ಎದ್ದೇಳು ಎದ್ದೇಳು ಕನ್ನಡಿಗ

ಎದ್ದೇಳು ಎದ್ದೇಳು ಕನ್ನಡಿಗ
ಎಚ್ಚರದಿಂದೇಳು ಕನ್ನಡಿಗ
ಉದಯವಾಯಿತು ಕನ್ನಡ ನಾಡು ||
ಉದಯರಾಗಲಹರಿಯಿಂ ಹಾಡು
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು ||

ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||
ಭಾರಿಸಿತು ಕನ್ನಡ ಡಿಂಡಿಮವ
ಕಟ್ಟಿತು ಹಸಿರು ತೋರಣವ
ಸಂಭ್ರಮಿಸಿತು ನವಕರ್ನಾಟಕ
ನವ ಚೈತನ್ಯದ ನೀಡಿತು || ಜ ||

ಕೆಂಪು ಹಳದಿ ಬಾವುಟ
ಕೆಚ್ಚೆದೆಯನು ಸಾರಿ ಕ್ರಾಂತಿ
ಶಾಂತಿ ದಿವ್ಯ ಮೊಗವ ತೋರಿ
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನು ||

ಸಾವಿರಾರು ವರುಷಗಳ ಹರುಷ
ಹೊನಲು ಹಿಗ್ಗಿನೊಲುಮೆಯಲಿ
ಕುಣಿದು ನಲಿದು ಭಾವೈಕ್ಯತೆಯಲಿ ಕೂಡಿ
ಜಯಕನ್ನಡ ಜಯಕನ್ನಡ
ಜಯ ಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||

ಗಂಗ ಕದಂಬಾದಿ ರಾಷ್ಟ್ರಕೂಟ
ಹೊಯ್ಸಳಾಧೀಶರು ಕಟ್ಟಿದ
ವೀರ ಧೀರ ತ್ಯಾಗ ಕಲಿಗಳ
ಭವ್ಯ ನಾಡು ನುಡಿಯು ಕನ್ನಡ
ಜಯ ಕನ್ನಡ ಜಯ ಕನ್ನಡ
ಜಯ ಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯ ಭೇರಿಯನ್ನು ||

ಮುನ್ನುಗ್ಗಿದೆ ಮುನ್ನಡೆದಿದೆ
ಕಗ್ಗತ್ತಲ ಮೌಢ್ಯಗಳ ಕಳಚಿ
ವಿಜ್ಞಾನ ದೀವಿಗೆಯ ಹಚ್ಚಿ
ಅಭಿಮಾನ ಸ್ವಾಭಿಮಾನದಿಂ
ನುಡಿದಿದೆ ಜಯಕನ್ನಡ
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು
ಬೆಳಗಿರಿ ಕನ್ನಡ ಜೋತಿಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೮ನೆಯ ಖಂಡ – ಸಾಮರ್‍ಥ್ಯಸಂಚಯ
Next post ದೇವರಿಗೆ ಬೈದೆ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…