ಚಾತಕ

‘ಬೇಸಗೆಯ ಬೇಸರಂ ಬೀಸು ೧ಕಾದಿಗೆಯೇ!
ಮೊಗ್ಗರಿಸಿ ಮೊರೆ ಮುಗಿಲೆ! ಮಿನುಗು ಮೊನೆಮಿಂಚೇ!-
ಮೇಣಿಂತು ಮಳೆಯ ಮುಂಬನಿ ಮಣಿದು ಹೊಂಚೆ
ನಿನ್ನ, ನೀನದನೊಲ್ಲದೆಲ್ಲಿ ಚಾದಗೆಯೇ೨? ೪

ನಿನ್ನ ತನುವೆಂತು? ದನಿಯೆಂತು? ಮನೆಯೆಂತು?
ದೆಸೆಡೆಸೆಯ ಸೋಸಿ ನಾ ಸೋತೆ! ನೀಂ ಭುವಿಯಾ
ಹಾರುಹಕ್ಕಿಯೊ? ಬರಿಯ ಕಾಣಿಕೆಯೊ ಕವಿಯಾ?
ಬಾರ, ತನಿ ಬಾನಹನಿ ಬಸಿದೆಸೆಯ ಬಂತು!’ ೮

`ಹೊರಗೆನ್ನಸರಸುವರೆ, ಮರುಳೆ? ನಿನ್ನೊಳಗೆ
ಮರೆಯನ್ನ! ಹೊರಹಕ್ಕಿಯಲ್ಲ ನಾನರಿಯಾ?
ನಿನ್ನೆದೆಯ ಮುಸುಕಿ ಮನನಂ ಮಸೆದು ಮೊಳಗೆ,
ಕನಸು ಝಲ್ಲನೆ ಝಳಕೆ, ಸೋರ್ವ ಸೀವರಿಯಾ ೧೨
ಕುಡಿದು ಕಿಲಕಿಲ ಕೆಲೆವೆ ಕಂಠದಿಂ ಕವಿಯಾ
ಕಿವಿಯಾರ ಕಾಂಬೆಯಂದೆನ್ನ ಮೆಯ್ಸವಿಯಾ!’
*****
೧ ಮಳಿಗಾಲವಾರಂಭಿಸುವ ಮಾಸ (ಕಾತಿಕೆ)
೨ ಮಣಿಯಂತೆ ಸಣ್ಣಗೆ ದುಂಡಾಗಿ, ಬಗ್ಗಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಲಾಟದ ಪದ
Next post ಉಪಕಾರಿ ಬ್ಯಾಕ್ಟರಿಯಾಗಳು (ಸೂಕ್ಷ್ಮಜೀವಿಗಳು)

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…