Home / ಕವನ / ಕವಿತೆ / ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ
ಯಾವಾಗಲೂ ಇರುತಾನ
ನಾನೆಚ್ಚರಿರಲಿ ನಿದ್ರಿಸುತಿರಲಿ
ತನ್ನಿಚ್ಛೆಯಂತೆ ಕುಣಿಸುತಾನ
ಕುಣಿಸುತಾನ ದಣಿಸುತಾನ
ಮನಸೋ‌ಇಚ್ಛೆ ಮಣಿಸುತಲು ಇರುತಾನ

ಎಲ್ಲರನು ಬಯ್ಯುತಾನ
ಬಡಿಯಲು ಕೈಯೆತ್ತುತಾನ
ಕೊಂದು ಕೂಗುತಾನ
ಯಾವಾಗಲೂ ಏನೊ ಒಂದು
ಸಂಚು ನಡೆಸುತಿರುತಾನ
ನಡೆವವರ ಕಾಲೆಳೆದು
ಬೀಳೋದು ನೋಡಿ ನಗುತಾನ

ಸತ್ಯ ಹೇಳಲು ಹೊರಟರೆ
ಇಕ್ಕಳ ಹಾಕಿ ಎಳೀತಾನ
ನ್ಯಾಯ ನುಡಿಯಲು ಹೊರಟರೆ
ಬೀಗ ಬಡಿದುಬಿಡುತಾನ

ಕಣ್ಣಿಗೆ ಪರದೆ ಕಟ್ಟುತಾನ
ಕಿವಿಗೆ ಗಂಗಳ ಮೆತ್ತುತಾನ
ಮನಕೆ ಮಂಕು ಹೊದಿಸುತಾನ
ಎದೆಗೆ ಸೀಸ ಹೊಯ್ಯುತಾನ
ಅಫೀಮು ತಿನ್ಸಿ ಮಲಗಿಸ್ತಾನ
ಕುಡಿಸಿ ನನ್ನ ತಲೀನೆ ಕೆಡಿಸಿಬಿಡ್ತಾನ

ದೇವರೆಂದರೆ ಅದು ಸೋಹಂ ಅಂತಾನ
ದೈವವೆಂದರೆ ಅದೂ ಸ್ವಯಂ ಅಂತಾನ
ಸ್ವರ್ಗ ಇರೋದು ತನ್ನೊಳಗೆ
ಸರ್‍ವಸಾಧನಾ ಮಾರ್‍ಗ ತನ್ನೊಳಗೆ
ಯಾರು ಯಾರಿಗೋ ಶರಣಾಗ್ತಿ
ತನಗೇ ಆಗು ಅಂತಾನ

ಮೊದಲ ಕೊಲೆಯೇ ಕಷ್ಟಂತ
ಅಮೇಲದೇ ಮಜಂತ
ಮೊದಲ ಹಾದರವೆ ಭೀತೀಂತ
ಆಮೇಲದೇ ಪ್ರೀತೀಂತ

ಪಾಪ ಪುಣ್ಯಗಳಿಲ್ಲಂತ
ಇರುವುದೊಂದೇ ಸ್ವಂತಾಂತ
ಸ್ವಂತಕೇನು ಬೇಕೋ ಅದ
ನೀಡೋದೆ ನಿನ್ನ ಸುಖಾಂತ

ಅಂತನೆ ಇರ್‍ತಾನೇನ ಮಾಡಲಿ
ಹೆಂಗೆ ಹೋರಾಡಲಿ ಇವನ
ನನ್ನೊಳಗೇ ಇರುವಾತನ
ನನ್ನ ಕೊಲ್ಲದೆ ನಾನಿವನ
ಹೆಂಗೆ ಕೊಲ್ಲಲಿ ಒಳಗಿನವನ
ಇವನಿರದೆ ನಾನಾದರು
ಹೆಂಗಿರಲಿ ಜೀವಸಹಿತ

ನಾ ಗಾಳಿಪಟವಾದರೆ
ಇವನೇ ದಾರಾಂತ
ಇವ ಜಗ್ಗದಿದ್ದರೆ ನಾ
ಬೀಳೋದು ಖಚಿತಾಂತ
ಎಳೆದಾಗಲೇ ನಾ ಮೇಲಕೆ ಮೇಲಕೆ
ಏರೋದಂತ
ಸ್ವರ್‍ಗವ ಕಂಡಂತನಿಸೋದಂತ
ಓ ದೇವರೆ ನನ್ನ
ಕ್ಷಮಿಸೂ ಅಂತ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...