ಆಲಾಪ

ಜೀವ ಮೆಲ್ಲನೆ ಒಜ್ಜೆಯಾದ ಸಂಜೆ
ಕೌನೆರಳು ಕವಿದ ಗೋಡೆಯ ಮೇಲೆ
ಗಡಿಯಾರದ ಮೆದು ಶಬ್ದಗಳು, ನೀನು
ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ
ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು
ನಿನ್ನಯ ಪಾದದ ಗುರುತುಗಳು.
ನನ್ನ ಮನೆಯ ಅಂಗಳದ ಆಕಾಶದ
ನೀಲಿಯಲಿ ಅದ್ದಿ ಬೆರೆಯಲಿ ನಿನ್ನ
ಬೆರಳುಗಳು ಹೊಸ ಪ್ರೇಮ ಕಾವ್ಯ
ಅದ್ಯಮ ತೀವ್ರಭಾವ ಹೊರಳಿ ಅರಳಿ
ಎಣ್ಣೆ ಸುರಿದ ನಂದಾದೀಪ ಬೆಳಗಲಿ
ಮೂರು ಸಂಜೆಯ ಹೊತ್ತಿನಲಿ
ದೇವರು ಮನೆಯ ಕೆಂಪು ಹಾಸು ಮಿನುಗಲಿ.

ಅಲ್ಲಿ ಅಂಬರದ ನೀಲಿಯಲಿ
ನಿನ್ನ ಸಹಿ ನನ್ನ ಪ್ರೇಮ ಕಾವ್ಯಕ್ಕೆ
ತಗುಲಿದಾಗ ಚಕ್ಕನೆ ಬೆಳಗಿದವು
ಚುಕ್ಕಿಗಳು. ಚಂದ್ರ ಮುನಿಸಿಕೊಂಡು ನನ್ನೊಡನೆ.
ಅವನಿಗೇನು ಗೊತ್ತು ತಿಂಗಳಲ್ಲಿ
ಹದಿನೈದು ದಿವಸಗಳು ನಾ ಅವನ
ಬೆಳದಿಂಗಳ ಹಾಲು ಮೈ ಮನಸ್ಸು.
ಸ್ನಾನ ಮಾಡಿ ಪುಳಕಗೊಂಡು ಕವಿತೆಗಳ ಬರೆಯುತ್ತೇನೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೊಳ್ಳೆ ನಾಶಕಗಳಿಂದ ಅಪಾಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೫

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…