Home / ಕವನ / ಕವಿತೆ / ನನ್ ಪುಟ್ನಂಜೀ ರೂಪ

ನನ್ ಪುಟ್ನಂಜೀ ರೂಪ

ಬೇವಾರ್‍ಸಿ! ನನ್ ಪುಟ್ನಂಜೀನ
ರೂಪಾನ್ ಆಡ್ತಿನಿ ಬಾಪ್ಪ!
ನಂಗ್ ಆಗಾಗ್ಗೆ ಆಡೀಸ್ತೈತೆ
ನನ್ ಪುಟ್ನಂಜೀ ರೂಪ! ೧

ಆಲ್ನಲ್ ಕಮಲದ್ ಊ ತೇಲ್ಬುಟ್ಟಿ
ಮೇಲ್ ಒಂದ್ ತೆಳ್ನೆ ಲೇಪ
ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ
ನನ್ ಪುಟ್ನಂಜೀ ರೂಪ! ೨

ಅಮಾಸೇಲಿ ಅತ್ತೀಸ್ದಂಗೆ
ಒಂದ್ ಅತ್ ನೂರ್ ಮತಾಪ
ಬೆಳಕಾಗ್ತೈತೆ ಕಂಡ್ರೆ ನಂಗೆ
ನನ್ ಪುಟ್ನಂಜೀ ರೂಪ! ೩

ಔಸ್ದೀಗ್ ಇಂಕ್ರ ಬೇಕಂದ್ರೂನೆ
ಔಳ್ ತಾವ್ ಇಲ್ಲ ಕೋಪ!
ಅದಕೆ ಅಸ್ಟೊಂದ್ ಚಂದಾಗೈತೆ
ನನ್ ಪುಟ್ನಂಜೀ ರೂಪ! ೪

ನನಗೇನಾರ ಕೋಪ ಬಂದ್ರೆ
ನಂ ನಂ ಪ್ರೀತಿ ನೆಪ್ಪ
ಕರಕೊಂಡ್ ಬಂದಿ ಕೋಪಾನ್ ಇಕ್ತೈತ್
ನನ್ ಪುಟ್ನಂಜೀ ರೂಪ! ೫

ಬಟ್ಟೇ ಕಪ್ಪೀನ್ ತೊಳಿಯಾಕ್ ನಾವು
ಯಂಗಾಕ್ತೀವಿ ಸೋಪ
ಮನಸಿನ್ ಕೆಟ್ ಬಾವನೇಗೊಳ್ಗಂಗೆ
ನನ್ ಪುಟ್ನಂಜೀ ರೂಪ! ೬

ದೇವರ ತಾಕ್ ನಾನ್ ಒಯಾಕಿಲ್ಲ
ಅಣ್ಣು ಕಾಯಿ ದೂಪ!
ದೇವರ್‍ಗ್ ಅಣ್ ಕಾಯ್ ದೂಪ ಎಲ್ಲಾ
ನನ್ ಪುಟ್ನಂಜೀ ರೂಪ! ೭

ಸಿಡಿಯೋ ಮದ್ದಿನ್ ಸುಟ್ಟಾಕ್ದಂಗೆ
ಮಡಗಿದ್ದೇನೆ ಕೇಪ-
ನನ್ ತಾಪತ್ರೇನ್ ಉಡಾಯ್ಸತೈತೆ
ನನ್ ಪುಟ್ನಂಜೀ ರೂಪ! ೮

ಚಿನ್ನದ ಬರಣೀಲ್ ತುಂಬಿಟ್ಟಂಗೆ
ಆಲು ಸಕ್ರೆ ತುಪ್ಪ-
ಒಳ್ಳೇ ಗುಣಗೊಳ್ನ್ ಒಳಗಿಟ್ಟೈತೆ
ನನ್ ಪುಟ್ನಂಜೀ ರೂಪ! ೯

ಪುಟ್ಟಂಜೀನ ಕೈ ಇಡಿದೋನು
ನೀನೆ ಭಲೆ! ಭೂಪ!
ಅಂತ ನಂಗೆ ಬೆನ್ ತಟ್ತೈತೆ
ನನ್ ಪುಟ್ನಂಜೀ ರೂಪ! ೧೦

ದೇವಸ್ತಾನ್ದಾಗ್ ಎಂಗಿರತೈತೆ
ಚಿನ್ನದ್ ನಂದಾದೀಪ
ಅಂಗ್ ನನ್ ಅಟ್ಟೀನ್ ಬೆಳಗಿಸ್ತೈತೆ
ನನ್ ಪುಟ್ನಂಜೀ ರೂಪ! ೧೧

ಇದನ ಕೇಳ್ದೋರ್ ಯಾರಾರ್ ‘ಅಯ್ಯೊ!
ಇವನ್ ಒಬ್ ಉಚ್ಚ! ಪಾಪ!’
ಅಂದೋರ್‍ಗ್ ‘ಅಯ್ಯೋ ಪಾಪಾಂ’ತೈತೆ
ನನ್ ಪುಟ್ನಂಜೀ ರೂಪ! ೧೨
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...