ವಸುಂಧರೆ

ನೀಲಿ ಅಂಬರದ ತಿಳಿಬೆಳದಿಂಗಳು
ಸಾವಿರಾರು ಚುಕ್ಕಿ ಮಿನುಗು ತೇಲಿ
ಹಾರಿದ ಬೆಳ್ಳಕ್ಕಿ ಸಾಲಿನಲ್ಲಿ ಮೋಡಗಳು
ಎಚ್ಚರಗೊಂಡು ದಾವಾ ಹರಡಿ ಹರಡಿ
ಪೃಥ್ವಿ ಪುಲಕಗೊಂಡಳು ಬಯಲ ತುಂಬೆಲ್ಲಾ ಹಸಿರು.

ಚಿಗುರು ಸ್ಪರ್ಶಕ್ಕೆ ಮುದಗೊಂಡ ಬೀಜ
ಶಕ್ತಿ ವಿಜೃಂಭಿಸಲು ಒಡಲ ತುಂಬಿಕೊಂಡಿತು
ಹುಣ್ಣಿಮೆ ಎಲ್ಲೆಲ್ಲೂ ರಸಪಾಕ ಕುದಿಯ
ಪರಿಮಳದ ಹಾದಿ ಹರವಿಕೊಂಡಿತು
ಇಹದ ಕೊಳದ ತುಂಬ ಕೆಂದಾವರೆ
ಅರಳಿತು ಮಣ್ಣ ತುಂಬೆಲ್ಲಾ ಹೊನ್ನು ಹಳದಿ.

ಸಮುದ್ರದ ನೀರೆಲ್ಲಾ ತಾಯಿಯ ಎದೆ
ಹಾಲಾಗಿ ತುಂಬಿದ ಬೆಳಸಿಕಾಳು ಚಿಲ್ಲನೆ
ಚಿಮ್ಮಿಹಾಸಿ ಎಲ್ಲೆಲ್ಲೂ ಆರ್‍ದ್ರತೆಯ ಬೆಳಕು
ಆದಿಯಿಂದ ಅಂತ್ಯದವರೆಗೆ ಅವಳ
ಮಡಿಲು ಸುರಿದ ಭಾವ ತರಂಗದ
ಮಮತೆಯ ರೂಹುಗೊಂಡ ಹಕ್ಕಿ ಹಾಡು ಕವಿತೆ.

ಎಲ್ಲೆ ಮೀರಿದ ಭಾವ ಅರ್ಥ ಐಶ್ವರ್ಯ
ಒಡಲ ಸಿರಿ ಹರಡಿ ಗರಿಗಳ ಗುಂಟ ಹರಿದಗಾಳಿ
ಅದರ ರೊಟ್ಟಿಗೆ ಹರಡಿದ ಹನಿ ಸಿಂಚನ ಇಬ್ಬನಿ
ಬೆಳದಿಂಗಳು ಚಕ್ಕಿ ಮೋಡಗಳು ಇಳಿದು
ಬಂದ ಗರ್ಭ ಸೂಸಿದಳು ತಿಳಿಬೆಳಕು.
ವಸುಂಧರಾ ಈಗ ಭೂಮಿ ತಾಯಿಯಾದಳು
ಎಲ್ಲೆಲ್ಲೂ ಚಿಲಿಪಿಲಿ ಕಂಪನಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೪

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…