Home / ಕವನ / ಕವಿತೆ / ನಾಳೆ

ನಾಳೆ

ಯೆಡ್ತಿ ಊರಾಗ್ ಇಲ್ಲ ಮುನಿಯ
ಊರ್‍ಗ್ ಓಗೌಳೆ ಜಾಣೆ!
ಜೀತ ತುಂಬ ಜೋಬೀಲೈತೆ
ನಿಕ್ಕ ಲ್ನೋವ್ ಅತ್ತಾಣೆ! ೧

ಅತ್ತಾಣೇಗು ಯೆಂಡ ತತ್ತ
ದೋಸ್ತೀವ್ರ್ ಎಲ್ಲ ಯೀರ್‍ಲಿ!
ನೀನ್ ನಂಗೇನು ಬುದ್ಯೋಳ್ಬೇಡ
ನಾಳೆ ಗೀಳೆ ಯಿರ್‍ಲಿ! ೨

ಆಕಾಸ್ಕಿಂತ ದೂರ್ ಎಚ್ಚೈತೆ
ನಾಳೆಗೊನೆ ನಮ್ಗು!
ಬೂಮಿ ಅನಕ ಮಡಿಕ್ಕಾಳಾಲ್ಲ
ರೂಪಾಯ್ ಗಂಟ್ ಮಾಡೌನ್ಗು! ೩

ಬಿಲ್ಟೆ ವೊಂಟೋದ್ ಪೀಪಾಯಿಂದ
ಯೆಂಡ ಬಸಿಯೋ ಮಾದ್ರಿ –
ಸುರದೋಗ್ತೈತೆ ಮನ್ಸನ್ ಬದಕು!
ನಾನ್ ಯೋಳಾದು ಕಾತ್ರಿ! ೪

ಕುಡಕನ್ ಕೈಲಿ ಕಾಸ್ ಗೀಸ್ ಏನ್ರ
ನಿಂತ್ರು ನಿಲ್ಬೌದಣ್ಣ;
ಮನ್ಸನ್ ಜೀವ ಮಾತ್ರ ಮುಳಗೋ
ಸಂಜೆ ಮೋಡದ್ ಬಣ್ಣ! ೫

ನಾಳೇನ್ಕೊಂಡಿ ನರಳೋದೆಲ್ಲ
ಬೆಪ್ಗೋಳ್ ಮನಸಿನ್ ಕನಸು!
ನಾಳೆ ಪಾಡು! ನಾಳೆ ಬಾರ!
ಈವತ್ಗ್ ಇಲ್ಲಿ ಮನಸು! ೬

ಮನ್ಸನ್ ಜೀವ ಮೂರೇ ನಿಮ್ಸ
ಕುಸಿ ಪಟ್ಟೌನ್ ಗೆದ್ದ!
ತಾಪತ್ರೇನ ತಬ್ಬಿಡುಕೊಂಡಿ
ಗೋಳಾಡೋವನ್ ಬಿದ್ದ! ೭

ತಕ್ಕೊ ಮುನ್ಯ ನನ್ ಅತ್ತಾಣೆ
ಯೆಂಡದ್ ಬುಂಡೆ ಬರ್‍ಲಿ-
ನಾಳೆ ಯೋಚ್ನೆ ನಂಗೆ ಬೇಡ
ಈವತ್ ಒಂದೇ ಇರ್‍ಲಿ! ೮
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...