ಹಿಂಬಾಲಿಸಿಕೊಂಡು
ಓಡುತ್ತಲೇ ಬಂದೆ
ಗುಡ್ಡಗಳನೇರಿ ಕಣಿವೆಗಳನಿಳಿದು
ಮುಳ್ಳುಕಲ್ಲುಗಳ
ದಾರಿಯಲ್ಲದ ದಾರಿಯಲ್ಲಿ
ಅವಳ ನೆರಳು ಹಿಡಿದು
ಅವಳ ಅಲೌಕಿಕ ವಾಸನೆಯ ಬೆಂಬತ್ತಿ
ಅವಳ ಸೆರಗು ಚುಂಗು
ಸಿಕ್ಕಿತೆಂದು ತಿಳಿದು ಸಿಗಲಾರದ
ಸೀರೆ ದಾರಿಯ ಹಿಡಿದು
ಓಡೋಡುತ್ತಲೇ ಬಂದೆ
ಹೊತ್ತೇರಿ ಇಳಿಮುಖವಾಗುತ್ತ ಬಂತು
ನೂಪುರ ಗೆಜ್ಜೆ ಸಪ್ಪಳ
ಕೇಳುತಿದೆ ಅಸ್ಪಷ್ಟ
ಅವಳ ಹೆಜ್ಜೆಯ ನಡಿಗೆ ಎದೆಬಡಿತ
ಕೇಳಿಯೂ ಕೇಳಿಸದಂತೆ
ಸರ್ಭರ್ರೆಂದು ವಾಹನಗಳು ಹಾಯುತಿವೆ
ಕೂಗು ಚೀರಾಟ ಭೋರಾಟ
ಸಂತೆ ಗದ್ದಲಗಳ ನಡುವೆ
ಅಡಗಿ ಹೋಗುತಿದೆ
ಮತ್ತೆಲ್ಲೋ ಕ್ಷೀಣದನಿ
ಆಲಿಸಿ ಕಿವಿಯಗಲಿಸಿ ಓಡುತ್ತೇನೆ
ಕಣ್ಣು ಮುಚ್ಚುವುದರೊಳಗೆ
ಕಾಲು ಕುಸಿಯುವುದರೊಳಗೆ
ಅವಳು ಸಿಗುವಳೇನೋ
ಎಂಬ ಅಶೆಯಿಂದ
*****
Related Post
ಸಣ್ಣ ಕತೆ
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…