ಚಿತ್ರದ ಅಂಗಡಿ

ಗದುಗಿನ ನಾಡಹಬ್ಬದಲ್ಲಿ ಶ್ರೀ ಮಧುರ ಚೆನ್ನ ರಿ೦ದ ಪರೀಕ್ಷಿಸಲ್ಪಟ್ಟು ರಜತ ಪದಕವನ್ನು ಪಡೆದುದು

ಅಮಾ, ಚಿತ್ರದ ಅಂಗಡಿ ನೋಡೆ !
ಸುಂದರ ಸೊಬಗಿನ ಅಂಗಡಿ ನೋಡೆ !
ಬಗೆ ಬಗೆ ಬಣ್ಣದ ಪಟಗಳ ನೋಡೆ !
ಭಾರತದೇಶದ ಚಿತ್ರವನೋಡೆ ! || ೧ ||

ಅಮ್ಮಾ, ಇಲ್ಲಿದೆ ಹೆಚ್ಚಿನ ಚಿತ್ರ !
ಸಕಲರ ಮನವನು ಸೆಳೆಯುವ ಚಿತ್ರ !
ಇದುವೇ ನಾ ಹಟ ಮಾಡಿದ ಚಿತ್ರ !
ಕನ್ನಡ ಕುವರರ ಹೆಮ್ಮೆಯ ಚಿತ್ರ ! || ೨ ||

ಸುಂದರ ಬನಗಳ ಚಿತ್ರಿಪ ಚಿತ್ರ !
ಗುಡ್ಡ ಬೆಟ್ಟಗಳು ತುಂಬಿಹ ಚಿತ್ರ !
ಗೋದಾವರಿ ಹೊಳೆ ಹರಿದಿಹ ಚಿತ್ರ !
ಕಾವೇರಿಯು ತಾ ಕಾಖವ ಚಿತ್ರ ! || ೩ ||

ಅಮಾ, ಇಲ್ಲಿಹ ಗುಡಿಗಳ ನೋಡು !
ಜಕ್ಕಣ ಶಿಲ್ಪಿಯ ಜಾಣ್ಮಯ ನೋಡು !
ವಿಜಯನಗರದಾ ವೈಭವ ನೋಡು !
ಹುಕ್ಕ ಬುಕ್ಕ ಮಾಧವರನು ನೋಡು ! || ೪ ||

ಅಮ್ಮಾ, ಕುಮಾರವ್ಯಾಸನ ಚಿತ್ರ !
ಕಲ್ಯಾಣದ ಆ ಬಸವನ ಚಿತ್ರ !
ಚೆನ್ನಮ್ಮನ ಕಿತ್ತೂರಿನ ಚಿತ್ರ !
ಬೆಳವಡಿ ರಾಣಿಯ ಶೌರ್ಯದ ಚಿತ್ರ ! || ೫ ||

ಅಮ್ಮಾ, ಇದದೋ ಹಳ್ಳಿಯ ಚಿತ್ರ !
ನೇಗಿಲ ಹೊಡೆಯುವ ಯೋಗಿಯ ಚಿತ್ರ !
ರಾಟಿಯ ತಿರುಗಿಹ ಭಗಿನಿಯ ಚಿತ್ರ !
ಖಾದಿಯ ಕೊಳ್ಳುವ ಜನಗಳ ಚಿತ್ರ ! || ೬ ||

ಅಮ್ಮಾ ! ಭೀಕರ ದೃಶ್ಯವಿದಲ್ಲೆ ?
ಬಡವನ ಗೋಳಿನ ಚಿತ್ರವಿದಲ್ಲೆ ?
ಹೊಲೆಯರೆಂದು ಸಲೆ ಹಳಿಯುವರಲ್ಲೆ ?
ದಾಸ್ಯದ ದಾಹದಿ ಬಳಲುವರಲ್ಲೆ ? || ೭ ||

ಅಮ್ಮಾ, ಇಲ್ಲಿಹ ನೋಟವಿದೇನು ?
ಕನ್ನಡದಮ್ಮನು ಅಳುತಿಹಳೇನು ?
ಕರುನಾಡಿನ ಜನ ಮಲಗಿಹುದೇನು ?
ಪರನಾಡಿನ ಜನ ಬರುತಿಹುದೇನು ? || ೮ ||

ಅಮ್ಮಾ, ಬೇಕಿದು ಚಿತ್ರವು ನೋಡು !
ಅಯ್ಯೋ ! ಮರಾಠ ಬಂದನು ನೋಡು !
ತೆಲುಗನು ಬಂದನು ಕೊಳ್ವನು ನೋಡು !
ಅಪ್ಪನ ಹುಡುಕುವ ಬೇಗನೆ ಓಡು || ೯ ||

ಅಪ್ಪಾ ! ಅಪ್ಪಾ !! ಎಲ್ಲಿಹೆ ಬಾರೊ !
ಪ್ರೀತಿಯ ಚಿತ್ರವ ಕೊಳ್ವರು ಬಾರೋ !!
ಕರ್ನಾಟಕವಿದು ಪೊಪುದು ಬಾರೋ !!!
ಕನ್ನಡಿಗನೆ ನೀ ಬೇಗನೆ ಬಾರೋ !!!! || ೧೦ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಳೇ ಮಂದಿ
Next post ವಚನ ವಿಚಾರ – ನಿಜವೇ?

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…