ಮರೆಯಲಾರೆ ಎನ್ನರಸ

ಮರೆಯಲಾರೆ ಎನ್ನರಸ
ಮರೆಯದಿರು ಎನ್ನ
ಮರೆತಂತೆ ಭಾವನೆಗಳನು||

ಕನಸಿನ ಹಗಲಿರುಳಲ್ಲಿ
ಸುಂದರ ನೆನಪುಗಳ ತೀಡಿ
ಸೆರೆಯಾದ ಭಾವ ಜೀವವ
ಕದಡಿ ಕಾಡುವೆ ಏಕೆ ಹಗಲಿರುಳು||

ಮುಂಜಾನೆಯಂಗಳದೆ
ಬಾನಂಚಿನ ಬಣ್ಣ ಧರೆಗೆ
ಮುಖ ಚೆಲ್ಲಿದಾಗ ಮನವ
ಕದಡಿ ಕಾಡುವೆ ಏಕೆ ಹಗಲಿರುಳು||

ಸಿಕ್ಕು ಹಿಡಿದಾ ಬಲೆಯ
ದುಃಖ ದುಮ್ಮಾನ ಕಳೆಯ
ಬಿಡಿಸಿ ಜೋಪಾನವಾಗಿಸಿ
ಕದಡಿ ಕಾಡುವೆ ಏಕೆ ಹಗಲಿರುಳು||

ಮಿಡಿವ ತುಡಿವ ಮೌನ
ಗಾನದೆದೆಯಲ್ಲಿ ಝೇಂಕರಿಸಿ
ಭೃಂಗ ನರ್‍ತಿಸಿ ಸೆಳೆದಾಗ ಮನ
ಕದಡಿ ಕಾಡುವೆ ಏಕೆ ಹಗಲಿರುಳು||

ತಳಿರು ತೋರಣ
ಸುಖಾಗಮನ ಅನುಪಮದೊಲುಮೆ
ರಮೆ ಉಮೆಯರ ಕದ್ದು ಎನ್ನ
ಕದಡಿ ಕಾಡುವೆ ಏಕೆ ಹಗಲಿರುಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ
Next post ರಸಿಕತೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys