Home / ಕವನ / ಕವಿತೆ / ವಸುಂಧರೆ

ವಸುಂಧರೆ

ನೀಲಿ ಅಂಬರದ ತಿಳಿಬೆಳದಿಂಗಳು
ಸಾವಿರಾರು ಚುಕ್ಕಿ ಮಿನುಗು ತೇಲಿ
ಹಾರಿದ ಬೆಳ್ಳಕ್ಕಿ ಸಾಲಿನಲ್ಲಿ ಮೋಡಗಳು
ಎಚ್ಚರಗೊಂಡು ದಾವಾ ಹರಡಿ ಹರಡಿ
ಪೃಥ್ವಿ ಪುಲಕಗೊಂಡಳು ಬಯಲ ತುಂಬೆಲ್ಲಾ ಹಸಿರು.

ಚಿಗುರು ಸ್ಪರ್ಶಕ್ಕೆ ಮುದಗೊಂಡ ಬೀಜ
ಶಕ್ತಿ ವಿಜೃಂಭಿಸಲು ಒಡಲ ತುಂಬಿಕೊಂಡಿತು
ಹುಣ್ಣಿಮೆ ಎಲ್ಲೆಲ್ಲೂ ರಸಪಾಕ ಕುದಿಯ
ಪರಿಮಳದ ಹಾದಿ ಹರವಿಕೊಂಡಿತು
ಇಹದ ಕೊಳದ ತುಂಬ ಕೆಂದಾವರೆ
ಅರಳಿತು ಮಣ್ಣ ತುಂಬೆಲ್ಲಾ ಹೊನ್ನು ಹಳದಿ.

ಸಮುದ್ರದ ನೀರೆಲ್ಲಾ ತಾಯಿಯ ಎದೆ
ಹಾಲಾಗಿ ತುಂಬಿದ ಬೆಳಸಿಕಾಳು ಚಿಲ್ಲನೆ
ಚಿಮ್ಮಿಹಾಸಿ ಎಲ್ಲೆಲ್ಲೂ ಆರ್‍ದ್ರತೆಯ ಬೆಳಕು
ಆದಿಯಿಂದ ಅಂತ್ಯದವರೆಗೆ ಅವಳ
ಮಡಿಲು ಸುರಿದ ಭಾವ ತರಂಗದ
ಮಮತೆಯ ರೂಹುಗೊಂಡ ಹಕ್ಕಿ ಹಾಡು ಕವಿತೆ.

ಎಲ್ಲೆ ಮೀರಿದ ಭಾವ ಅರ್ಥ ಐಶ್ವರ್ಯ
ಒಡಲ ಸಿರಿ ಹರಡಿ ಗರಿಗಳ ಗುಂಟ ಹರಿದಗಾಳಿ
ಅದರ ರೊಟ್ಟಿಗೆ ಹರಡಿದ ಹನಿ ಸಿಂಚನ ಇಬ್ಬನಿ
ಬೆಳದಿಂಗಳು ಚಕ್ಕಿ ಮೋಡಗಳು ಇಳಿದು
ಬಂದ ಗರ್ಭ ಸೂಸಿದಳು ತಿಳಿಬೆಳಕು.
ವಸುಂಧರಾ ಈಗ ಭೂಮಿ ತಾಯಿಯಾದಳು
ಎಲ್ಲೆಲ್ಲೂ ಚಿಲಿಪಿಲಿ ಕಂಪನಗಳು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ