ನಿರೀಕ್ಷೆ

ನಾನು ವಸುಮತಿ ನಿನ್ನ ಶ್ರೀಮತಿ
ದಿವ್ಯಾಲಂಕಾರಭೂಷಿತೆ
ನಿನ್ನ ಹೃದಯ ವಿರಾಜಿತೆ
ಸಸ್ಯಶ್ಯಾಮಲೆ, ನವರತ್ನ ಕೋಮಲೆ
ಆಗಿದೆನಿಂದು ಅಂಗಾಂಗ ವಿಕಲೆ.
ದಾನವನೊಬ್ಬನ ಕೈಯಿಂದ ಅಂದು
ಉಳಿಸಿದೆ ವರಾಹರೂಪದೆ ಬಂದು
ನೂರಾರು ದಾನವರಿಂದು
ಎಳೆದಾಡುತಿಹರು ಬಳಿ ನಿಂದು
ನನ್ನ ಗರ್ಭ ಸಂಜಾತರು
ಕೊಡಲಿ ಹಿಡಿದ ಕಿರಾತಕರು
ಅಂಗಾಂಗವ ಅಣುವಾಗಿ ಸಿಗಿದು
ನೆತ್ತರು ಹರಿಸುತಿಹರೆನ್ನ ಕೊಂದು
ಪರಿಸರದ ಗಾಳಿ ವಿಷಮಯವಾಗಿ
ಉಸಿರುಗಟ್ಟಿ ಪ್ರಾಣ ಹಿಂಡುತಿದೆ
ಎನ್ನೊಡಲ ಜೀವಜಲ ಹಿಂಗಿ ಹೋಗಿ
ರೋಗದ ಗೂಡಾಗಿ ನಿಂತಿಹೆ ನಾನು.
ಮನುಕುಲ ಬೆಳೆದು ಅನಂತ ಅಪಾರ
ತಂದಿದೆ ನನಗೆ ಕರಗದ ತಲೆಭಾರ
ಸಮತೋಲನ ತಪ್ಪಿ ಕುಸಿಯುತಿಹೆನೋ
ಭಯದ ನೆರಳಲಿ ತತ್ತರಿಸುತಿಹೆನೋ.
ಹೃದಯಾಂತರಾಳದ ನೂರು ನೋವು
ಹೆಪ್ಪುಗಟ್ಟಿದೆ ನಿಟ್ಟುಸಿರಿನ ಕಾವು
ಒಮ್ಮೊಮ್ಮೆ ಸಿಡಿದು ಸಹಸ್ರ ಹೋಳು
ಕಣ್ಮುಂದೆ ಕಾಣುತಿಹೆ ಮಕ್ಕಳಾ ಗೋಳು
ತಾಳಲಾರೆ ಈ ಪರಿವೇದನಾ
ನೋಡಲಾರೆ ಸುಜನರ ರೋಧನಾ
ಶ್ರೀಪತಿ ದಯೆ ತೋರಿಸು
ಕೈಹಿಡಿದೆನ್ನ ಉದ್ಧರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ನಲ್ಲನ ಕೂಟ
Next post ಲೇಟು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys