ಸಾವಿರ ಬಗೆಯಲಿ ಸಾಗುತಿದೆ

ಸಾವಿರ ಬಗಯಲಿ ಸಾಗುತಿದೆ
ಸ್ವಾತಂತ್ರ್ಯದ ಲಾಸ್ಯ,
ಬಾನು ಬುವಿಯೂ ಬರೆಯುತಿವೆ
ಸಿರಿಬೆಳಕಿನ ಭಾಷ್ಯ.

ಒಣಗಿದ ಮರದಲಿ ಸಾಗುವ ಚೈತ್ರನ
ಚಿಗುರಿನ ದಾಳಿಯಲಿ,
ಮುಗಿಲ ಬಾಗಿಲ ಸರಿಸಿ ಸುರಿಯುವಾ
ನಿರ್ಮಲ ಧಾರೆಯಲಿ,
ಕಾಷ್ಠದ ಸೆರೆಯಲ್ಲಿ
ಕುದಿಯುತ ಮರೆಯಲ್ಲಿ
ಭಗ್ಗನೆ ಬಂಧನ ಭೇದಿಸುವಾ
ಕೆರಳಿದ ಜ್ವಾಲೆಯಲಿ.

ಬೆಳಗು ಬಾನಿನಲಿ ಹೊನ್ನಿನ ಬಿಂಬ
ಹಚ್ಚಿದೆ ಸಿರಿಹಣತೆ,
ಹಕ್ಕಿದನಿಗಳೀ ದಿಕ್ಕಿನ ತುಂಬ
ದನಿಯೊಡದಿದೆ ಕವಿತೆ,
ಅರಳಿದ ಸುಮಸರಣಿ
ಪರಿಮಳದಾ ಭರಣಿ
ವಾಯುಮಂಡಲವ ಘಮಘಮಿಸಿ
ಕೆಂಪಾಗಿದೆ ಧರಣಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಗಬೇಕೆ ಸುಬ್ಬಣ್ಣ
Next post ಚಂಡ ಶಾಸನ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys