ಆಸೆ

ಬೆಳಗಾಗುವ ಮೊದಲೇ
ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ

ಬೆಳಗಿನ ಬೆಳಕು ಹೊರಲು ಅನುವಾಗುತಿದೆ
ನೋವು ದುಃಖದುಮ್ಮಾನಗಳಬ್ಬರ
ಎಲ್ಲರೆದೆಯೊಳಗೆ ಬಗೆ ಬಗೆಯ ಚಿತ್ತಾರ
ಎಲ್ಲ ಕಡೆಗೂ ಹೊತ್ತಿದೆ ಹಬ್ಬಿದೆ ತಾತ್ಸಾರ
ಕನಸಾಗಿ ಚಿಗುರುವ ಮನಸುಗಳಿಗೆಲ್ಲೆಲ್ಲೂ
ಸುಡು ಸುಡುತ ಕಾಡುತಿದೆ ಉರಿಬಿಸಿಲು
ಮಳೆಗೆ ಬೆಂಕಿಹತ್ತಿ ಉರಿಯುತಿದೆ
ಆಸೆಯ ಬೆನ್ನೇರಿದ ಓಟದ ಲಹರಿಗೆ-

ಗುಡಿಯ ಗಂಟೆ ಬಾರಿಸುತ ಕರೆಯುತಿದೆ
ಬನ್ನಿರೂಮ್ಮೆ ಒಳಗೆ ಜಗದ ಪರಿಯಬಿಟ್ಟು
ದೀಪದ ಕುಡಿ ನಗುನಗುತ ಮಾತನಾಡಿಸುತಿದೆ
ಯಾಕಿಷ್ಟೊಂದು ತರಾತುರಿ ಎಲ್ಲಿ ಹೋಗುವಿರೆಂದು-

ತಂಪುಹುಲ್ಲಿನ ಮೇಲೆ ಮಲಗಿ
ಚಂದಿರನ ನೋಡುತ ಚಿಂತೆಗಳ ಮರೆಯುವಾಸೆ
ಕತ್ತಲೆಯ ನಿರಮ್ಮಳ ರಾತ್ರಿಯಲಿ
ಎಲ್ಲವನೂ ಮರೆತು ಒಂದಿಷ್ಟು ನಿದ್ರಿಸುವಾಸೆ.

ಬೆಳಗಾಗುವ ಮೊದಲೇ
ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...