ಅಭಿರುಚಿ

ಆನಂದದಿಂದ ಬಂದೀ ಜಗದ ರುಚಿಯೆ ಕಹಿ
ಯೆಂದು ಕಾತರಗೊಳ್ಳಬೇಡ, ನಾಲಿಗೆಯೆ! ಇದು
ಎಲ್ಲವೂ ಅನ್ನ; ಅದರದರ ರುಚಿಯದಕೆ; ಬಿಡು,
ನಿನ್ನ ಬಯಕೆಯ ಬಣ್ಣವೆರಚದಿರು, ರಸವೆ ಸಿಹಿ.
ಒಗರು, ಸಿಹಿ, ಕಹಿ, ಕಾರ, ಉಪ್ಪು, ಹುಳಿ, ಒಡವೆಯದು;
ರಸವು ರಸಬಲ್ಲ ರಸಿಕನದು? ಸರಸಿಗೆ ತೆರಹಿ
ತೋರುವದು ಜಗವು ಹೃದಯವ? ಅರಸಿಕಗೆ ಅರುಹಿ
ಇಮ್ಮೆ ಸಾವುದೆ ಮಾಯೆ? ಚೆಲುವನರಿಯದು ಕುರುಡು

ಭಾರತಕು ಭಾರತರವಾದ ಜಗದ ರಹಸ್ಯ
ಉಸಿರಲೆಣಸಿದ ವೇದ ವಾದವಾಯಿತು; ಬೆಳೆವ
ಬೆಳಕಿನ ಮಹಾಪಥವನಳೆವ ಸಾಹಸ ಹಾಸ್ಯ;
ಕಡಲು ಕರೆವುದು; ಕಾಲುವೆಯಲಿ ತಿಳಿಯದೆ ಕೊಳೆವೆ,
ಎಲೆ ಜೀವ! ನಿನ್ನೊಳಗೆ ಜಿಹ್ವೆ ಚಿಗುರಲಿ; ಹಿಂದೆ
ಕಣ್ಣು ಅರಳಲಿ ಹಿಗ್ಗ ಹಣ್ಣ ಪಡೆಯುವೆ ಮಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರ್ಣಾಟಕದ ಜನತೆಯ ಪೂರ್ವಚರಿತ್ರೆ
Next post ನಾಳೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…