ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು

ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ||

ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ
ಆತ್ಮಸಾಗರ ತುಂಬ ಓಂಕಾರವೊ
ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ
ಶಿವನ ಸಾಗರ ತುಂಬ ಝೇಂಕಾರವೊ

ಓ ನೋಡು ಈ ಕಾಡು ಈ ಹಸಿರು ಈ ಹೂವು
ಓಂಕಾರ ಗಾನದಲಿ ಮೀಯುತ್ತಿವೆ
ಲಕ್ಷ ಪಕ್ಷಿಯ ಕಂಠ ವೃಕ್ಷ ರಾಜಿಯ ಪೀಠ
ಎಲ್ಲೆಲ್ಲು ಶಿವಗೀತ ಚಿಮ್ಮುತ್ತಿದೆ

ಓ ಧೀರ ದೇವಾತ್ಮ ಓ ಸಿದ್ಧ ಪೂತಾತ್ಮ
ಜೀಕಯ್ಯ ಜೋಕಾಲಿ ಶೂನ್ಯದೊಳಗೆ
ಮುನಿಯದಿರು ದೈವಕ್ಕೆ ಮರುಗದಿರು ಮೋಹಕ್ಕೆ
ನೀನಾಗು ನರಸಿಂಹ ಆತ್ಮದೊಳಗೆ

ಕಣ್ಣೊಳಗೆ ಕೂಸಾಗು ಕರುಣೆಯಲಿ ಶಿಶುವಾಗು
ನಿನ್ನೆದೆಯ ಹೂದೋಟ ಹಿಗ್ಗಿ ಸುರಿಸು
ಉಸಿರೊಳಗೆ ರಸವಾಗು ರಸದೊಳಗೆ ಋಷಿಯಾಗು
ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಸುಗೆ
Next post ಮನುಷ್ಯತ್ವವೇ ಇಲ್ಲದ ದೇವರು

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…