ವಸುಂಧರೆ

ನೀಲಿ ಅಂಬರದ ತಿಳಿಬೆಳದಿಂಗಳು
ಸಾವಿರಾರು ಚುಕ್ಕಿ ಮಿನುಗು ತೇಲಿ
ಹಾರಿದ ಬೆಳ್ಳಕ್ಕಿ ಸಾಲಿನಲ್ಲಿ ಮೋಡಗಳು
ಎಚ್ಚರಗೊಂಡು ದಾವಾ ಹರಡಿ ಹರಡಿ
ಪೃಥ್ವಿ ಪುಲಕಗೊಂಡಳು ಬಯಲ ತುಂಬೆಲ್ಲಾ ಹಸಿರು.

ಚಿಗುರು ಸ್ಪರ್ಶಕ್ಕೆ ಮುದಗೊಂಡ ಬೀಜ
ಶಕ್ತಿ ವಿಜೃಂಭಿಸಲು ಒಡಲ ತುಂಬಿಕೊಂಡಿತು
ಹುಣ್ಣಿಮೆ ಎಲ್ಲೆಲ್ಲೂ ರಸಪಾಕ ಕುದಿಯ
ಪರಿಮಳದ ಹಾದಿ ಹರವಿಕೊಂಡಿತು
ಇಹದ ಕೊಳದ ತುಂಬ ಕೆಂದಾವರೆ
ಅರಳಿತು ಮಣ್ಣ ತುಂಬೆಲ್ಲಾ ಹೊನ್ನು ಹಳದಿ.

ಸಮುದ್ರದ ನೀರೆಲ್ಲಾ ತಾಯಿಯ ಎದೆ
ಹಾಲಾಗಿ ತುಂಬಿದ ಬೆಳಸಿಕಾಳು ಚಿಲ್ಲನೆ
ಚಿಮ್ಮಿಹಾಸಿ ಎಲ್ಲೆಲ್ಲೂ ಆರ್‍ದ್ರತೆಯ ಬೆಳಕು
ಆದಿಯಿಂದ ಅಂತ್ಯದವರೆಗೆ ಅವಳ
ಮಡಿಲು ಸುರಿದ ಭಾವ ತರಂಗದ
ಮಮತೆಯ ರೂಹುಗೊಂಡ ಹಕ್ಕಿ ಹಾಡು ಕವಿತೆ.

ಎಲ್ಲೆ ಮೀರಿದ ಭಾವ ಅರ್ಥ ಐಶ್ವರ್ಯ
ಒಡಲ ಸಿರಿ ಹರಡಿ ಗರಿಗಳ ಗುಂಟ ಹರಿದಗಾಳಿ
ಅದರ ರೊಟ್ಟಿಗೆ ಹರಡಿದ ಹನಿ ಸಿಂಚನ ಇಬ್ಬನಿ
ಬೆಳದಿಂಗಳು ಚಕ್ಕಿ ಮೋಡಗಳು ಇಳಿದು
ಬಂದ ಗರ್ಭ ಸೂಸಿದಳು ತಿಳಿಬೆಳಕು.
ವಸುಂಧರಾ ಈಗ ಭೂಮಿ ತಾಯಿಯಾದಳು
ಎಲ್ಲೆಲ್ಲೂ ಚಿಲಿಪಿಲಿ ಕಂಪನಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೪

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…