ಚಂಡ ಶಾಸನ

ಕಸಕಿಂತ ಕಡೆಯಾಯ್ತೆ
ಹೆಣ್ಣು ಜನ್ಮವು ನಿನಗೆ
ಈ ಭಾರ ಹೊರಿಸುವುದಕೆ

ಲಂಚಕೋರನು ನೀನು
ವಂಚನೆಯ ಮಾಡಿರುವೆ
ಮೃದುತನದ ಸ್ತ್ರೀವರ್ಗಕೆ

ಗಿಡವೆಂದು ಬಗೆದೆಯೋ
ಹೆಣ್ಣು ಜನ್ಮದ ಒಡಲ
ಫಲಗಳನು ಸೃಜಿಸುವುದಕೆ

ಕವಣೆ ಕಲ್ಲೋ ನಿನ್ನ
ಮಾನಸವು ಎಲೆ ದೇವ
ಈ ಕ್ರಮವೆ ಸ್ತ್ರೀವರ್ಗಕೆ?

ಪುಷ್ಪ ಸೃಷ್ಟಿಯನೇನೊ
ಸುಲಭದಿಂ ನೀ ಗೈದೆ
ಅಲ್ಲಿ ಕನಿಕರವು ಬಂತೆ?

ಕುಸುಮಕಿಂತಲು ಮೃದುವು
ಹೆಣ್ಣು ಜನ್ಮವು ಎಂಬ
ಅರಿವೆ ನಿನಗಿಲ್ಲವಾಯ್ತೆ?

ಏನ್ನುಡಿದು ಫಲವೇನು?
ನ್ಯಾಯವಿಲ್ಲದ ಬಳಿಕ
ತೀರುವುದೆ ಈ ಪ್ರಶ್ನೆಯು

ನೀನೆ ಕಾಣದ ಮುನ್ನ
ನಾವು ಮಾಡುವುದೇನು
ಇನ್ನೆಲ್ಲಿ ವಿಶ್ರಾಂತಿಯು?

ಅದಕಾಗಿ ಬಿತ್ತಿದೆಯೊ
ನಿರ್ಗುಣದ ಸುದ್ದಿಯನು
ವನಿತೆಯರಿಗಳುಕಿ ನೀನು

ಅಲ್ಲದೊಡೆ ನೀನೆಮ್ಮ
ಸಂಧಿಯನು ಬಯಸಿದೊಡೆ
ಈ ಸೃಷ್ಟಿ ಉಳಿವುದೇನು?

ಇರಲಿರಲಿ ಈ ಭಾರ-
ಕಳುಕುವರು ನಾವಲ್ಲ
ಅರ್ಜುನನ ಒಕ್ಕಲಲ್ಲ!

ನೆರವಾಗಿ ನಿಂತಿಹೆವು
ಅನುಗಾಲ ನಿನಕೃತಿಗೆ
ಸೋಲಿಗಿಲ್ಲೆಡೆಯಿಲ್ಲವು!

ಕಾಲ ಚಕ್ರವ ಮೆಟ್ಟಿ
ಅಭಿಮಾನಗಳ ತೊರೆದು
ಲೆಕ್ಕಿಸದೆ ಸಾವು ನೋವ

ನಿನ್ನ ಬೆಳಸನು ಅಪ್ಪಿ
ತೊಟ್ಟಿಲೊಳು ಲಾಲಿಸುತ
ಜೋಗುಟ್ಟುತಿಹೆವು ನಾವು

ಬಹುಕಾಲದೆಜಮಾನ
ಬಹುದೊಡ್ಡ ಕೃಷಿಗಾರ
ತೀರದಾರಂಬಗಾರ

ನಿನ್ನ ಗೆಯ್ಮೆಗೆ ಹೆಣ್ಣು
ನೇಗಿಲಿಲ್ಲದ ಮೇಲೆ
ಉಂಟೆ ಈ ಸತ್ಯಸಾರ!

ಅಂತಿರಲಿ ನೀನೇನೊ
ಮುಕ್ತಿದಾಯಕನೆಂಬ
ಸುದ್ದಿ ಹಬ್ಬಿಹುದು ಇಲ್ಲಿ

ದೊಡ್ಡವರ ಮಾತುಗಳೆ
ಸಾಕ್ಷಿಯಾಗಿಹವೆಮಗೆ
ಗ್ರಂಥ ಶೋಧನೆಗಳಲ್ಲಿ!

ವನಿತೆಯರು ಕಾಣುತಿಹ
ಪಾರಮಾರ್ಥಿಕವೆಂಬ
ದೃಷ್ಟಾಂತ ತಾ ಮುಕ್ತಿಯೆ?

ಕಾಯಗಳ ಬಿಟ್ಟೊಡನೆ
ಸಗ್ಗ ದೊರೆಯುವುದೆಂಬ
ಕಥೆಯೊಳುಂಟೇ ಮುಕ್ತಿಯು?

ಹೆಣ್ತನದಿ ತುಂಬಿರುವ
ಮುಕ್ತಿಪಥವೇ ಸಾಕು
ಮತ್ತೊಂದ ಬಯಸಲೇಕೆ?

ಆನಂದ ಒಳಹೊರಗೆ
ತುಂಬಿರಲಿ ಎಂದಿಹಳು
ಜನಕಜೆಯು ಸ್ತ್ರೀವರ್ಗಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ಬಗೆಯಲಿ ಸಾಗುತಿದೆ
Next post ತುಂತುರು ಮಳೆ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys