ನನ್ನ ನಡೆ

ಏರುವ ಹೊತ್ತಿನಲಿ
ಬದುಕು ಕಟ್ಟುವ, ಕಟ್ಟಿಕೊಳ್ಳುವ
ಕಾಯಕದಲಿ ನಿಯೋಜಿತನಾಗಿ
ಹೊರಬಂದೆ; ಮಣ್ಣಿಂದ ದೂರವಾದೆ.

ಜೀವ ಹೂ ಸಮಯದಲಿ
ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ
ಸ್ನೇಹ ಸಹಕಾರ ನಂಬಿ
ಆಡುತ್ತಾ ಹಗುರಾಗಿ
ಕಚ್ಚೆ, ಕೈ, ಬಾಯಿ ವೈನಾಗಿರಿಸಿ
ಕಲಿಕೆಯನ್ನು ಗೌರವಿಸಿ
ಆಗುವುದಾದರೆ ನೆರವು ನೀಡಿ, ಸಾಂತ್ವನವ ಮಾಡಿ
ಆಗದಿರೆ ತೆಪ್ಪಗಿರಿ
ತಪ್ಪಿ ಕೇಡ ಬಗೆಯದಿರಿ
ಎಚ್ಚರಿರಿ ಕೊಂದುಕೊಳ್ಳದಿರಿ ನಿಲುವಿನಲಿ
ದುಡಿದೆ; ಪ್ರೀತಿ ಪಡೆದೆ
ಹೊಸ ಹೊಸ ಸಂಬಂಧಗಳ ಬೆಸೆದುಕೊಂಡೆ

ಜೀವನದ ಸಂಜೆಯಲಿ
ಕೊರಗುತಿರುವೆ
ಏನು ನೋಡಿದೆ? ಏನು ತಿಳಿದೆ?
ಎಂಬೀ ವಿಧದ ಪ್ರಶ್ನೆಗಳಿಗೆ ಉತ್ತರ ಸಿಗದೆ.

ಯೋಜಿಸುತ್ತಿರುವೆ
ಉಳಿಯಲಿಕೆ ಉಪಯುಕ್ತನಾಗಿ
ನಡೆಯಲಿಕೆ ಸಮಾಧಾನವಾಗಿ
ಕಾಪಿಟ್ಟು ಈ ಸಟ್ಟೆಯನು
ಅಧ್ಯಯನ ಯೋಗ್ಯವಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಆಲದ ಮರವೂ, ಒಬ್ಬ ಹುಡುಗನ ಪುಟ್ಟ ಕತ್ತಿಯೂ
Next post ಅವರಿವರ ತೆಗಳದೇ ಬರೆಯಲಾಗದೇ ?

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys