ಕಲ್ಯಾಣ

ಜೀವನ ಜೀವನ ಗಂಟು ಹಾಕುವ
ಭಾವವೇ ಕಲ್ಯಾಣವು
ಪ್ರಣಯಿಗಳು ನಿರ್ಮಲದಿ ನಲಿವುದೆ
ಮುಕ್ತಿಗದು ಸೋಪಾನವು

ಸೃಷ್ಟಿ ಇದು ಬಹು ಪಾತ್ರಗಳು ತು-
ಬಿರುವ ನಾಟಕ ರಂಗವು
ಸೂತ್ರಧಾರಿಯು ನಟಿಯು ಪ್ರಥಮದಿ
ಬರುವುದೇ ಕಲ್ಯಾಣವು

ಸತ್ಯವನು ಅನುಸರಿಸುವುದೆ ಈ
ನಾಟಕದ ಪರಮಾರ್ಥವು
ನೀತಿಮಾರ್ಗದಿ ವಿಜಯ ಹೊಂದುವ
ನ್ಯಾಸವೇ ಕಲ್ಯಾಣವು

ತತ್ವವೆಲ್ಲವು ದಾಂಪತ್ಯದಿ
ಆಳವನು ಹೊಕ್ಕಂತೆ ದೊರೆವುದು
ಸವಿ ಮಧುವು ಕಲ್ಯಾಣದಿ

ಎರಡನೊಂದಾಗಿಸುವ ಸಂಗಮ
ಕ್ಷೇತ್ರವೀ ಸಂಸಾರವು
ದ್ವೈತದೊಳಗದ್ವೈತ ಮಹಿಮೆಯ
ತಿಳಿವುದೇ ಕಲ್ಯಾಣವು

ತಾನ ತಾನದ ಲಹರಿ ಎಬ್ಬಿಸಿ
ತೂರಿರೈ ನವವಧುಗಳೆ!
ಕುಲುಕಿ ಬಳುಕುತ ನೃತ್ಯಮಾಡಿರಿ
ಪ್ರಕೃತಿದೇವಿಯ ಮಡಿಲೊಳು

ಬಾಸಿಗದ ಮದುವಣಿಗರನು ಶುಭ
ವೆಂದು ಹರಸುತ ಮುದದೊಳು
ಮದುವೆ ಹಂದರದೊಳಗೆ ಜನಕಜೆ
ಇಂತು ಮಂಗಳವೆಂದಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಚಿಕೆಯೆ ಹೀಗೇಕೆ ಹಗೆಯಾಯಿತು
Next post ಆಸೆ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…