ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು

ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ||

ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ
ಆತ್ಮಸಾಗರ ತುಂಬ ಓಂಕಾರವೊ
ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ
ಶಿವನ ಸಾಗರ ತುಂಬ ಝೇಂಕಾರವೊ

ಓ ನೋಡು ಈ ಕಾಡು ಈ ಹಸಿರು ಈ ಹೂವು
ಓಂಕಾರ ಗಾನದಲಿ ಮೀಯುತ್ತಿವೆ
ಲಕ್ಷ ಪಕ್ಷಿಯ ಕಂಠ ವೃಕ್ಷ ರಾಜಿಯ ಪೀಠ
ಎಲ್ಲೆಲ್ಲು ಶಿವಗೀತ ಚಿಮ್ಮುತ್ತಿದೆ

ಓ ಧೀರ ದೇವಾತ್ಮ ಓ ಸಿದ್ಧ ಪೂತಾತ್ಮ
ಜೀಕಯ್ಯ ಜೋಕಾಲಿ ಶೂನ್ಯದೊಳಗೆ
ಮುನಿಯದಿರು ದೈವಕ್ಕೆ ಮರುಗದಿರು ಮೋಹಕ್ಕೆ
ನೀನಾಗು ನರಸಿಂಹ ಆತ್ಮದೊಳಗೆ

ಕಣ್ಣೊಳಗೆ ಕೂಸಾಗು ಕರುಣೆಯಲಿ ಶಿಶುವಾಗು
ನಿನ್ನೆದೆಯ ಹೂದೋಟ ಹಿಗ್ಗಿ ಸುರಿಸು
ಉಸಿರೊಳಗೆ ರಸವಾಗು ರಸದೊಳಗೆ ಋಷಿಯಾಗು
ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಸುಗೆ
Next post ಮನುಷ್ಯತ್ವವೇ ಇಲ್ಲದ ದೇವರು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys