ಮರೆಯಲಾರೆ ಎನ್ನರಸ

ಮರೆಯಲಾರೆ ಎನ್ನರಸ
ಮರೆಯದಿರು ಎನ್ನ
ಮರೆತಂತೆ ಭಾವನೆಗಳನು||

ಕನಸಿನ ಹಗಲಿರುಳಲ್ಲಿ
ಸುಂದರ ನೆನಪುಗಳ ತೀಡಿ
ಸೆರೆಯಾದ ಭಾವ ಜೀವವ
ಕದಡಿ ಕಾಡುವೆ ಏಕೆ ಹಗಲಿರುಳು||

ಮುಂಜಾನೆಯಂಗಳದೆ
ಬಾನಂಚಿನ ಬಣ್ಣ ಧರೆಗೆ
ಮುಖ ಚೆಲ್ಲಿದಾಗ ಮನವ
ಕದಡಿ ಕಾಡುವೆ ಏಕೆ ಹಗಲಿರುಳು||

ಸಿಕ್ಕು ಹಿಡಿದಾ ಬಲೆಯ
ದುಃಖ ದುಮ್ಮಾನ ಕಳೆಯ
ಬಿಡಿಸಿ ಜೋಪಾನವಾಗಿಸಿ
ಕದಡಿ ಕಾಡುವೆ ಏಕೆ ಹಗಲಿರುಳು||

ಮಿಡಿವ ತುಡಿವ ಮೌನ
ಗಾನದೆದೆಯಲ್ಲಿ ಝೇಂಕರಿಸಿ
ಭೃಂಗ ನರ್‍ತಿಸಿ ಸೆಳೆದಾಗ ಮನ
ಕದಡಿ ಕಾಡುವೆ ಏಕೆ ಹಗಲಿರುಳು||

ತಳಿರು ತೋರಣ
ಸುಖಾಗಮನ ಅನುಪಮದೊಲುಮೆ
ರಮೆ ಉಮೆಯರ ಕದ್ದು ಎನ್ನ
ಕದಡಿ ಕಾಡುವೆ ಏಕೆ ಹಗಲಿರುಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ
Next post ರಸಿಕತೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…