ನಾನು ವಸುಮತಿ ನಿನ್ನ ಶ್ರೀಮತಿ
ದಿವ್ಯಾಲಂಕಾರಭೂಷಿತೆ
ನಿನ್ನ ಹೃದಯ ವಿರಾಜಿತೆ
ಸಸ್ಯಶ್ಯಾಮಲೆ, ನವರತ್ನ ಕೋಮಲೆ
ಆಗಿದೆನಿಂದು ಅಂಗಾಂಗ ವಿಕಲೆ.
ದಾನವನೊಬ್ಬನ ಕೈಯಿಂದ ಅಂದು
ಉಳಿಸಿದೆ ವರಾಹರೂಪದೆ ಬಂದು
ನೂರಾರು ದಾನವರಿಂದು
ಎಳೆದಾಡುತಿಹರು ಬಳಿ ನಿಂದು
ನನ್ನ ಗರ್ಭ ಸಂಜಾತರು
ಕೊಡಲಿ ಹಿಡಿದ ಕಿರಾತಕರು
ಅಂಗಾಂಗವ ಅಣುವಾಗಿ ಸಿಗಿದು
ನೆತ್ತರು ಹರಿಸುತಿಹರೆನ್ನ ಕೊಂದು
ಪರಿಸರದ ಗಾಳಿ ವಿಷಮಯವಾಗಿ
ಉಸಿರುಗಟ್ಟಿ ಪ್ರಾಣ ಹಿಂಡುತಿದೆ
ಎನ್ನೊಡಲ ಜೀವಜಲ ಹಿಂಗಿ ಹೋಗಿ
ರೋಗದ ಗೂಡಾಗಿ ನಿಂತಿಹೆ ನಾನು.
ಮನುಕುಲ ಬೆಳೆದು ಅನಂತ ಅಪಾರ
ತಂದಿದೆ ನನಗೆ ಕರಗದ ತಲೆಭಾರ
ಸಮತೋಲನ ತಪ್ಪಿ ಕುಸಿಯುತಿಹೆನೋ
ಭಯದ ನೆರಳಲಿ ತತ್ತರಿಸುತಿಹೆನೋ.
ಹೃದಯಾಂತರಾಳದ ನೂರು ನೋವು
ಹೆಪ್ಪುಗಟ್ಟಿದೆ ನಿಟ್ಟುಸಿರಿನ ಕಾವು
ಒಮ್ಮೊಮ್ಮೆ ಸಿಡಿದು ಸಹಸ್ರ ಹೋಳು
ಕಣ್ಮುಂದೆ ಕಾಣುತಿಹೆ ಮಕ್ಕಳಾ ಗೋಳು
ತಾಳಲಾರೆ ಈ ಪರಿವೇದನಾ
ನೋಡಲಾರೆ ಸುಜನರ ರೋಧನಾ
ಶ್ರೀಪತಿ ದಯೆ ತೋರಿಸು
ಕೈಹಿಡಿದೆನ್ನ ಉದ್ಧರಿಸು
*****
Related Post
ಸಣ್ಣ ಕತೆ
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್ಗೆ ಕಾಲ್ಚೆಂಡು ಆಟ… Read more…
-
ಮತ್ತೆ ಬಂದ ವಸಂತ
ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…