Home / ಲೇಖನ / ವಿಜ್ಞಾನ / ಮಾನವ ದೇಹ – ವಿಸ್ಮಯಗಳ ಆಗರ

ಮಾನವ ದೇಹ – ವಿಸ್ಮಯಗಳ ಆಗರ

ಮಾನವ ದೇಹಕ್ಕೆ ಸಂಬಂಧಪಟ್ಟ ಕೆಲವು ಆಶ್ಚರ್ಯಕರ ಸಂಗತಿಗಳಿವೆ.

* ನಮ್ಮ ದೇಹದಲ್ಲಿ ಸುಮಾರು ೫ ರಿಂದ ೬ ಲೀಟರ್‌ಗಳಷ್ಟು ರಕ್ತವಿರುತ್ತದೆ. ಅಂದರೆ ನಮ್ಮ ದೇಹದ ೧-೧೩ನೇ ಅಂಶದಷ್ಟು. ರಕ್ತ ನೀರಿಗಿಂತ ೫ ಪಟ್ಟು ದಪ್ಪವಾದ ದ್ರವ. ಅಸ್ಥಿಮಜ್ಜೆ (ಬೋನ್ ಮ್ಯಾರೊ)ಯು ಪ್ರತಿ ಸೆಕೆಂಡಿಗೆ ೧೦,೦೦೦,೦೦೦ ಕೆಂಪು ರಕ್ತಕಣಗಳನ್ನು ತಯಾರಿಸುತ್ತದೆ.

* ಹೃದಯದ ತೂಕ ಕೇವಲ ೨೫೦ ರಿಂದ ೩೦೦ ಗ್ರಾಂನಷ್ಟು. ಅದು ಪ್ರತಿ ನಿಮಿಷಕ್ಕೆ ೭೨ ಬಾರಿ ಬಡಿಯುತ್ತದೆ. ತಾಸಿಗೆ ೪,೫೦೦ ಬಡಿತಗಳು, ದಿನಕ್ಕೆ ೧ ಲಕ್ಷ ಮತ್ತು ವರ್ಷಕ್ಕೆ ೨,೯೪೦ ಮಿಲಿಯನ್. ಹೃದಯದ ಪ್ರತಿಯೊಂದು ಬಡಿತವು ಸುಮಾರು ೭೦ ಗ್ರಾಂನಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಹೀಗೆ ಒಂದು ವರ್ಷದಲ್ಲಿ ೨,೫೫೫ ಟನ್ನಗಳಷ್ಟು! ಹೃದಯವು ಪುನಃ ಪುನಃ ದೇಹದ ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ಪ್ರತಿ ಅರ್ಧ ಗಂಟೆಗೆ ಅದು ಪಂಪ್ ಮಾಡುವ ರಕ್ತದ ಪ್ರಮಾಣ ೨೬೦ ಲೀಟರ್‌ಗಳು. ದಿನಕ್ಕೆ ೧೨,೦೦೦ ಲೀಟರ್‍ಗಳಷ್ಟು. ಹೃದಯವು ರಕ್ತವನ್ನು ೬೦,೦೦೦ ಮೈಲಿಗಳಷ್ಟು ಉದ್ದದ ರಕ್ತನಾಳದಲ್ಲಿ ಪಂಪ್ ಮಾಡುತ್ತದೆ. ಈ ರಕ್ತನಾಳಗಳನ್ನು ಒಂದಾದ ನಂತರ ಒಂದರಂತೆ ಜೋಡಿಸಿದರೆ ಭೂಮಿಗೆ ಎರಡೂವರೆ ಸಲ ಪ್ರದಕ್ಷಿಣೆ ಹಾಕಬಹುದು!

* ನಮ್ಮ ದೇಹವು ೭೨,೦೦೦ ನರಗಳನ್ನು ಹೊಂದಿದೆ.

* ಸಾಧಾರಣ ಉಸಿರಾಟದ ಮೂಲಕ ಒಬ್ಬ ಮನುಷ್ಯನು ೫೦೦ ಮಿ.ಲೀ.ನಷ್ಟು ಗಾಳಿಯನ್ನು ತೆಗೆದುಕೊಳ್ಳುತ್ತಾನೆ. ದೀರ್ಘ ಉಸಿರಾಡುವಾಗ ೧,೫೦೦ ರಿಂದ ೨,೦೦೦ ಮಿ.ಲೀ.ನಷ್ಟು ಗಾಳಿಯನ್ನು ತೆಗೆದುಕೊಳ್ಳುತ್ತಾನೆ. ನಾವು ದಿನಂಪ್ರತಿ ೨೬,೦೦೦ ಸಲ ಉಸಿರಾಡುತ್ತೇವೆ.

* ನಮ್ಮ ದೇಹದಲ್ಲಿರುವ ಎಲುಬುಗಳ ಸಂಖ್ಯೆ ೨೦೬.

* ನಮ್ಮ ಮೆದುಳಿನ ತೂಕ ೧,೨೬೦ ರಿಂದ ೧,೩೮೦ ಗ್ರಾಂನಷ್ಟು. ನವಜಾತ ಶಿಶುಗಳ ಮೆದುಳಿನ ತೂಕ ೩೭೦ರಿಂದ ೪೦೦ ಗ್ರಾಂ ನಷ್ಟು. ಅದು ದೇಹದ ೧-೧೫ನೇ ಅಂಶ. ಇದು ೧೦ ಬಿಲಿಯನ್‌ಗಿಂತಲೂ ಹೆಚ್ಚಿನ ನರ್ವ್‌ಪಲ್ಸ್‌ಗಳಿಂದ ಮತ್ತು ೯,೦೦೦,೦೦೦,೦೦೦ ಜೀವಾಣು (ಸೆಲ್ಸ್) ಗಳಿಂದ ಮಾಡಲ್ಪಟ್ಟಿದೆ. ನಾವು ಉಸಿರಾಡುವ ಆಮ್ಲಜನಕದ ೧-೫ನೇ ಅಂಶ ಮತ್ತು ದೇಹ ಹೀರಿಕೊಳ್ಳುವ ಒಟ್ಟು ಕ್ಯಾಲರಿ ಶಕ್ತಿಯ ೧-೫ ನೇ ಅಂಶವನ್ನು ಹೀರುತ್ತದೆ. ಮೆದುಳಿನ ಶೇಕಡಾ ೮೫ರಷ್ಟು ಭಾಗ ನೀರಿನಿಂದ ಕೂಡಿದೆ. ದಿನವೊಂದರಲ್ಲಿ ಮೆದುಳು ನೆನಪಿಡುವ ಮಿತಿ ೮೬ ಮಿಲಿಯನ್‌ಗಳಷ್ಟು. ಮೆದುಳಿಗೆ ಬೂದಿ ಬಣ್ಣದ ಸುಕ್ಕುಗಟ್ಟಿದ ಹೊದಿಕೆ (ಮೆನಿನ್ಂಗಸ್) ಇದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...