ಒಂದಿರುಳು

ಪಡುವ ಮಲೆಯ ಕಣಿವೆಯಾಚೆ
ಹೊತ್ತು ಹಾರಿಹೋಗುತಿತ್ತು,
ಮೂಡ ಮಲೆಯ ಹಲ್ಲೆ ಹತ್ತಿ
ಇರುಳ ದಾಳಿ ನುಗ್ಗುತಿತ್ತು;
ಬಿದ್ದ ಹೊನ್ನ ಕೊಳ್ಳೆ ಹೊಡೆದು
ಕಳ್ಳಸಂಜೆಯೋಡುತಿತ್ತು,
ತಲೆಯ ಬಾಗಿ ಪುರದ ದೀಪ
ಜೀವದೊಂದಿಗಿದ್ದಿತು.

ಪಾನಭೂಮಿಯಲ್ಲಿ ಮತ್ತ-
ಜನದ ಮಾತಿನಲ್ಲಿ ಚಿತ್ತ
ಗೋತಹಾಕುತಿತ್ತು ಭರದಿ
ಸೂತ್ರಕೆಟ್ಟ ಪಟದ ತೆರದಿ.
ಮದ್ಯತುಷ್ಟ ಮುದಿಯ ಚೆನ್ನ
‘ಕುಡಿಲ ಕುಡಿಲ’ ಎಂದು ತನ್ನ
ಮರಿಯಮಗನ ಮೂಗ ಹಿಡಿದು
ಬಾಯ ತೆರೆಸಿ, ಕಳ್ಳ ಸುರಿದು,
ತನ್ನ ಜೀವಕಾದ ನಲವ
ತನ್ನವನಿಗು ಹಂಚಿಕೊಡುವ
ಯತ್ನದಲ್ಲಿ ತೋರುತಿತ್ತು-
ವಿಕೃತ ವ್ಯಂಗ್ಯವೇಷವೆತ್ತು
ಪ್ರೇಮ, ಮನುಜ ಧರ್ಮವು.

ಭಾವವೇನು ಭಂಗಿಯೇನು
ಹಾಸ್ಯವೇನು ಲಾಸ್ಯವೇನು,
ಎಂತಂದರಂತು ತೋರಿ,
ಬವಣೆಯಸಯ ನುಣಚಿ ಜಾರಿ,
ಮರೆವುಕಿಂಡಿಯಿಂದ ದೂರಿ,
ಮುಕ್ತಿಯುನ್ಮಾದದಿಂದ
ವ್ಯಕ್ತವಾಯಿತಾನಂದ-
ಭೂತಧರ್ಮವು-ಸರ್ವ-
ಭೂತಧರ್ಮವು.

ಪಡುಬಡಗಲ ಮೂಲೆಯಲ್ಲಿ
ಕಾಳಿಯಿರುವ ತಾಣದಲ್ಲಿ
ಕಿಚ್ಚು ಇರುಳ ನೊಣೆಯುತಿತ್ತು,
ಭಯವ ಮೂಡಿ ಮಸಗುತಿತ್ತು,
ಜೀವ ಹೌಹಾರುತಿತ್ತು,
ಡುಮ್ಮಿ ಡುಕಿಟಿ ನಾನ ತತ್ತು
ಎನುತ ತಮಟೆ ದುಡಿಯುತಿತ್ತು-
ತನುವೊಳಾದ ಬೇನೆಗಾಗಿ
ವಿಶ್ವಜೀವ ಮೂಕವಾಗಿ
ವಿಣ್ಣವಿಣ್ಣ ದುಡಿವ ತೆರದಿ,
ಗಾಯಗೊಂಡ ತಾಣದಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂಲೊಲ್ಲ್ಯಾಕ ಚೆನ್ನೀ?
Next post ನನ್ನೊಳಗೊಬ್ಬ ಸೈತಾನ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…