Home / ಕವನ / ಕವಿತೆ / ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ?
ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ
ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ?
ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ

ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು
ಮಣ್ಣು ಕೊಟ್ಟಿಹ ದೇಹ ಮಣ್ಣಿಗರ್ಪಿತವಹುದು
ಮಣ್ಣಿಗೆ ಮರೆತು ಅನ್ನುವೆವು ‘ನಾವು’ ಎಂದು
ದೇಹ ನಾವಲ್ಲ; ಮಣ್ಣಹುದು, ಮಣ್ಣು ಮಣ್ಣಿಗಾಗಿಹುದು

ನೀವು ಗಳಿಸಿದ ದೀಪ ಮೂರುಸಾವಿರ ದೀಪ
ಆ ದೀಪ ಕಿರಿಯಹುದೇ? ಕೊನೆಯಹುದೇ? ಹೇಳಿ
ಆರದಾ ದೀಪ ಗುರುಸಿದ್ಧ ನಂದಾದೀಪ
ಗುರುಸಿದ್ಧದೇವರಳಿದಿಲ್ಲ; ಅಳಿದುದವರ ದೇಹ ಕೇಳಿ

ಗಂಗಾಧರ ವಾಣಿಜ್ಯ ವಿದ್ಯಾಲಯದ ವಾಣಿಯವರು
ಶಾರದೆಯ ವೀಣೆಯದೋ ನುಡಿಸಿತವರ ಕೃಪಾ ಸುಧೆ
ಕಾಡಸಿದ್ಧೇಶ್ವರನ ಗುರುಸಿದ್ಧನಾಶ್ರಯಿಸಿಹನು
ಅತನು ಬೆಳೆಯುತೆ; ಆಶ್ರಯದಾತನಳಿಯಬಹುದೇ?

ಕಿರಿಯರಿಗೆ ಹಿರಿಯರಿಗೆ ನೀಡಿತವರ ಕಾಮಧೇನು ಕರವು
ವಿದ್ಯೆಯನು, ಬುದ್ಧಿಯನು, ಪುಣ್ಯವನ್ನು ಧರೆಯೊಳು
ನಾವುಂಡ ಅಂಮೃತದಲಿ ಅವರಾತ್ಮ ಕಾಣುವೆವು
ಅವರ ತತ್ವ ಕಳೆ ಏರಿ ಬೆಳೆಯುತ್ತಿದೆ ಭುವಿಯೊಳು

ಶಿವಯೋಗ ದಿನದಂದು ಗುರುಸಿದ್ಧ ಶಿವಯೋಗಿ
ಶಿವನೊಳೊಂದಾಗಿ ಗಂಗಾಧರ ಶಿವಯೋಗಿ ರೂಪತಾಳಿದರು
ಮೂರುಸಾವಿರ ಮಠದ ಸರ್ವಭಕ್ತರಿಗೆ ಆಶೀರ್ವದಿಸಿ
ರಾಜೇಂದ್ರಯೋಗಿಯದೋ ನಿಜಸಾಕ್ಷಾತ್ಕಾರ ತೋರುತಿಹರು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...