Home / ಲೇಖನ / ಇತರೆ / ವಚನ ವಿಚಾರ – ನಲ್ಲನ ಕೂಟ

ವಚನ ವಿಚಾರ – ನಲ್ಲನ ಕೂಟ

ಎಮ್ಮ ನಲ್ಲನ ಕೂಡಿದ ಕೂಟ
ಇದಿರಿಗೆ ಹೇಳಬಾರದವ್ವಾ
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ
ಉರಿಲಿಂಗದೇವ ಬಂದು
ನಿರಿಗೆಯ ಸೆರಗ ಸಡಿಲಿಸಲೊಡನೆ
ನಾನೋ ತಾನೋ ಏನೆಂದರಿಯೆನು

ಉರಿಲಿಂಗದೇವನ ವಚನ. ತಾನೇ ಹೆಣ್ಣಾಗಿ, ದೈವ ತನ್ನ ಪ್ರಿಯನಾಗಿ ತನಗೆ ಆದ, ಆದರೆ ಹೇಳಿಕೊಳ್ಳಲಾಗದ ಅನುಭವ ಕುರಿತದ್ದು. ನಿಮ್ಮ ನಲ್ಲರನ್ನು ಕೂಡಿದ ಸುಖ ಹೇಗಿತ್ತೆಂದು ನಿಮಗೆ ಸಾಧ್ಯವಾದಂತೆ ಹೇಳಿಕೊಳ್ಳಿ. ಆದರೆ ನನ್ನ ನಲ್ಲ ನಿರಿಗೆ, ಸೆರಗು ಸಡಿಲಿಸಿದ ಕೂಡಲೆ ನಾನೊ, ಅವನೋ ಏನೂ ನನ್ನ ಅರಿವಿನಲ್ಲಿ ಉಳಿಯಲಿಲ್ಲ ಅನ್ನುತ್ತಾಳೆ ಇಲ್ಲಿನ ಹೆಣ್ಣು.

ಅನುಭವ ಎಂದರೆ ಅದೇ ಅಲ್ಲವೇ! ಅನುಭವಿಸುತ್ತಿರುವ ನಾನು ಅನ್ನುವುದು ಇಲ್ಲವಾಗುವುದು, ಅನುಭವ ಮಾತ್ರ ಇರುವುದು. ಅನುಭವ ಆಗುತ್ತಿದೆ ಎಂದು ಗೊತ್ತೂ ಆಗುತ್ತಿದ್ದರೆ ಅನುಭವಿಸಿದ್ದೇ ಸುಳ್ಳು! ಹೇಳಲಾಗದ್ದನ್ನು ಹೇಳಲು ಹೊರಡುವುದೇ ತಪ್ಪು, ಹಾಗಂದರೂ ಹೇಳಲಾಗದ್ದನ್ನು ಹೇಗಾದರೂ ಹೇಳಿಕೊಳ್ಳಬೇಕೆಂಬ ಹಂಬಲಕ್ಕೇ ಅಲ್ಲವೇ ಎಲ್ಲ ಮಾತು, ಕಲೆ, ಸಾಹಿತ್ಯ, ಇತ್ಯಾದಿ. ಹೇಳಲಾಗದು ಅನ್ನುವುದನ್ನಾದರೂ ಹೇಳಲೇಬೇಕಲ್ಲ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...