ಆಸೆ

ಬೆಳಗಾಗುವ ಮೊದಲೇ
ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ

ಬೆಳಗಿನ ಬೆಳಕು ಹೊರಲು ಅನುವಾಗುತಿದೆ
ನೋವು ದುಃಖದುಮ್ಮಾನಗಳಬ್ಬರ
ಎಲ್ಲರೆದೆಯೊಳಗೆ ಬಗೆ ಬಗೆಯ ಚಿತ್ತಾರ
ಎಲ್ಲ ಕಡೆಗೂ ಹೊತ್ತಿದೆ ಹಬ್ಬಿದೆ ತಾತ್ಸಾರ
ಕನಸಾಗಿ ಚಿಗುರುವ ಮನಸುಗಳಿಗೆಲ್ಲೆಲ್ಲೂ
ಸುಡು ಸುಡುತ ಕಾಡುತಿದೆ ಉರಿಬಿಸಿಲು
ಮಳೆಗೆ ಬೆಂಕಿಹತ್ತಿ ಉರಿಯುತಿದೆ
ಆಸೆಯ ಬೆನ್ನೇರಿದ ಓಟದ ಲಹರಿಗೆ-

ಗುಡಿಯ ಗಂಟೆ ಬಾರಿಸುತ ಕರೆಯುತಿದೆ
ಬನ್ನಿರೂಮ್ಮೆ ಒಳಗೆ ಜಗದ ಪರಿಯಬಿಟ್ಟು
ದೀಪದ ಕುಡಿ ನಗುನಗುತ ಮಾತನಾಡಿಸುತಿದೆ
ಯಾಕಿಷ್ಟೊಂದು ತರಾತುರಿ ಎಲ್ಲಿ ಹೋಗುವಿರೆಂದು-

ತಂಪುಹುಲ್ಲಿನ ಮೇಲೆ ಮಲಗಿ
ಚಂದಿರನ ನೋಡುತ ಚಿಂತೆಗಳ ಮರೆಯುವಾಸೆ
ಕತ್ತಲೆಯ ನಿರಮ್ಮಳ ರಾತ್ರಿಯಲಿ
ಎಲ್ಲವನೂ ಮರೆತು ಒಂದಿಷ್ಟು ನಿದ್ರಿಸುವಾಸೆ.

ಬೆಳಗಾಗುವ ಮೊದಲೇ
ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲ್ಯಾಣ
Next post ಎಲ್ಲರೂ ಮಾಡುವುದು ಒಂದೇ?

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys