Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಸೆಪ್ಟೆಂಬರ ೨೫, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಸೆಪ್ಟೆಂಬರ ೨೫, ೧೯೪೨

ಪ್ರೀತಿಯ ಕಿಟಿ,

ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬಿದ ಬಟ್ಟೆ ಬೀರುವಿನಲ್ಲಿಟ್ಟರಿಂದ ಆ ಗುಳಿಗೆ ವಾಸನೆ ಪಡೆದ ಬಿಸ್ಕತ್ತುಗಳು ] ತಿಂದು, ಲಿಂಬು ಪಾನಕ ಕುಡಿಯುತ್ತೇವೆ. ನಾವು ಪೀಟರ್ ಬಗ್ಗೆ ಚರ್ಚಿಸಿದೆವು. ಪೀಟರ್ ಅದೆಷ್ಟು ಸಲ ನನ್ನ ಕೆನ್ನಗಳಿಗೆ ಹೊಡೆದು ಪೀಡಿಸುತ್ತಾನೆ ಎಂಬುದನ್ನು ನಾನವರಿಗೆ ಹೇಳಿ, ಹಾಗೆ ಹುಡುಗನಿಂದ ದಬಾವಣೆಗೆ ಒಳಗಾಗುವುದನ್ನು ನಾನು ಇಷ್ಟಪಡುವುದಿಲ್ಲವೆಂದೂ ಹೇಳಿದೆ.

ಆದರೆ ಅವರು ಮಾತ್ರ ಹೆತ್ತವರಲ್ಲಿರುವ ವಿಲಕ್ಷಣ ಶೈಲಿಯಲ್ಲಿ, ನಾನು ಪೀಟರ್‌ನನ್ನು ಇಷ್ಟಪಟ್ಟರೆ ಆಗುತ್ತಿರಲಿಲ್ಲವೇ? ಎಂದು ಕೇಳಿದರು. ಯಾಕೆಂದರೆ ಆತ ನನ್ನನ್ನು ಖಂಡಿತವಾಗಿಯೂ ಬಹಳ ಮೆಚ್ಚಿಕೊಂಡಿದ್ದನು. ನಾನು “ಓ ದೇವರೇ!” ಎಂದುಕೊಂಡೆ ಮತ್ತು ಹೇಳಿದೆ “ಓಹೋ! ಅದು ಸಾಧ್ಯವಿಲ್ಲ”

ಪೀಟರ್ ಸ್ವಲ್ಪ ಹೆಚ್ಚೆ ಎಬಡನಾದರೂ ಹೆಣ್ಣು ಮಕ್ಕಳೊಂದಿಗೆ ಹೆಚ್ಚು ಬೆರೆಯದ ಹುಡುಗರಲ್ಲಿ ಇರುವಂತೆ ಆತನಲ್ಲೂ ಇರುವ ಅತೀ ನಾಚಿಕೆಯ ಕಾರಣದಿಂದ ಹಾಗೆ ವರ್ತಿಸುತ್ತಿರಬಹುದೆಂದು ನನಗನ್ನಿಸುತ್ತದೆ ಎಂದು ಹೇಳಿದೆ. ಇನ್ನೊಂದು ಮಾತು ಹೇಳಲೇಬೇಕು. ಅದೆಂದರೆ ಗುಪ್ತಗೃಹದ [ಗಂಡಸರ ವಿಭಾಗ] ನಿರಾಶ್ರಿತರ ಕಮಿಟಿಯಲ್ಲಿ ಬಹಳ ಕುಶಲಿಗಳಿದ್ದಾರೆ. ಅವರೇನು ಮಾಡಿದರೆಂದು ಹೇಳುವೆ. ನಮಗೋಸ್ಕರ ನಮ್ಮ ಕೆಲವು ವಸ್ತುಗಳನ್ನು ಗುಪ್ತವಾಗಿಟ್ಟುಕೊಂಡ ಸ್ನೇಹಿತನೂ ಹಾಗೂ ಟ್ರೇವಿಸ್‌ನ ಚೀಫ್ ರಿಪ್ರೆಸೆಂಟೆಟಿವ್ ಆದ ವ್ಯಾನ್ ಡಿಜ್ಕ್‌ಗೆ ನಮ್ಮ ವಿಷಯಗಳನ್ನು ನಮ್ಮಿಂದಲೇ ತಲುಪಿಸುವಂತೆ ಮಾಡಲು ನಮ್ಮ ಸಂಸ್ಥೆಯೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಸೌಥ್ ಜೀಲ್ಯಾಂಡಿನ ಕೆಮಿಸ್ಟ್ ಒಬ್ಬನಿಗೆ ಪತ್ರಾಯಿಸಿದರು., ಅದು ಹೇಗಿತ್ತೆಂದರೆ ಅವರು ತನ್ನ ಉತ್ತರದ ಕಾಗದವನ್ನು ವಿಳಾಸವಿರುವ ಲಕೋಟೆಯಲ್ಲಿಟ್ಟು ಕಳಿಸಬೇಕಿತು.. ಡ್ಯಾಡಿ ಆ ಲಕೋಟೆಯನ್ನು ಆಫೀಸಿನ ವಿಳಾಸಕ್ಕೆ ಕಳಿಸಿದರು. ಯಾವಾಗ ಆ ಲಕೋಟೆ ಜೀಲ್ಯಾಂಡಿನಿಂದ ಬರುತ್ತೋ, ಆಗೆಲ್ಲ ಒಳಗಿನ ಪತ್ರವನ್ನು ತೆಗೆದುಕೊಂಡು ಅದರಲ್ಲಿ ನಾವಿನ್ನೂ ಜೀವಂತ ಇರುವದರ ಸಂಕೇತವಾಗಿ ಡ್ಯಾಡಿಯ ಕೈಬರಹದ ಸಂದೇಶವಿಟ್ಟು ಕಳಿಸಲಾಗುತ್ತಿತ್ತು. ಈ ರೀತಿ ವ್ಯಾನ್ ಡಿಜ್ಕ್ ಆ ಉತ್ತರವನ್ನು ಓದಿದರೂ ಯಾರಿಗೂ ಸಂದೇಹ ಬರುತ್ತಿರಲಿಲ್ಲ. ಅವರು ವಿಶೇಷವಾಗಿ ಜೀಲ್ಯಾಂಡನ್ನೆ ಆಯ್ಕೆ ಮಾಡುತ್ತಾರೆ. ಅದು ಬೆಲ್ಜಿಯಂಗೆ ಹತ್ತಿರ, ಮತ್ತು ಸುಲಭವಾಗಿ ಪತ್ರಗಳನ್ನು ಗಡಿಯಾಚೆ ಕಳುಹಿಸಲೂಬಹುದು. ಅದಕ್ಕೂ ಹೆಚ್ಚಾಗಿ ಜೀಲ್ಯಾಂಡಿಗೆ ವಿಶೇಷ ಪರವಾನಿಗೆಯ ಹೊರತಾಗಿ ಯಾರೊಬ್ಬರಿಗೂ ಅನುಮತಿ ಇಲ್ಲ. ಹಾಗಾಗಿ ನಾವಲ್ಲಿ ಇದ್ದೆವೆಂದು ಅವರೆಂದುಕೊಂಡರೆ, ಆತ ಪ್ರಯತ್ನಿಸಲೂ ಆಗುತ್ತಿರಲಿಲ್ಲ ಮತ್ತು ನಮ್ಮ ಅವಲೋಕಿಸಲು ಆಗುತ್ತಿರಲಿಲ್ಲ.

ನಿನ್ನ,
ಆನ್.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...