ದೇವರಿಗೆ ಬೈದೆ

ಒಂದು ದಿನ
ಸಿಟ್ಟಿನ ಭರದಲ್ಲಿ
ಪರಮೇಶ್ವರನಿಗೆ ನಾನು
ತಾಯಿ ಮೇಲೆ ಬೈದೆ
ಅವನುಲೋಕಾಭಿರಾಮವಾಗಿ
ಚಕ್ಕನೆ ನಕ್ಕ
ಪಕ್ಕದ ಮನೆಯ ಬೋರ
ಮುಖವನು ಬರಿದೆ ಕುಗ್ಗಿಸಿ
ಅಂಟು ಮೋರೆಯ ಗಂಟು ಹಾಕಿ
ಸವಾಲು ಮಾಡಿದ
‘ಯಾಕಯ್ಯ ನೀನು’ ಹೀಗೆ
ಆ ನಿರ್ಗುಣ, ನಿರಾಕಾರ
ಅನಾಥ ಜಗನ್ನಾಥನಿಗೆ
ಏನಾದರೂ ಅನ್ನುತ್ತಿ
ಶಬ್ದ ಜಾಲದಲಿ ಅವನ
‘ಧರ್ಮಫಣಿಯನ್ನು ಹಿಡಿಯುತ್ತಿ’
ಇನ್ನೊಮ್ಮೆ ಬೈದೆ ಬಿಗಿಯಾಗಿ
ವಿದ್ಯಾಪೀಠದ ಗೋಡೆ ಬಿರಿಯಿತು
ಮನುಷ್ಯ ಏಕೆ ಸಿಟ್ಟಾಗುತ್ತಾನೆ?
ಈ ವಿಷಯದ ಕುರಿತು ಅಲ್ಲಿ
ಶೋಧ ನಡೆದಿದೆ.
ಹೊಗೆಬತ್ತಿಯ ಧೂಮ ತುಂಬಿದ
ಹೊಟ್ಟೆಯಲ್ಲಿ
ಭಾವವಿಹ್ವಲ ಚರ್ಚೆ ನಡೆದಿದೆ
ನನ್ನ ಹುಟ್ಟು ದಿನದಂದು
ದೇವನಿಗೆ ಇನ್ನೊಮ್ಮೆ ಬೈದೆ
ಚಾಬೂಕಿನೇಟಿನಂತೆ
ಶಬ್ದದೇಟುಗಳ ಒಂದೇ ಸವನೆ
ಬಿಗಿದು ಹೇಳಿದೆ
‘ಪಾಪಿ ಮಗನೆ’ ಮುರುಕು ಭಾಕರಿಗಾಗಿ
ಸರಕು ಕಟ್ಟಿಗೆಯ ಮುರಿಸುವೆ
ತಾಯಿ ಉಟ್ಟ ಚಿಂದಿ ಬಟ್ಟೆಯ ಚೂರಿನಿಂದ
ಬಡಕಲು ಮೈಯ ಒರಸುವೆ
ಗುಟುಕು ಸೆರೆಯ ತೃಷೆಗಾಗಿ
ಕುಂಟಣಿಯನಾಗಿಸುವೆ, ದೇವ
ಆಗದಿದು ಬಾಳಲು ನಿನಗೆ
ಅದಕಾಗಿ ಮಣ್ಣಿನಲಿ ಹೋರುವ
ಶಪಿತ ಪ್ರೇಮಲ, ವತ್ಸಲ,
ತಾಯಿಯಾಗಬೇಕು’
ಬೋರ ನಕ್ಕ
ನಾನು ಬೈದಾಗ ಅವನೂ ನಕ್ಕನೇನೋ?
*****
ಮೂಲ: ಕೇಶವ ಮೆಶ್ರಾಮ
(ಮರಾಠಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದ್ದೇಳು ಎದ್ದೇಳು ಕನ್ನಡಿಗ
Next post ಕೃಷಿಕನೊಳು ಹಸುವೋ? ಕೃಷಿಕನೇ ಹಸುವೋ?

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…