Home / ಕವನ / ಕವಿತೆ / ಋತುಗೀತೆ

ಋತುಗೀತೆ

ದೀಪ ಹಚ್ಚುವ ಈ ಕತ್ತಲಲ್ಲಿ
ಮೂಲೆ ಮನೆಯಿಂದ ಪಾರಿಜಾತ ಗಂಧ
ಬಗಲು ಮನೆಯಿಂದ ಸಂಪಿಗೆ ಸುಗಂಧ
ಗಾಳಿಗೆ ಹರಿದು ಎದೆ ಆಳಕೆ ಇಳಿದ ಪಂಚಮಿ ಜೋಕಾಲಿ

ಕವಿತೆಗಳ ಬೆಚ್ಚಗೆ ಹೊಂಗಿರಣಗಳ ಸಾಲು
ಹಿಡಿದು ಹೂಮಾಲೆಯಗುಂಟ ಸಾಗಿ ಕೆತ್ತಿದ
ಕನಸುಗಳ ಮೂರ್ತಿಯಿಂದ ಅವನ ಬಿಂಬ
ಕಣ್ಣ ರೆಪ್ಪೆಯಲ್ಲಿ ಪ್ರತಿಬಿಂಬ ಬಣ್ಣದ ಗಣಪನ ಸಾಲು.

ಮಬ್ಬು ಹರಿದ ಕಬ್ಬಿಣ ಇಬ್ಬನಿ ಸಾಲಿನಲ್ಲಿ
ರೆಕ್ಕೆ ಬಡಿದುಕೊಂಡ ಬೆಳ್ಳಕ್ಕಿ ಹಿಂಡು ಹಾರಿ ಹಾರಿ
ನೀಲ ಬಾನತುಂಬ ಗಾಳಿಪಟವಾಗಿ ಇರುಳಿನ
ಜಾಗರಣೆಯಲ್ಲಿ ಉಲ್ಲಾಸ ಸಡಗರದ ದೀಪಾವಳಿಯ ದೀಪಗಳು.

ಹನಿ ಹನಿ ಹಾಸುಬಿಸಿನ ದಿಗಂತ
ಪ್ರೇಮ ಕಾವ್ಯ ನದಿ ಹರಿದು
ಬಯಲತುಂಬ ಹಸಿರು ಪಲ್ಲಕ್ಕಿ ಸಸಿ ಮೂಡಿದ ಗರ್ಭದಲ್ಲಿ
ನವಮಾಸದ ಸಂಭ್ರಮ ಅರಳಿದ ನವರಾತ್ರಿ ನೃತ್ಯ.

ಬೆಳದಿಂಗಳ ಸ್ನಾನದಲ್ಲಿ ಮೈಮರೆಸಿ
ಸೂರ್ಯನೊಂದಿಗೆ ಸಪ್ತಪದಿ ತುಳಿದು
ಬಣ್ಣದೋಕುಳಿ ಕೋಗಿಲೆ ಗಾನ ಬದುಕು ತುಂಬ
ನವದಂಪತಿ ಉಲ್ಲಾಸ ಪ್ರತಿ ಹಕ್ಕಿ ಕೊರಳಿಗೆ ಯುಗಾದಿ ಸಂಭ್ರಮ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...