ಶ್ರಾವಣ

ಶ್ರಾವಣ

‘ಶ್ರಾವಣ’ ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂತಸ ಪುಟಿದೇಳುತ್ತದೆ. ವರ್ಷ ಋತುವಿನ ಮಡಿಲಲ್ಲಿದ್ದ ಶ್ರಾವಣ ಮಾಸ ಮಳೆಯ ನೆನಪಾಗಿಸುತ್ತದೆ. ಹಚ್ಚು ಹಸಿರಾದ ಗಿಡ-ಮರಗಳು, ಬಾವಿ, ಕೆರೆ, ನದಿಗಳು ನೀರಿನಿಂದ ತುಂಬಿಕೊಂಡು ಸಂಭ್ರಮದಿಂದ ಉಸಿರಾಡುವಾಗ ಇಳೆ ಸುಂದರವಾಗಿ ಕಾಣುತ್ತಾಳೆ.

ಶ್ರಾವಣ ಎಂದರೆ ಕೇಳುವಿಕೆಗೆ ಸಂಬಂಧಿಸಿದಂತೆ ಈ ಮಾಸದಲ್ಲಿ ಎಲ್ಲಿ ನೋಡಿದರಲ್ಲಿ ಪೂಜೆ, ಪಠಣ, ಪ್ರವಚನ, ಪುರಾಣ ವಾಚನಗಳು ನಡೆದು ವಸುಂಧರೆಯು ಪೂಜ್ಯನೀಯ ಭಾವದಲ್ಲಿ ಮಡಿವಂತಿಕೆಯಲ್ಲಿ ಕಂಗೊಳಿಸುತ್ತಾಳೆ.

ರೈತರು ಹೊಲಗಳಿಗೆ ಬೆಳೆಗಳಿಗೆ ದರ್ಶಿಸಲು ಉತ್ಸಾಹದಿಂದ ತೆರಳುವಾಗ ಪುಟ್ಟ ಪುಟ್ಟ ಮಕ್ಕಳು ಮೋಡಕ್ಕೆ ರಂದ್ರ ಬಿದ್ದ ಹಾಗೆ ಸುರಿಯುತ್ತಿರುವ ಮಳೆಯಲ್ಲಿ ತೋಯ್ದಿಕೊಂಡು ಅಲೆದಾಡುವುದು ಕಂಡರೆ ಹಬ್ಬದ ವಾತಾವರಣ ಎನಿಸುತ್ತಿದೆ.

ಮಳೆರಾಯ ಮೋಡಗಳ ಮೇಲೆ ಸವಾರಿ ಮಾಡಿ ಎಲ್ಲೆಂದರಲ್ಲಿ ಸುರಿದು ತಂಪನ್ನು ಎಸಗಿ ಗಿಡ-ಮರಗಳಿಗೆ ಜೀವಾಮೃತವಾಗುವಂತೆ ಮೆರೆಯುವನು. ಶ್ರಾವಣ ಸೋಮವಾರ, ಶುಕ್ರವಾರ, ಶನಿವಾರಗಳು ಹಿಂದು ಜನರಿಗೆ ಪವಿತ್ರ ದಿನಗಳಾಗಿ ದೇವರ ದರುಶನಕ್ಕಾಗಿ ಜನರು ಮಂದಿರಗಳಲ್ಲಿ ಸಾಲು ಸಾಲಾಗಿ ಧಾವಿಸುತ್ತಾರೆ.

ಈ ಮಾಸದಲ್ಲಿ ಬರುವ ನಾರಿಯರ ದೊಡ್ಡ ಹಬ್ಬ ನಾಗರ ಪಂಚಮಿಯಂತೂ ಮಹಿಳೆಯರಿಗೆ ಖುಷಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೊಸ ಹೊಸ ಸೀರೆ ಅಂಬರಗಳನ್ನು ತೊಟ್ಟು ಹೂ ಮುಡಿದುಕೊಂಡು ಗುಂಪಾಗಿ ನಾರಿಯರು ನಾಗದೇವನ ಪೂಜೆಗೆ ತೆರಳುವುದಾಗಲಿ, ಮಹಾಲಕ್ಷ್ಮಿಯ ಪೂಜೆ ಮಾಡುವುದಾಗಲಿ, ದೇವ ಮಂದಿರಗಳಲ್ಲಿ ವಿಜೃಂಭಣೆಯಿಂದ ಭಜಿಸುವುದಾಗಲಿ ಲವಲವಿಕೆಗೆ ಪಾತ್ರವಾಗುತ್ತದೆ. ಇದೇ ಮಾಸದಲ್ಲಿ ಬರುವ ರಕ್ಷಾ ಬಂಧನ ಪೂರ್ಣಿಮೆ ಅಣ್ಣ-ತಂಗಿಯರ ಪ್ರೀತಿಗೆ ಹೊಸ ಇತಿಹಾಸ ಬರೆಯುತ್ತದೆ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರ ಸೀರೆಯುಟ್ಟ ವಸುಂಧರೆ ಕಂಗೊಳಿಸುವಾಗ ರೈತರು, ಮಕ್ಕಳು, ಸಂತರು, ಭಕ್ತರು, ಸಾಮಾನ್ಯ ಜನರು ಶ್ರಾವಣ ಮಾಸ ಮೈ ಮನಗಳಲ್ಲಿ ತುಂಬಿಕೊಂಡು ರಮರಮಿಸುತ್ತಾರೆ. ಅಂತಲೆ ಅನೇಕ ಕವಿಗಳು ಶ್ರಾವಣದ ಧಾವಂತವನ್ನು ಎದೆ ತುಂಬಿ ಹಾಡಿದ್ದಾರೆ. ಕವಿ ರಾಮಮೂರ್ತಿಯವರು ಇಂಥ ಶ್ರಾವಣದ ನಿಸರ್ಗ ಕಂಡು

ಚನ್ನಿಗರು ಚಲುವೆಯರು ಕಿಲಕಿಲನೆ ನಗುವ ಬೀರಿ
ತಾವರೆಯ ಮೊಗವರಳಿ ಗೆಯ ಸಿರಿಕಂಪ ಬೀರಿ
ನಾ ಮುಂದು ತಾ ಮುಂದು ಎಂದೆಲ್ಲ ಹಿಗ್ಗಿ ಬರಲು
ಕಾವ್ಯಗಳ ಕಟ್ಟೊಡೆದು ಕನ್ನಡ ಸಾಹಿತ್ಯ ಬೆಳಗಲು…

ಎಂದು ಎದೆ ತುಂಬಿ ಹಾಡಿರುವುದು ನಿಜಕ್ಕೂ ಶ್ರಾವಣದ ಐಸಿರಿ ನಿಸರ್ಗದ ಅಚ್ಚರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ ಪುಟ್ನಂಜೀ ರೂಪ
Next post ನಾನೆ ಗೋಪಿಕೆ ಬಾರೊ ಗೋಪನೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…