Home / ಕವನ / ಕವಿತೆ / ಚಂಡ ಶಾಸನ

ಚಂಡ ಶಾಸನ

ಕಸಕಿಂತ ಕಡೆಯಾಯ್ತೆ
ಹೆಣ್ಣು ಜನ್ಮವು ನಿನಗೆ
ಈ ಭಾರ ಹೊರಿಸುವುದಕೆ

ಲಂಚಕೋರನು ನೀನು
ವಂಚನೆಯ ಮಾಡಿರುವೆ
ಮೃದುತನದ ಸ್ತ್ರೀವರ್ಗಕೆ

ಗಿಡವೆಂದು ಬಗೆದೆಯೋ
ಹೆಣ್ಣು ಜನ್ಮದ ಒಡಲ
ಫಲಗಳನು ಸೃಜಿಸುವುದಕೆ

ಕವಣೆ ಕಲ್ಲೋ ನಿನ್ನ
ಮಾನಸವು ಎಲೆ ದೇವ
ಈ ಕ್ರಮವೆ ಸ್ತ್ರೀವರ್ಗಕೆ?

ಪುಷ್ಪ ಸೃಷ್ಟಿಯನೇನೊ
ಸುಲಭದಿಂ ನೀ ಗೈದೆ
ಅಲ್ಲಿ ಕನಿಕರವು ಬಂತೆ?

ಕುಸುಮಕಿಂತಲು ಮೃದುವು
ಹೆಣ್ಣು ಜನ್ಮವು ಎಂಬ
ಅರಿವೆ ನಿನಗಿಲ್ಲವಾಯ್ತೆ?

ಏನ್ನುಡಿದು ಫಲವೇನು?
ನ್ಯಾಯವಿಲ್ಲದ ಬಳಿಕ
ತೀರುವುದೆ ಈ ಪ್ರಶ್ನೆಯು

ನೀನೆ ಕಾಣದ ಮುನ್ನ
ನಾವು ಮಾಡುವುದೇನು
ಇನ್ನೆಲ್ಲಿ ವಿಶ್ರಾಂತಿಯು?

ಅದಕಾಗಿ ಬಿತ್ತಿದೆಯೊ
ನಿರ್ಗುಣದ ಸುದ್ದಿಯನು
ವನಿತೆಯರಿಗಳುಕಿ ನೀನು

ಅಲ್ಲದೊಡೆ ನೀನೆಮ್ಮ
ಸಂಧಿಯನು ಬಯಸಿದೊಡೆ
ಈ ಸೃಷ್ಟಿ ಉಳಿವುದೇನು?

ಇರಲಿರಲಿ ಈ ಭಾರ-
ಕಳುಕುವರು ನಾವಲ್ಲ
ಅರ್ಜುನನ ಒಕ್ಕಲಲ್ಲ!

ನೆರವಾಗಿ ನಿಂತಿಹೆವು
ಅನುಗಾಲ ನಿನಕೃತಿಗೆ
ಸೋಲಿಗಿಲ್ಲೆಡೆಯಿಲ್ಲವು!

ಕಾಲ ಚಕ್ರವ ಮೆಟ್ಟಿ
ಅಭಿಮಾನಗಳ ತೊರೆದು
ಲೆಕ್ಕಿಸದೆ ಸಾವು ನೋವ

ನಿನ್ನ ಬೆಳಸನು ಅಪ್ಪಿ
ತೊಟ್ಟಿಲೊಳು ಲಾಲಿಸುತ
ಜೋಗುಟ್ಟುತಿಹೆವು ನಾವು

ಬಹುಕಾಲದೆಜಮಾನ
ಬಹುದೊಡ್ಡ ಕೃಷಿಗಾರ
ತೀರದಾರಂಬಗಾರ

ನಿನ್ನ ಗೆಯ್ಮೆಗೆ ಹೆಣ್ಣು
ನೇಗಿಲಿಲ್ಲದ ಮೇಲೆ
ಉಂಟೆ ಈ ಸತ್ಯಸಾರ!

ಅಂತಿರಲಿ ನೀನೇನೊ
ಮುಕ್ತಿದಾಯಕನೆಂಬ
ಸುದ್ದಿ ಹಬ್ಬಿಹುದು ಇಲ್ಲಿ

ದೊಡ್ಡವರ ಮಾತುಗಳೆ
ಸಾಕ್ಷಿಯಾಗಿಹವೆಮಗೆ
ಗ್ರಂಥ ಶೋಧನೆಗಳಲ್ಲಿ!

ವನಿತೆಯರು ಕಾಣುತಿಹ
ಪಾರಮಾರ್ಥಿಕವೆಂಬ
ದೃಷ್ಟಾಂತ ತಾ ಮುಕ್ತಿಯೆ?

ಕಾಯಗಳ ಬಿಟ್ಟೊಡನೆ
ಸಗ್ಗ ದೊರೆಯುವುದೆಂಬ
ಕಥೆಯೊಳುಂಟೇ ಮುಕ್ತಿಯು?

ಹೆಣ್ತನದಿ ತುಂಬಿರುವ
ಮುಕ್ತಿಪಥವೇ ಸಾಕು
ಮತ್ತೊಂದ ಬಯಸಲೇಕೆ?

ಆನಂದ ಒಳಹೊರಗೆ
ತುಂಬಿರಲಿ ಎಂದಿಹಳು
ಜನಕಜೆಯು ಸ್ತ್ರೀವರ್ಗಕೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...