Home / ಕವನ / ಕವಿತೆ / ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ
ಯಾವಾಗಲೂ ಇರುತಾನ
ನಾನೆಚ್ಚರಿರಲಿ ನಿದ್ರಿಸುತಿರಲಿ
ತನ್ನಿಚ್ಛೆಯಂತೆ ಕುಣಿಸುತಾನ
ಕುಣಿಸುತಾನ ದಣಿಸುತಾನ
ಮನಸೋ‌ಇಚ್ಛೆ ಮಣಿಸುತಲು ಇರುತಾನ

ಎಲ್ಲರನು ಬಯ್ಯುತಾನ
ಬಡಿಯಲು ಕೈಯೆತ್ತುತಾನ
ಕೊಂದು ಕೂಗುತಾನ
ಯಾವಾಗಲೂ ಏನೊ ಒಂದು
ಸಂಚು ನಡೆಸುತಿರುತಾನ
ನಡೆವವರ ಕಾಲೆಳೆದು
ಬೀಳೋದು ನೋಡಿ ನಗುತಾನ

ಸತ್ಯ ಹೇಳಲು ಹೊರಟರೆ
ಇಕ್ಕಳ ಹಾಕಿ ಎಳೀತಾನ
ನ್ಯಾಯ ನುಡಿಯಲು ಹೊರಟರೆ
ಬೀಗ ಬಡಿದುಬಿಡುತಾನ

ಕಣ್ಣಿಗೆ ಪರದೆ ಕಟ್ಟುತಾನ
ಕಿವಿಗೆ ಗಂಗಳ ಮೆತ್ತುತಾನ
ಮನಕೆ ಮಂಕು ಹೊದಿಸುತಾನ
ಎದೆಗೆ ಸೀಸ ಹೊಯ್ಯುತಾನ
ಅಫೀಮು ತಿನ್ಸಿ ಮಲಗಿಸ್ತಾನ
ಕುಡಿಸಿ ನನ್ನ ತಲೀನೆ ಕೆಡಿಸಿಬಿಡ್ತಾನ

ದೇವರೆಂದರೆ ಅದು ಸೋಹಂ ಅಂತಾನ
ದೈವವೆಂದರೆ ಅದೂ ಸ್ವಯಂ ಅಂತಾನ
ಸ್ವರ್ಗ ಇರೋದು ತನ್ನೊಳಗೆ
ಸರ್‍ವಸಾಧನಾ ಮಾರ್‍ಗ ತನ್ನೊಳಗೆ
ಯಾರು ಯಾರಿಗೋ ಶರಣಾಗ್ತಿ
ತನಗೇ ಆಗು ಅಂತಾನ

ಮೊದಲ ಕೊಲೆಯೇ ಕಷ್ಟಂತ
ಅಮೇಲದೇ ಮಜಂತ
ಮೊದಲ ಹಾದರವೆ ಭೀತೀಂತ
ಆಮೇಲದೇ ಪ್ರೀತೀಂತ

ಪಾಪ ಪುಣ್ಯಗಳಿಲ್ಲಂತ
ಇರುವುದೊಂದೇ ಸ್ವಂತಾಂತ
ಸ್ವಂತಕೇನು ಬೇಕೋ ಅದ
ನೀಡೋದೆ ನಿನ್ನ ಸುಖಾಂತ

ಅಂತನೆ ಇರ್‍ತಾನೇನ ಮಾಡಲಿ
ಹೆಂಗೆ ಹೋರಾಡಲಿ ಇವನ
ನನ್ನೊಳಗೇ ಇರುವಾತನ
ನನ್ನ ಕೊಲ್ಲದೆ ನಾನಿವನ
ಹೆಂಗೆ ಕೊಲ್ಲಲಿ ಒಳಗಿನವನ
ಇವನಿರದೆ ನಾನಾದರು
ಹೆಂಗಿರಲಿ ಜೀವಸಹಿತ

ನಾ ಗಾಳಿಪಟವಾದರೆ
ಇವನೇ ದಾರಾಂತ
ಇವ ಜಗ್ಗದಿದ್ದರೆ ನಾ
ಬೀಳೋದು ಖಚಿತಾಂತ
ಎಳೆದಾಗಲೇ ನಾ ಮೇಲಕೆ ಮೇಲಕೆ
ಏರೋದಂತ
ಸ್ವರ್‍ಗವ ಕಂಡಂತನಿಸೋದಂತ
ಓ ದೇವರೆ ನನ್ನ
ಕ್ಷಮಿಸೂ ಅಂತ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...