ಆತ್ಮ ದೇವಾಲಯ

ದೇಹವೆಂಬುದು ಆತ್ಮ ದೇವಾಲಯ
ದೇವಾಲಯದಲ್ಲಿ ಸದಾ ಭಕ್ತಿ ಇರಲಿ
ಸತ್ಯವೆಂಬ ರಂಗವಲಿ ಬರೆಯಬೇಕು
ನಾಮ ಸ್ಮರಣೆಯ ಗಂಟೆ ಬಾರಿಸಲಿ

ವಿಶ್ವಾಸವೆಂಬ ಪೂಜೆ ಇರಲಿ
ಧ್ಯಾನವೆಂಬ ಮಂತ್ರ ಪಠಿಸಲಿ
ಸತ್ಕರ್ಮವೆಂಬ ಗಂಧವ ಹರಡಲಿ
ಯೋಗವೆಂಬ ದೀಪವಲ್ಲಿ ಬೆಳಗಲಿ

ನಿರಾಡಂಬರದ ಅಂಬರವ ತೊಡಿಸಲಿ
ನುಡಿದಂತೆ ನಡೆಯುವ ಚಂದನ ಅರ್‍ಪಿಸಲಿ
ಸಮತ್ವ ಗುಣವೆಂಬ ಹೂ ಅಲಂಕರಿಸಲಿ
ಪಾರದರ್ಶಕ ಮನವೆಂಬುದು ಬಣ್ಣಿಸಲಿ

ಮುಕ್ತಿಯೆಂಬ ಆರತಿ ಬೆಳಗಲಿ
ಕಾಮಕಾಂಚನಗಳ ಧೂಪವೆಲ್ಲ ಜಲಿಸಲಿ
ನಿಷ್ಕಾಮವೆಂಬ ಲಾಲಿ ಹಾಡಲಿ
ಮಾಣಿಕ್ಯ ವಿಠಲ ನೋಡಯವಂತಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೮
Next post ಭವ್ಯ ಭಾರತ ಭೂಮಿ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…