ನಾನು ವಸುಮತಿ ನಿನ್ನ ಶ್ರೀಮತಿ
ದಿವ್ಯಾಲಂಕಾರಭೂಷಿತೆ
ನಿನ್ನ ಹೃದಯ ವಿರಾಜಿತೆ
ಸಸ್ಯಶ್ಯಾಮಲೆ, ನವರತ್ನ ಕೋಮಲೆ
ಆಗಿದೆನಿಂದು ಅಂಗಾಂಗ ವಿಕಲೆ.
ದಾನವನೊಬ್ಬನ ಕೈಯಿಂದ ಅಂದು
ಉಳಿಸಿದೆ ವರಾಹರೂಪದೆ ಬಂದು
ನೂರಾರು ದಾನವರಿಂದು
ಎಳೆದಾಡುತಿಹರು ಬಳಿ ನಿಂದು
ನನ್ನ ಗರ್ಭ ಸಂಜಾತರು
ಕೊಡಲಿ ಹಿಡಿದ ಕಿರಾತಕರು
ಅಂಗಾಂಗವ ಅಣುವಾಗಿ ಸಿಗಿದು
ನೆತ್ತರು ಹರಿಸುತಿಹರೆನ್ನ ಕೊಂದು
ಪರಿಸರದ ಗಾಳಿ ವಿಷಮಯವಾಗಿ
ಉಸಿರುಗಟ್ಟಿ ಪ್ರಾಣ ಹಿಂಡುತಿದೆ
ಎನ್ನೊಡಲ ಜೀವಜಲ ಹಿಂಗಿ ಹೋಗಿ
ರೋಗದ ಗೂಡಾಗಿ ನಿಂತಿಹೆ ನಾನು.
ಮನುಕುಲ ಬೆಳೆದು ಅನಂತ ಅಪಾರ
ತಂದಿದೆ ನನಗೆ ಕರಗದ ತಲೆಭಾರ
ಸಮತೋಲನ ತಪ್ಪಿ ಕುಸಿಯುತಿಹೆನೋ
ಭಯದ ನೆರಳಲಿ ತತ್ತರಿಸುತಿಹೆನೋ.
ಹೃದಯಾಂತರಾಳದ ನೂರು ನೋವು
ಹೆಪ್ಪುಗಟ್ಟಿದೆ ನಿಟ್ಟುಸಿರಿನ ಕಾವು
ಒಮ್ಮೊಮ್ಮೆ ಸಿಡಿದು ಸಹಸ್ರ ಹೋಳು
ಕಣ್ಮುಂದೆ ಕಾಣುತಿಹೆ ಮಕ್ಕಳಾ ಗೋಳು
ತಾಳಲಾರೆ ಈ ಪರಿವೇದನಾ
ನೋಡಲಾರೆ ಸುಜನರ ರೋಧನಾ
ಶ್ರೀಪತಿ ದಯೆ ತೋರಿಸು
ಕೈಹಿಡಿದೆನ್ನ ಉದ್ಧರಿಸು
*****
Related Post
ಸಣ್ಣ ಕತೆ
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…