ಹಿಂಬಾಲಿಸಿಕೊಂಡು
ಓಡುತ್ತಲೇ ಬಂದೆ
ಗುಡ್ಡಗಳನೇರಿ ಕಣಿವೆಗಳನಿಳಿದು
ಮುಳ್ಳುಕಲ್ಲುಗಳ
ದಾರಿಯಲ್ಲದ ದಾರಿಯಲ್ಲಿ
ಅವಳ ನೆರಳು ಹಿಡಿದು
ಅವಳ ಅಲೌಕಿಕ ವಾಸನೆಯ ಬೆಂಬತ್ತಿ
ಅವಳ ಸೆರಗು ಚುಂಗು
ಸಿಕ್ಕಿತೆಂದು ತಿಳಿದು ಸಿಗಲಾರದ
ಸೀರೆ ದಾರಿಯ ಹಿಡಿದು
ಓಡೋಡುತ್ತಲೇ ಬಂದೆ
ಹೊತ್ತೇರಿ ಇಳಿಮುಖವಾಗುತ್ತ ಬಂತು
ನೂಪುರ ಗೆಜ್ಜೆ ಸಪ್ಪಳ
ಕೇಳುತಿದೆ ಅಸ್ಪಷ್ಟ
ಅವಳ ಹೆಜ್ಜೆಯ ನಡಿಗೆ ಎದೆಬಡಿತ
ಕೇಳಿಯೂ ಕೇಳಿಸದಂತೆ
ಸರ್ಭರ್ರೆಂದು ವಾಹನಗಳು ಹಾಯುತಿವೆ
ಕೂಗು ಚೀರಾಟ ಭೋರಾಟ
ಸಂತೆ ಗದ್ದಲಗಳ ನಡುವೆ
ಅಡಗಿ ಹೋಗುತಿದೆ
ಮತ್ತೆಲ್ಲೋ ಕ್ಷೀಣದನಿ
ಆಲಿಸಿ ಕಿವಿಯಗಲಿಸಿ ಓಡುತ್ತೇನೆ
ಕಣ್ಣು ಮುಚ್ಚುವುದರೊಳಗೆ
ಕಾಲು ಕುಸಿಯುವುದರೊಳಗೆ
ಅವಳು ಸಿಗುವಳೇನೋ
ಎಂಬ ಅಶೆಯಿಂದ
*****
Related Post
ಸಣ್ಣ ಕತೆ
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…