ಕಲ್ಯಾಣ

ಜೀವನ ಜೀವನ ಗಂಟು ಹಾಕುವ
ಭಾವವೇ ಕಲ್ಯಾಣವು
ಪ್ರಣಯಿಗಳು ನಿರ್ಮಲದಿ ನಲಿವುದೆ
ಮುಕ್ತಿಗದು ಸೋಪಾನವು

ಸೃಷ್ಟಿ ಇದು ಬಹು ಪಾತ್ರಗಳು ತು-
ಬಿರುವ ನಾಟಕ ರಂಗವು
ಸೂತ್ರಧಾರಿಯು ನಟಿಯು ಪ್ರಥಮದಿ
ಬರುವುದೇ ಕಲ್ಯಾಣವು

ಸತ್ಯವನು ಅನುಸರಿಸುವುದೆ ಈ
ನಾಟಕದ ಪರಮಾರ್ಥವು
ನೀತಿಮಾರ್ಗದಿ ವಿಜಯ ಹೊಂದುವ
ನ್ಯಾಸವೇ ಕಲ್ಯಾಣವು

ತತ್ವವೆಲ್ಲವು ದಾಂಪತ್ಯದಿ
ಆಳವನು ಹೊಕ್ಕಂತೆ ದೊರೆವುದು
ಸವಿ ಮಧುವು ಕಲ್ಯಾಣದಿ

ಎರಡನೊಂದಾಗಿಸುವ ಸಂಗಮ
ಕ್ಷೇತ್ರವೀ ಸಂಸಾರವು
ದ್ವೈತದೊಳಗದ್ವೈತ ಮಹಿಮೆಯ
ತಿಳಿವುದೇ ಕಲ್ಯಾಣವು

ತಾನ ತಾನದ ಲಹರಿ ಎಬ್ಬಿಸಿ
ತೂರಿರೈ ನವವಧುಗಳೆ!
ಕುಲುಕಿ ಬಳುಕುತ ನೃತ್ಯಮಾಡಿರಿ
ಪ್ರಕೃತಿದೇವಿಯ ಮಡಿಲೊಳು

ಬಾಸಿಗದ ಮದುವಣಿಗರನು ಶುಭ
ವೆಂದು ಹರಸುತ ಮುದದೊಳು
ಮದುವೆ ಹಂದರದೊಳಗೆ ಜನಕಜೆ
ಇಂತು ಮಂಗಳವೆಂದಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಚಿಕೆಯೆ ಹೀಗೇಕೆ ಹಗೆಯಾಯಿತು
Next post ಆಸೆ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys