ಮನುಷ್ಯತ್ವವೇ ಇಲ್ಲದ ದೇವರು

ಸರಿಯಪ್ಪಾ ಕೃಷ್ಣ ಪರಮಾತ್ಮ
ಇದೇನಿದು ಆ ರಾಮ ನೋಡಿದರೆ ಮರದ ಮರೆಯಲ್ಲಿ ನಿಂತು
ಬಾಣ ಬಿಡೋದು: ನೀನು ನೋಡಿದರೆ
ಇದ್ದಕ್ಕಿದ್ದಂತೆ ಹೇಳ್ದೆ ಕೇಳ್ದೆ ಚಕ್ರ ಬೀಸಿ
ಯಾರನ್ನಾದರವರ್ನ ಕೊಂದೇಬಿಡೋದು
ಇದೆಲ್ಲಾ ಯಾವ ಧರ್ಮ? ಯಾವ ಯುದ್ಧ?
ಯಾವುದೋ ಓಬಿರಾಯನ ಕಾಲದ ಪುರಾಣಿಕರ ಮಾತ
ಕೇಳ್ಕೊಂಡು
ನೀನು ದೇವರು, ಏನ್ಬೇಕಾದರೂ ಮಾಡಬಹುದೂಂತ
ಬೀಗಬೇಡ: ಈಗ ಕಾಲ ಬದಲಾಗಿದೆ, ನಮ್ಮ ಸಿದ್ಧಯ್ಯ ಪುರಾಣಿಕರು
ಹೇಳಿರೋ ಮಾತಕೇಳು “ಏನಾದರೂ ಆಗು ಮೊದಲು
ಮಾನವನಾಗು”
ನಾವೇನೋ ಹುಲುಮಾನವರು ಸರಿ; ಆದರೆ ನೀನು ಸ್ವಲ್ಪವೂ
ಮನುಷ್ಯತ್ವವೇ ಇಲ್ಲದ ದೇವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು
Next post ಎಷ್ಟೊಂದು ಗುಟ್ಟುಗಳು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys