Home / ಲೇಖನ / ವಿಜ್ಞಾನ / ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ

ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ

ವಿಟಾಮಿನ ‘ಸಿ’ ಯು ರಕ್ತದಲ್ಲಿಯ ಸೀಸದ ಪ್ರಮಾಣದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನಗಳಿಂದ ದೃಢಪಟ್ಟಿದೆ. ಅಮೇರಿಕಾ ಪರಿಸರ, ಪರಿಸರ ರಕ್ಷಣಾ ಸಂಸ್ಥೆಯ ಹೊಸ ಅಧ್ಯಯನ ಪ್ರಕಾರ “ಎಸ್ಕಾರ್ಬಿಕ್ ಆಮ್ಲ” (ವಿಟಾಮಿನ್-ಸಿ) ಕಡಿಮೆಯಾಗುವುದು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸೀಸದಿಂದ ಕೂಡಿದ ಧೂಳು, ಸೀಸದಿಂದ ಕೂಡಿದ ಪೆಂಟ್‌ಗಳು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸುತ್ತದೆ. ವೈದ್ಯಕೀಯ ಪ್ರಯೋಗವೊಂದು ವಿಟಾಮಿನ್ – ಸಿ ಮತ್ತು ರಕ್ತದಲ್ಲಿರುವ ಸೀಸದ ಪ್ರಮಾಣದ ಸಂಬಂಧವನ್ನು ದೃಢಗೂಳಿಸಿದೆ. ಆದರೂ 1000 mg ವಿಟಾಮಿನ್-ಸಿಯು, ಧೂಮಪಾನಿಗಳ ರಕ್ತದಲ್ಲಿರುವ ಸೀಸದ ಪ್ರಮಾಣವನ್ನು ಕಡಿಮೆಗೊಳಿಸುತ್ತ ಹೋಗುತ್ತದೆ. ಧೂಮಪಾನವು ವಿಟಾಮಿನ್ ಸಿಯು ಜೈವಿಕ ವಿಭಜನೆಯನ್ನು ಅಧಿಕಗೊಳಿಸವದೇ ಹೆಚ್ಚು, ಇದರಿಂದ ಸೀಸದ ಪ್ರಮಾಣವು ದೇಹ ಸೇರುವುದೆಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಸೀಸದ ಪ್ರಮಾಣವು ದೇಹದಲ್ಲಿ ಹೆಚ್ಚುವುದು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿ ತಲೆನೋವು, ಅನೀಮಿಯಾ, ನೆನಪಿನ ಶಕ್ತಿಕಡಿಮೆಗೊಳಿಸುವಿಕೆ, ಕಿಡ್ನಿ-ರೋಗ, ಹೊಟ್ಟೆ ನೋವು ಮುಂತಾದವುಗಳು ಕಾಣಸಿಕೊಳ್ಳುವ ಸಾಧ್ಯತೆಗಳಿವೆ. ಮಾನವನಲ್ಲಿ ಕೆಲವು ಸಸ್ತನಿಗಳಂತೆ ವಿಟಾಮಿನ್ ‘ಸಿ’ ದೇಹದಲ್ಲಿಯೇ ಉತ್ಪತ್ತಿಯಾಗುವುದಿಲ್ಲ. ಇದು ಆಹಾರದಿಂದಲೇ ಲಭ್ಯವಾಗುತ್ತದೆ. ಧೂಮಪಾನಿಗಳಲ್ಲಿ ೬೦೦ ಮಿ. ಗ್ರಾಂ ಧೂಮಪಾನವಮ್ನ ಸೇವಿಸಿದಾಗ ೧೦೦ ಗ್ರಾಂ ವಿಟಾಮಿನ್ ಸಿ, ಅನ್ನು ಪ್ರತಿದಿನ ತೆಗೆದುಕೊಳ್ಳಬೇಕಾಗುತ್ತದೆ. (ಅದನ್ನು ಆರ್.ಡಿ ಎ. ಅಥವಾ ರೆಕಮಂಡೆಡ್ ಡೈಲಿ ಎಲಿವನ್ಸ್ ಎನ್ನುತ್ತಾರೆ) ಮಕ್ಕಳಿಗೆ ದಿನವೊಂದಕ್ಕೆ ೪೫ ಮಿ.ಗ್ರಾಂ. ವಿಟಾಮಿನ್ ‘ಸಿ’ ಆರೋಗ್ಯಕ್ಕೆ ಒಳ್ಳೆಯದು. ಸಮಗಾತ್ರದ ಕಿತ್ತಳೆ ಹಣ್ಣು ೬೦ ರಿಂದ ೮೦ ಮಿ. ಗ್ರಾ. ವಿಟಾಮಿನ್ ‘ಸಿ’ ಅನ್ನು ಹೊಂದಿರುತ್ತದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...