ಆಲಾಪ

ಜೀವ ಮೆಲ್ಲನೆ ಒಜ್ಜೆಯಾದ ಸಂಜೆ
ಕೌನೆರಳು ಕವಿದ ಗೋಡೆಯ ಮೇಲೆ
ಗಡಿಯಾರದ ಮೆದು ಶಬ್ದಗಳು, ನೀನು
ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ
ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು
ನಿನ್ನಯ ಪಾದದ ಗುರುತುಗಳು.
ನನ್ನ ಮನೆಯ ಅಂಗಳದ ಆಕಾಶದ
ನೀಲಿಯಲಿ ಅದ್ದಿ ಬೆರೆಯಲಿ ನಿನ್ನ
ಬೆರಳುಗಳು ಹೊಸ ಪ್ರೇಮ ಕಾವ್ಯ
ಅದ್ಯಮ ತೀವ್ರಭಾವ ಹೊರಳಿ ಅರಳಿ
ಎಣ್ಣೆ ಸುರಿದ ನಂದಾದೀಪ ಬೆಳಗಲಿ
ಮೂರು ಸಂಜೆಯ ಹೊತ್ತಿನಲಿ
ದೇವರು ಮನೆಯ ಕೆಂಪು ಹಾಸು ಮಿನುಗಲಿ.

ಅಲ್ಲಿ ಅಂಬರದ ನೀಲಿಯಲಿ
ನಿನ್ನ ಸಹಿ ನನ್ನ ಪ್ರೇಮ ಕಾವ್ಯಕ್ಕೆ
ತಗುಲಿದಾಗ ಚಕ್ಕನೆ ಬೆಳಗಿದವು
ಚುಕ್ಕಿಗಳು. ಚಂದ್ರ ಮುನಿಸಿಕೊಂಡು ನನ್ನೊಡನೆ.
ಅವನಿಗೇನು ಗೊತ್ತು ತಿಂಗಳಲ್ಲಿ
ಹದಿನೈದು ದಿವಸಗಳು ನಾ ಅವನ
ಬೆಳದಿಂಗಳ ಹಾಲು ಮೈ ಮನಸ್ಸು.
ಸ್ನಾನ ಮಾಡಿ ಪುಳಕಗೊಂಡು ಕವಿತೆಗಳ ಬರೆಯುತ್ತೇನೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೊಳ್ಳೆ ನಾಶಕಗಳಿಂದ ಅಪಾಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೫

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys