ಆಲಾಪ

ಜೀವ ಮೆಲ್ಲನೆ ಒಜ್ಜೆಯಾದ ಸಂಜೆ
ಕೌನೆರಳು ಕವಿದ ಗೋಡೆಯ ಮೇಲೆ
ಗಡಿಯಾರದ ಮೆದು ಶಬ್ದಗಳು, ನೀನು
ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ
ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು
ನಿನ್ನಯ ಪಾದದ ಗುರುತುಗಳು.
ನನ್ನ ಮನೆಯ ಅಂಗಳದ ಆಕಾಶದ
ನೀಲಿಯಲಿ ಅದ್ದಿ ಬೆರೆಯಲಿ ನಿನ್ನ
ಬೆರಳುಗಳು ಹೊಸ ಪ್ರೇಮ ಕಾವ್ಯ
ಅದ್ಯಮ ತೀವ್ರಭಾವ ಹೊರಳಿ ಅರಳಿ
ಎಣ್ಣೆ ಸುರಿದ ನಂದಾದೀಪ ಬೆಳಗಲಿ
ಮೂರು ಸಂಜೆಯ ಹೊತ್ತಿನಲಿ
ದೇವರು ಮನೆಯ ಕೆಂಪು ಹಾಸು ಮಿನುಗಲಿ.

ಅಲ್ಲಿ ಅಂಬರದ ನೀಲಿಯಲಿ
ನಿನ್ನ ಸಹಿ ನನ್ನ ಪ್ರೇಮ ಕಾವ್ಯಕ್ಕೆ
ತಗುಲಿದಾಗ ಚಕ್ಕನೆ ಬೆಳಗಿದವು
ಚುಕ್ಕಿಗಳು. ಚಂದ್ರ ಮುನಿಸಿಕೊಂಡು ನನ್ನೊಡನೆ.
ಅವನಿಗೇನು ಗೊತ್ತು ತಿಂಗಳಲ್ಲಿ
ಹದಿನೈದು ದಿವಸಗಳು ನಾ ಅವನ
ಬೆಳದಿಂಗಳ ಹಾಲು ಮೈ ಮನಸ್ಸು.
ಸ್ನಾನ ಮಾಡಿ ಪುಳಕಗೊಂಡು ಕವಿತೆಗಳ ಬರೆಯುತ್ತೇನೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೊಳ್ಳೆ ನಾಶಕಗಳಿಂದ ಅಪಾಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೫

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…