Home / ಲೇಖನ / ಇತರೆ / ಸೆಂಡ್ ಎಂದರೇನು?

ಸೆಂಡ್ ಎಂದರೇನು?

ಇಡೀ ಜಗತ್ತಿನಲ್ಲಿ ಇಲ್ಲದ್ದನ್ನು ಅಮೆರಿಕ ಕಂಡು ಹಿಡಿದಿದೆ. ಅದೇ ಸೆಂಡ್ ಎಂದು.

ಸ್ಮಾರ್ಟ್‌ಫೋನ್‌ಗಳ ಮೂಲಕ ಇ-ಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಷನ್‌ನ್ನು ಅಮೆರಿಕ ಮತ್ತಷ್ಟು ಸರಳಗೊಳಿಸಿದೆ. ಇದನ್ನೇ ‘ಸೆಂಡ್’ ಎಂದು ಅಮೆರಿಕ ಹೆಸರಿಸಿರುವುದು!

ಆಪ್ ಬಳಸಿ ಇ-ಮೇಲ್ ಕಳುಹಿಸುವಾಗ ನೇರವಾಗಿ ವಿಳಾಸ ಪಟ್ಟಿಗೆ ಹೋಗಬಹುದು. ಇದು ಎಸ್‌ಎಂಎಸ್ ಕಳುಹಿಸಿದಷ್ಟೇ ಸರಳ.

ಈಗ ಸ್ಮಾರ್ಟ್‌ಫೋನಿನಲ್ಲಿ ಇ-ಮೇಲ್ ಕಳುಹಿಸಬೇಕೆಂದರೆ ಮೊದಲು ಇ ಮೇಲ್ ಸಂದೇಶ ಕಳುಹಿಸಬೇಕೋ ಅವರ ಇ-ಮೇಲ್ ವಿಳಾಸವನ್ನು ತುಂಬಬೇಕು. ಆದಾದ ಮೇಲೆ ಇ-ಮೇಲ್ ವಿಷಯವನ್ನು ಸಂಕ್ಷಿಪ್ತವಾಗಿ ಸಬ್ಜೆಕ್ಟ್ ಕಿಂಡಿಯಲ್ಲಿ ಬರೆಯಬೇಕು ಇವಿಷ್ಟೂ ಪ್ರಕ್ರಿಯೆಗಳನ್ನು ಪೂರೈಸಿದ ಮೇಲೆ ಸಂದೇಶ ಬರೆಯಬೇಕು.

ಆದರೆ ಸೆಂಡ್ ಮೂಲಕ ಇ-ಮೇಲ್ ಮಾಡುವಾಗ ಸಂದೇಶ ಬರೆದೊಡನೆ ನೇರವಾಗಿ ಇ-ಮೇಲ್ ವಿಳಾಸಗಳ ಪಟ್ಟಿಗೆ ಹೋಗಬಹುದು. ಈಗ ಫೋನ್ ನಂಬರ್‌ನೊಂದಿಗೆ ಜೋಡಿಸದ ಇ-ಮೇಲ್ ವಿಳಾಸಗಳಿದ್ದಲ್ಲಿ ಅಂತಹ ವಿಳಾಸಗಳನ್ನು ಈಗ ಹುಡುಕುವುದು ಕಷ್ಟ ಸಾಧ್ಯ.

ಆದರೆ ಸೆಂಡ್ ಆಪ್ ಇದ್ದಲ್ಲಿ ಅಂತಹ ಇ-ಮೇಲ್ ವಿಳಾಸಗಳನ್ನೂ ನೇರವಾಗಿ ಹುಡಕಬಹುದಾಗಿದೆ. ಇದಕ್ಕೆಂದೇ ಬೇರೆ ಅಪ್ಲಿಕೇಷನ್‌ನ ಅವಶ್ಯಕತೆ ಬೇಕಿಲ್ಲ. ಸೆಂಡ್ ಬಳಸಿದರೆ ಸಬ್ಜೆಕ್ಟ್ ಲೈನ್ ಮತ್ತು ಸಹಿಯ ಅಗತ್ಯ ಬೇಕಿಲ್ಲ. ಇ-ಮೇಲ್ ಸ್ವೀಕರಿಸುವವರೂ ಸೆಂಡ್ ಬಳಸುತ್ತಿದ್ದರೆ ಅವರು ಇ-ಮೇಲ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ಸೆಂಡ್ ನೀಡುವುದು.

ಈಗೀಗ ಈ ಅಪ್ಲಿಕೇಷನ್ ಐ-ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಮಾನಗಳಲ್ಲಿ ವಿಂಡೋಸ್ ಮತ್ತು ಆಂಡ್ರಾಯ್ಡ್ ತಂತ್ರಾಂಶ ಬಳಸುವ ಫೋನ್‌ಗಳಿಗೂ ಲಭ್ಯವಾಗಲಿದೆ. ತನ್ನದೇ ಕಾರಚರಣೆಯ ವ್ಯವಸ್ಥೆ ವಿಂಡೋಸ್ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ಈ ಆಪ್‌ನ್ನು ಒದಗಿಸುವ ಮೊತ್ತ ಮೊದಲೇ ತನ್ನ ಪ್ರತಿಸ್ಪರ್ಧಿ ಆಪಲ್ ಫೋನ್‌ಗಳಿಗೆ ಈ ಆಪ್ ಒದಗಿಸಿರುವ ಮೈಕ್ರೋಸಾಫ್ಟ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಬರು ಬರುತ್ತಾ ಏನೆಲ್ಲ ಹೊಚ್ಚ ಹೊಸತು ಕಂಡು ಹಿಡಿಯಬಹುದೋ ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...