ಹಿಂಬಾಲಿಸಿಕೊಂಡು
ಓಡುತ್ತಲೇ ಬಂದೆ
ಗುಡ್ಡಗಳನೇರಿ ಕಣಿವೆಗಳನಿಳಿದು
ಮುಳ್ಳುಕಲ್ಲುಗಳ
ದಾರಿಯಲ್ಲದ ದಾರಿಯಲ್ಲಿ
ಅವಳ ನೆರಳು ಹಿಡಿದು
ಅವಳ ಅಲೌಕಿಕ ವಾಸನೆಯ ಬೆಂಬತ್ತಿ
ಅವಳ ಸೆರಗು ಚುಂಗು
ಸಿಕ್ಕಿತೆಂದು ತಿಳಿದು ಸಿಗಲಾರದ
ಸೀರೆ ದಾರಿಯ ಹಿಡಿದು
ಓಡೋಡುತ್ತಲೇ ಬಂದೆ
ಹೊತ್ತೇರಿ ಇಳಿಮುಖವಾಗುತ್ತ ಬಂತು
ನೂಪುರ ಗೆಜ್ಜೆ ಸಪ್ಪಳ
ಕೇಳುತಿದೆ ಅಸ್ಪಷ್ಟ
ಅವಳ ಹೆಜ್ಜೆಯ ನಡಿಗೆ ಎದೆಬಡಿತ
ಕೇಳಿಯೂ ಕೇಳಿಸದಂತೆ
ಸರ್ಭರ್ರೆಂದು ವಾಹನಗಳು ಹಾಯುತಿವೆ
ಕೂಗು ಚೀರಾಟ ಭೋರಾಟ
ಸಂತೆ ಗದ್ದಲಗಳ ನಡುವೆ
ಅಡಗಿ ಹೋಗುತಿದೆ
ಮತ್ತೆಲ್ಲೋ ಕ್ಷೀಣದನಿ
ಆಲಿಸಿ ಕಿವಿಯಗಲಿಸಿ ಓಡುತ್ತೇನೆ
ಕಣ್ಣು ಮುಚ್ಚುವುದರೊಳಗೆ
ಕಾಲು ಕುಸಿಯುವುದರೊಳಗೆ
ಅವಳು ಸಿಗುವಳೇನೋ
ಎಂಬ ಅಶೆಯಿಂದ
*****
Related Post
ಸಣ್ಣ ಕತೆ
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ಆವಲಹಳ್ಳಿಯಲ್ಲಿ ಸಭೆ
ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಕನಸು ದಿಟವಾಯಿತು
ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…
-
ಮೇಷ್ಟ್ರು ಮುನಿಸಾಮಿ
ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…