖಲಾಗಿದೆ.
ಮೊಮ್ಮಕ್ಕಳು ಮಾತು ಮರೆತಿದ್ದಾರೆ, ಏನೋ ಅರಸುವ
ಭೂತದಂತೆ ಮೌನದಲಿ ಅವರು ಹುದುಗಿದ್ದಾರೆ ಮತ್ತೆ
ಮನೆ ಮಂದಿ ಮರೆತವರಂತೆ ಇದ್ದಾರೆ. ವಿಷಾದದಲಿ
ಅವರು ಸದ್ದಿಲ್ಲದೇ ಕಾಲನ ಕರೆ ಕಾಯುತ್ತಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವ್ಯ ಭಾರತ ಭೂಮಿ
Next post ಚಿತ್ರದ ಅಂಗಡಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…