ಆಗಬೇಕೆ ಸುಬ್ಬಣ್ಣ

ನೀವೂ ಆಗಬೇಕೇ ಒಬ್ಬ ಕೆ.ವಿ.ಸುಬ್ಬಣ್ಣ
ಹಾಗಿದ್ದರೆ ನಾಹೇಳೋದನ್ನ ಕೇಳಿ,
ಭಾಷಣ, ಬರವಣಿಗೆ, ನಾಟಕ, ಬಣ್ಣ ಗಿಣ್ಣ,
ಅವೆಲ್ಲ ಅನಂತರ
ಮೊದಲು ರಂಗಿನ ಬಟ್ಟೆಯ ಸಂಚಿಯಿಂದ ಒಂದೊಂದಾಗಿ ತೆಗೆದು
ಕೈಯಲ್ಲಿ ಸೇರಿಸಿಕೊಳ್ಳಿ
ವೀಳೆದೆಲೆ, ಅಡಿಕೆ, ಒಂದಿಷ್ಟು ಸುಣ್ಣ
ತಡೆಯಿರಿ ಮಾಡಿಬಿಟ್ಟೆ ಒಂದು ಸಣ್ಣ ತಪ್ಪು
ಮೇಲೆ ಹೇಳಿದೆನಲ್ಲಾ ಅದಕ್ಕೂ ಮೊದಲು ಇಟ್ಟುಕೊಳ್ಳಿ ಅಂಗೈ ಮೇಲೆ
ಸ್ವಲ್ಪ ಹೊಗೆಸೊಪ್ಪು
ಈಗ ಕಲಿಯಿರಿ ಇದನ್ನೆಲ್ಲ ಉಂಡೆ ಮಾಡಿ ಬಾಯಲ್ಲಡಿಗಿಸಿಕೊಂಡೇ
ಮಗುವಂಥದೊಂದು ಮಂದಹಾಸ ಬೀರುವುದನ್ನ
ನಿರ್ಲಿಪ್ತನಂತಿದ್ದೂ ಬದುಕನ್ನಾಪ್ತವಾಗಿ ಪ್ರೀತಿಸುವುದನ್ನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆತ್ತವರ ನೋವು
Next post ಸಾವಿರ ಬಗೆಯಲಿ ಸಾಗುತಿದೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys