Home / ಕವನ / ಕವಿತೆ / ಕಲ್ಯಾಣ

ಕಲ್ಯಾಣ

ಜೀವನ ಜೀವನ ಗಂಟು ಹಾಕುವ
ಭಾವವೇ ಕಲ್ಯಾಣವು
ಪ್ರಣಯಿಗಳು ನಿರ್ಮಲದಿ ನಲಿವುದೆ
ಮುಕ್ತಿಗದು ಸೋಪಾನವು

ಸೃಷ್ಟಿ ಇದು ಬಹು ಪಾತ್ರಗಳು ತು-
ಬಿರುವ ನಾಟಕ ರಂಗವು
ಸೂತ್ರಧಾರಿಯು ನಟಿಯು ಪ್ರಥಮದಿ
ಬರುವುದೇ ಕಲ್ಯಾಣವು

ಸತ್ಯವನು ಅನುಸರಿಸುವುದೆ ಈ
ನಾಟಕದ ಪರಮಾರ್ಥವು
ನೀತಿಮಾರ್ಗದಿ ವಿಜಯ ಹೊಂದುವ
ನ್ಯಾಸವೇ ಕಲ್ಯಾಣವು

ತತ್ವವೆಲ್ಲವು ದಾಂಪತ್ಯದಿ
ಆಳವನು ಹೊಕ್ಕಂತೆ ದೊರೆವುದು
ಸವಿ ಮಧುವು ಕಲ್ಯಾಣದಿ

ಎರಡನೊಂದಾಗಿಸುವ ಸಂಗಮ
ಕ್ಷೇತ್ರವೀ ಸಂಸಾರವು
ದ್ವೈತದೊಳಗದ್ವೈತ ಮಹಿಮೆಯ
ತಿಳಿವುದೇ ಕಲ್ಯಾಣವು

ತಾನ ತಾನದ ಲಹರಿ ಎಬ್ಬಿಸಿ
ತೂರಿರೈ ನವವಧುಗಳೆ!
ಕುಲುಕಿ ಬಳುಕುತ ನೃತ್ಯಮಾಡಿರಿ
ಪ್ರಕೃತಿದೇವಿಯ ಮಡಿಲೊಳು

ಬಾಸಿಗದ ಮದುವಣಿಗರನು ಶುಭ
ವೆಂದು ಹರಸುತ ಮುದದೊಳು
ಮದುವೆ ಹಂದರದೊಳಗೆ ಜನಕಜೆ
ಇಂತು ಮಂಗಳವೆಂದಳು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...