Home / ಲೇಖನ / ಇತರೆ / ಶ್ರಾವಣ

ಶ್ರಾವಣ

‘ಶ್ರಾವಣ’ ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂತಸ ಪುಟಿದೇಳುತ್ತದೆ. ವರ್ಷ ಋತುವಿನ ಮಡಿಲಲ್ಲಿದ್ದ ಶ್ರಾವಣ ಮಾಸ ಮಳೆಯ ನೆನಪಾಗಿಸುತ್ತದೆ. ಹಚ್ಚು ಹಸಿರಾದ ಗಿಡ-ಮರಗಳು, ಬಾವಿ, ಕೆರೆ, ನದಿಗಳು ನೀರಿನಿಂದ ತುಂಬಿಕೊಂಡು ಸಂಭ್ರಮದಿಂದ ಉಸಿರಾಡುವಾಗ ಇಳೆ ಸುಂದರವಾಗಿ ಕಾಣುತ್ತಾಳೆ.

ಶ್ರಾವಣ ಎಂದರೆ ಕೇಳುವಿಕೆಗೆ ಸಂಬಂಧಿಸಿದಂತೆ ಈ ಮಾಸದಲ್ಲಿ ಎಲ್ಲಿ ನೋಡಿದರಲ್ಲಿ ಪೂಜೆ, ಪಠಣ, ಪ್ರವಚನ, ಪುರಾಣ ವಾಚನಗಳು ನಡೆದು ವಸುಂಧರೆಯು ಪೂಜ್ಯನೀಯ ಭಾವದಲ್ಲಿ ಮಡಿವಂತಿಕೆಯಲ್ಲಿ ಕಂಗೊಳಿಸುತ್ತಾಳೆ.

ರೈತರು ಹೊಲಗಳಿಗೆ ಬೆಳೆಗಳಿಗೆ ದರ್ಶಿಸಲು ಉತ್ಸಾಹದಿಂದ ತೆರಳುವಾಗ ಪುಟ್ಟ ಪುಟ್ಟ ಮಕ್ಕಳು ಮೋಡಕ್ಕೆ ರಂದ್ರ ಬಿದ್ದ ಹಾಗೆ ಸುರಿಯುತ್ತಿರುವ ಮಳೆಯಲ್ಲಿ ತೋಯ್ದಿಕೊಂಡು ಅಲೆದಾಡುವುದು ಕಂಡರೆ ಹಬ್ಬದ ವಾತಾವರಣ ಎನಿಸುತ್ತಿದೆ.

ಮಳೆರಾಯ ಮೋಡಗಳ ಮೇಲೆ ಸವಾರಿ ಮಾಡಿ ಎಲ್ಲೆಂದರಲ್ಲಿ ಸುರಿದು ತಂಪನ್ನು ಎಸಗಿ ಗಿಡ-ಮರಗಳಿಗೆ ಜೀವಾಮೃತವಾಗುವಂತೆ ಮೆರೆಯುವನು. ಶ್ರಾವಣ ಸೋಮವಾರ, ಶುಕ್ರವಾರ, ಶನಿವಾರಗಳು ಹಿಂದು ಜನರಿಗೆ ಪವಿತ್ರ ದಿನಗಳಾಗಿ ದೇವರ ದರುಶನಕ್ಕಾಗಿ ಜನರು ಮಂದಿರಗಳಲ್ಲಿ ಸಾಲು ಸಾಲಾಗಿ ಧಾವಿಸುತ್ತಾರೆ.

ಈ ಮಾಸದಲ್ಲಿ ಬರುವ ನಾರಿಯರ ದೊಡ್ಡ ಹಬ್ಬ ನಾಗರ ಪಂಚಮಿಯಂತೂ ಮಹಿಳೆಯರಿಗೆ ಖುಷಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೊಸ ಹೊಸ ಸೀರೆ ಅಂಬರಗಳನ್ನು ತೊಟ್ಟು ಹೂ ಮುಡಿದುಕೊಂಡು ಗುಂಪಾಗಿ ನಾರಿಯರು ನಾಗದೇವನ ಪೂಜೆಗೆ ತೆರಳುವುದಾಗಲಿ, ಮಹಾಲಕ್ಷ್ಮಿಯ ಪೂಜೆ ಮಾಡುವುದಾಗಲಿ, ದೇವ ಮಂದಿರಗಳಲ್ಲಿ ವಿಜೃಂಭಣೆಯಿಂದ ಭಜಿಸುವುದಾಗಲಿ ಲವಲವಿಕೆಗೆ ಪಾತ್ರವಾಗುತ್ತದೆ. ಇದೇ ಮಾಸದಲ್ಲಿ ಬರುವ ರಕ್ಷಾ ಬಂಧನ ಪೂರ್ಣಿಮೆ ಅಣ್ಣ-ತಂಗಿಯರ ಪ್ರೀತಿಗೆ ಹೊಸ ಇತಿಹಾಸ ಬರೆಯುತ್ತದೆ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರ ಸೀರೆಯುಟ್ಟ ವಸುಂಧರೆ ಕಂಗೊಳಿಸುವಾಗ ರೈತರು, ಮಕ್ಕಳು, ಸಂತರು, ಭಕ್ತರು, ಸಾಮಾನ್ಯ ಜನರು ಶ್ರಾವಣ ಮಾಸ ಮೈ ಮನಗಳಲ್ಲಿ ತುಂಬಿಕೊಂಡು ರಮರಮಿಸುತ್ತಾರೆ. ಅಂತಲೆ ಅನೇಕ ಕವಿಗಳು ಶ್ರಾವಣದ ಧಾವಂತವನ್ನು ಎದೆ ತುಂಬಿ ಹಾಡಿದ್ದಾರೆ. ಕವಿ ರಾಮಮೂರ್ತಿಯವರು ಇಂಥ ಶ್ರಾವಣದ ನಿಸರ್ಗ ಕಂಡು

ಚನ್ನಿಗರು ಚಲುವೆಯರು ಕಿಲಕಿಲನೆ ನಗುವ ಬೀರಿ
ತಾವರೆಯ ಮೊಗವರಳಿ ಗೆಯ ಸಿರಿಕಂಪ ಬೀರಿ
ನಾ ಮುಂದು ತಾ ಮುಂದು ಎಂದೆಲ್ಲ ಹಿಗ್ಗಿ ಬರಲು
ಕಾವ್ಯಗಳ ಕಟ್ಟೊಡೆದು ಕನ್ನಡ ಸಾಹಿತ್ಯ ಬೆಳಗಲು…

ಎಂದು ಎದೆ ತುಂಬಿ ಹಾಡಿರುವುದು ನಿಜಕ್ಕೂ ಶ್ರಾವಣದ ಐಸಿರಿ ನಿಸರ್ಗದ ಅಚ್ಚರಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...