ನೂಲೊಲ್ಲ್ಯಾಕ ಚೆನ್ನೀ?

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ರಾಟಲಿಲ್ಲೋ ಜಾಣಾ!
ರಾಟಲಿಲ್ಲೋ ಜಾಣಾ!

ಕತೆಗಾರ:
ಮನಿಯಾನ ಬಂಡೀ ಮುರಿಸಿ
ಮನಿಯಾನ ಬಂಡೀ ಮುರಿಸಿ
ರಾಟೀ ಮಾಡಿಸಿ ಕೊಟ್ಟಾ
ರಾಟೀ ಮಾಡಿಸಿ ಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಕದರಿಲ್ಲೊ ಜಾಣಾ!
ಕದರಿಲ್ಲೊ ಜಾಣಾ!

ಕತೆಗಾರ:
ಕೈಯಾನ ಗುದ್ದಲಿ ಮುರಿಸಿ
ಕೈಯಾನ ಗುದ್ದೆಲಿ ಮುರಿಸಿ
ಕದರ ಮಡಿಸಿ ಕೊಟ್ಟಾ
ಕದರ ಮಾಡಿಸಿ ಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಚಿಲ್ಲಿಲ್ಲೊ ಜಾಣಾ!
ಚಿಲ್ಲಿಲ್ಲೊ ಜಾಣಾ!

ಕತೆಗಾರ:
ಮನಿಯಾನ ಕೋಣವು ಕಡಿಸಿ
ಮನಿಯಾನ ಕೋಣವು ಕಡಿಸಿ
ಚಿಲ್ಲು ಮಾಡಿಸಿಕೊಟ್ಟಾ
ಚಿಲ್ಲು ಮಾಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಹಮ್ಮಿಗಿಲ್ಲಲೊ ಜಾಣಾ!
ಹಮ್ಮಿಗಿಲ್ಲಲೊ ಜಾಣಾ!

ಕತೆಗಾರ:
ನಡುವಿನ ಉಡದಾರ ಕಡಿದು
ನಡುವಿನ ಉಡದಾರ ಕಡಿದು
ಹಮ್ಮಿಗಿ ಮಾಡಿಸಿಕೊಟ್ಟಾ
ಹಮ್ಮಿಗಿ ಮಾಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಕಟ್ಟಿ ಇಲ್ಲಲೊ ಜಾಣಾ
ಕಟ್ಟಿ ಇಲ್ಲಲೊ ಜಾಣಾ

ಕತೆಗಾರ:
ಊರಾನ ವಡ್ಡರ ಕರಿಸಿ
ಊರಾನ ವಡ್ಡರ ಕರಿಸಿ
ಕಟ್ಟಿ ಕಟ್ಟಿಸಿಕೊಟ್ಟಾ
ಕಟ್ಟಿ ಕಟ್ಟಸಿಕೊಟ್ಟಾ

ಗಂಡ:
ನೊಲಲ್ಯಾಕ ಚೆನ್ನೀ!
ನೂಲಲ್ಯಾಕ ಚಿನ್ನೀ!

ಹೆಂಡತಿ:
ಗೆಳತ್ಯಾರಿಲ್ಲೊ ಜಾಣಾ!
ಗೆಳತ್ಯಾರಿಲ್ಲೊ ಜಾಣಾ!

ಕತೆಗಾರ:
ಓಣ್ಯಾಗಿನವರ ಕರಿಸಿ
ಓಣ್ಯಾಗಿನವರ ಕರಿಸಿ
ಗೆಳತ್ಯಾರ ಕೂಡಿಸಿಕೊಟ್ಟಾ
ಗೆಳತ್ಯಾರ ಕೂಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಗುಗ್ಗರಿಲ್ಲೊ ಜಾಣಾ!
ಗುಗ್ಗರಿಲ್ಲೊ ಜಾಣಾ! ,

ಕತೆಗಾರ:
ಗೋದಿ ಕಡ್ಲಿ ತರಿಸಿ
ಗೋದಿ ಕಡ್ಲಿ ತರಿಸಿ
ಗುಗ್ಗರಿ ಹಾಕಿಸಿಕೊಟ್ಟಾ
ಗುಗ್ಗರಿ ಹಾಕಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ಸೀ!

ಹೆಂಡತಿ:
ನನಗ ಬರೂದಿಲ್ಲೋ ಜಾಣಾ!
ನನಗ ಬರೂದಿಲ್ಲೋ ಜಾಣಾ!
****
ಹಾಸ್ಯದ ಹಾಡುಗಳು

ಮದುವೆಯ ಕಾಲದಲ್ಲಿ ಉಪಯೋಗಿಸುವ ಬೀಗರ ಹಾಡುಗಳು ಕೂಡ ಹಾಸ್ಯದವೇ. ಆದರೆ ಅವುಗಳಲ್ಲಿರುವುದು ಅಪಹಾಸ್ಯ. ಈ ವಿಭಾಗದಲ್ಲಿರುವವು ಅಂತಹವಲ್ಲ. ಇವು ನಕ್ಕು ನಗಿಸುವಂತಹವು. ಎರಡನೆಯ ವಿಭಾಗದೊಳಗಿನ ಹಾಡುಗಳಲ್ಲಿಯೂ ಒಂದು ಬಗೆಯ ಹಾಸ್ಯವಿದ್ದದ್ದು ನಿಜ. ಅದರೆ ಅದೂ ಇಂತಹದಲ್ಲ. ಅದಕ್ಕೆ ಸರಸವೆಂದು ಹೇಳಬಹುದು. ಆ ಪರಿಹಾಸ ಅಪಹಾಸಗಳಿಗಿಂತ ಭಿನ್ನವಾದ ಅಟ್ಟಹಾಸವು ಈ ವಿಭಾಗದಲ್ಲಿ ನಿರೂಪಿತವಾಗಿದೆ.

ನೂಲೊಲ್ಲ್ಯಾಕ ಚೆನ್ನಿ

ಈ ಹಾಡಿನ ಭಾವ ಸರಳವಿದೆ.

ಶಬ್ದಪ್ರಯೋಗಗಳು:- ಚಿಲ್ಲ=ಕದರುಹಾಕುವ ಕಿವಿ (ಚರ್ಮದ್ದು). ಹಮ್ಮಿಗಿ=ಚಕ್ರಕ್ಕೆ ಸುತ್ತುವ ದಾರ. ನಡುವಿನ=ಸೊಂಟದಲ್ಲಿರುವ. ಗುಗ್ಗರಿ=ತಿನ್ನುವುದಕ್ಕೆಂದು ಕುದಿಸಿದ ಕಾಳುಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪಕಾರಿ ಬ್ಯಾಕ್ಟರಿಯಾಗಳು (ಸೂಕ್ಷ್ಮಜೀವಿಗಳು)
Next post ಒಂದಿರುಳು

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys