ಬಸವಣ್ಣನವರಿಗೆ

ನೀನೇನೊ ನಿಜವಾಗಿ ಮಂತ್ರಿ.
ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು,
ಕಂತ್ರಿಜನಗಳ ಬಿಡು,
“ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ
ಸುಟ್ಟರೆ ನೊಸಲಿಗೆ ವಿಭೂತಿಯಾಗಿ
ತಟ್ಟದೇ ಹಾಕಿದರೆ” ಕೊಳವೆ ಗೊಬ್ಬರವಾಗಿ
ನಾರಿದರು ಬೀಗಿ ಮೆರೆಯುವ ಭಂಡರನು ಸುಡು.
ತಂತ್ರಗಳ ಮರೆಯಿರದೆ ಮಂತ್ರವಾಯಿತು ಮಾತು ನಿನ್ನಲ್ಲಿ;
ಎಸೆದ ಮಾತೆಲ್ಲ ಮಸೆದಲುಗಾಗಿ ಇಂದಿಗೂ
ಆಡುತಿದೆ ದಟ್ಟೈಸಿ ಬೆಳೆದ ಕಗ್ಗಾಡಲ್ಲಿ.

ಲಿಂಗಕಲ್ಲಿನ ಮೇಲೆ ಬದುಕ ಒಗೆಯಲು ಹೊರಟ
ರಜಕ ನಿನಗೆ
ಎಲ್ಲರೂ ಬಳಗ, ನಾಟಕದ ಜಗಲಿಯ ಮೇಲೆ
ಲೋಕಸಂವಾದ, ಕಟ್ಟೀಕಾಂತ ಒಳಗೆ.
ಬಾಳಬಲ್ಲದೆ ಸಂತೆಯಲಿ ಸಲಗ? ಆದರೂ
ಸಿಕ್ಕಿಬಿದ್ದಿದೆ ಕಡೆಗೆ ದೊಂಬಿದಾಸರ ಕೈಗೆ!
ಗಂಟೆ, ಮಂಟಪ, ಭಾರಿ ಬೆಳ್ಳಿ ಸಂಪುಟದಲ್ಲಿ
ಅದಕ್ಕೆ ಊರಿನ ನಡುವೆ ಮೆರವಣಿಗೆ.
(ನಾ ಬಲ್ಲೆ ಒಳಗೊಳಗೆ ನಗು ನಿನಗೆ)
ನಿನ್ನೆ ಪಟದೆದುರಿಗೇ
ತಲೆವಾಗುತಿದೆ ಏತ,
ಕೈಮುಗಿದು ಇಕ್ಕುಳ
ಗಿಳಿಯ ಹಿಂಡೇ ನೆರೆದು ಕಲಿತಿದ್ದ ಒದರುತಿದೆ.
ಅಯ್ಯಾ
ನಾವು ಗಳಿಸಿದ್ದೆಲ್ಲ
ನೀ ಕೊಟ್ಟ ದ್ರಾಕ್ಷಿಗಳ ಹುಳಿಸಿ
ಮದ್ಯವ ಇಳಿಸಿ
ಕುಡಿವ ಕಲೆಯ,
ಓಡೆತ್ತ ಬಲ್ಲುದೊ ಅವಲಕ್ಕಿಯ ಸವಿಯ?
ಕತ್ತೆ ತಿಳಿದೀತೆ ಹೊತ್ತಿರುವ ಗಂಧದ ಬೆಲೆಯ?
ಜನ ಬಾಳಲೆಂದು ದುಡಿದವ ನೀನು ಉತ್ಸವದ ಚಿತ್ರವಾಗಿ
ನಿನ್ನ ನುಡಿ ಅಚ್ಚಾಗಿ ಬೈಂಡಾಗಿ
ಬೀರುವಿಗೆ ಸಿಂಗಾರವಾಗಿ,
ಸಂದ ಗೌರವಕಾಗಿ
ನಗು ನಿನಗೆ,
ಕಣ್ಣೀರು ನನಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೇಬು
Next post ನಿನ್ನ ಮಿಲನದಿ ಹೆಪ್ಪುಗೊಂಡೆನು

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys