Home / ಕವನ / ಕವಿತೆ / ಯಾರೆಂಬರು ಮುಗಿದುವೆಂದು ಬವರಾಂ?

ಯಾರೆಂಬರು ಮುಗಿದುವೆಂದು ಬವರಾಂ?

ಹತೋ ವಾ ಪ್ತವ್ಸ್ಯಸಿ ಸ್ವರ್‍ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ |
ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭)

ಯಾರಂಬರು ಮುಗಿದುವೆಂದು ಬವರಂ?
ನಂಬದಿರದು ಮರುಳರ ಮಾತೆ:
ನರನೆನ್ನವರಂ ನರನನ್ನೆವರಂ
ರಣಾಂಗಣವೆ ಶಾಂತಿಯ ಮಾತೆ!
ಶಾಂತಿಯೆ ನಿನ್ನಯ ಸಾಧನಮಾಗೆ
ಸದಾ ಸಿದ್ಧವಿರು ಯುದ್ಧಕ ಸಾಗೆ.

ಯುದ್ಧವಿಲ್ಲದಭಿವೃದ್ಧಿಯದುಂಟೆ?
ಯುದ್ಧದೆ ಮನುಜತೆಯ ವಿಕಾಸಂ-
ಬೆಂಕಿಯೊಳಲ್ಲವೆ ಕಬ್ಬಿಣ ದಾಂಟೆ
ಯತ್ರ ತಂತ್ರ ಶಕ್ತಿಯ ಸಾನಂ?
ಯೋಧನಾದ ನರನಮರಸಮಾನಂ,
ಯೋಧನೆಂದೆ ಸೃಷ್ಟಿಯ ಯಜಮಾನಂ.

ಕಟ್ಟಳೆಯೊಳೆ ಹಳಸಿದ ಬಾಳುವೆಗೆ
ಯುದ್ಧದಿ ನವಯೌವನ ಸಿದ್ಧಿ;
ಪರವಶತಗೆ ನಾಚದ ತಾಳುವೆಗೆ
ಯುದ್ಧದೊಳಾ ಪಾಪದ ಶುದ್ದಿ;
ಯುದ್ಧವೆ ಮೃತಜೀವನದುತ್ಥಾನಂ,
ಯುದ್ಧವೆ ಉತ್ಕ್ರಾಂತಿಯ ಸೋಪಾನಂ.

ನರತೆಯೊಂದ ನರನಾದಡನೇಕಂ,
ಏಕಾರ್‍ಥದ ಮಂದಿಯೆ ಜನತ;
ಜನತ ಜನತೆಯೊಳಗಿರದು ಏವೇಕಂ-
ಸ್ವಾರ್ಥಕಲ್ಲವಲ್ಲವೆ ತನತೆ?
ಸ್ವಾರ್ಥತೆ ಪರ್‍ಆರ್‍ಥದಲಿ ಕೆಯ್ಮಾಡ
ಸಂಗರವಾ ಪ್ರಸಭವನೀಡಾಡೆ

ಸರ್‍ವಜೀವಿಗಳೊಳೊರ್‍ವನೆ ಮನುಜಂ
ವರಹಿತ ಗೆಯಲೆಂದೊಗೆತಂದು,
ತನ್ನ ಹಂಗನವಮನ್ನಸಿ ದನುಜಂ
ತಾನೆನೆ ಪರರಲಿ ಮಲೆವಂದು,
ಕೇಸುರಿ ಬಲೆಯ ಕೇಸರಿಗೆಂತು
ಸಮರವಾತನಂ ಕಮರಿಸಲಂತು

ಸಾಲದು ನರಜನ್ಮವ ಬರಿದೆತ್ತ-
ಜನ್ಮಮಾತ್ರವೇತರ ಕಾರ್‍ಯಂ?
ನರನಹೆಯಾ? ದುಡಿ ನರತೆಯ ಮತ್ತ-
ದ್ವಿಜನಾಗದ ಮನುಜನನಾರ್‍ಯಂ!
ಪರರಳಲಿನ ವರಿಹರಿಕಗೆ ನಂದು
ಹೊಸ ಬಾಳೆತ್ತಿದವನೆ ದ್ವಿಜನಿಂದು.

ಅನ್ಯನಲ್ಲ, ನೀನೆ ನನ್ನ ಯೋಧಂ!
ಕಾದೆನಲಾ ಪ್ರಕೃತಿಯೆ ನಿನಗೆ.
ಕಟ್ಟಾಜ್ಞೆಯದಕ ತಟ್ಟಿ ವಿರೋಧಂ
ಎಲ್ಲಿನೆಲ್ಲಿಗುರುಳಿದೆ ಕೊನೆಗೆ!
ಕತ್ತಿಗೆ ಬಾರದ ಕಬ್ಬಿಣ ಬಾಗಿ
ಸುಟ್ಟಪುದನುದಿನ ಸಟ್ಟುಗಮಾಗಿ
ಅಳಿವೆಯೊ? ಉಳಿವೆಯೊ? ಪ್ರಶ್ನೆಯನಿತ್ತೆ-
ಮೂರನೆಯದಿಲ್ಲ ನಿನಗಾಯ.
ಕಾದದಡೆ ಸಾವಿಗವುತಣವಿತ್ತೆ
ಕಾದೆ ಸದೆದೆ ಸಾವನೆ ಸಾಯ!
ಪ್ರಬಲರಬಲರಂ ಕಬಲಿಸೆ, ಹಗೆಯಾ
ಕಾದೊ ಕಾದದೆಯೊ ಬದುಕುವೆ, ಬಗೆಯಾ!

ಕದೆ ಸಾವೆನೆಂದಕಟಾ ಗಾಸಿಯೊ?
ಕಾದದವರಿಗಿಲ್ಲವ ಸಾಯೆ?
ಕತ್ತಿಯಾಗಿ ಹಾಯೆ ಸಾಯೆ ವಾಸಿಯಾ?
ನಾಲದಂತ ಕಾಲಲಿ ತೇಯೆ?
ಸಾವಿಗಂಜೆ ಸಾವಿರ ಸಲ ಸತ್ತ,
ಸಾವನಂಜದವನೂಮ್ಮೆಯನಿತ್ತ.

ಕಾದೆ ಸಾವನೆಂದಲ್ಲಿಗೆ ಸರಿಯ,
ಬಾಳ್ವೆ ಸಾವಿನೊಳೆ ನೆರವೇರೆ?
ಬಾಳ್ವೆ ಬಾಳತಕ್ಕುದೊ ನಾನರಿಯೆ,
ಸಾವು ಸಾಯತಕ್ಕುದು ನೇರೆ!
ಧರ್‍ಮಯುದ್ಧವೊಂದಲ್ಲದೆ ಬೇರ
ದಾರಿಯೆ ವೀರಸ್ವರ್‍ಗವನೇರೆ?

ಸೆರೆಗೇಕಂಜುವೆ? ನೆರೆಯಾಳಲ್ಲವ
ತನ್ನ ಮನೆಯೊಳನ್ಯರ ತೊತ್ತು?
ಸಿಕ್ಕ ಮಡೆಯ ಮುಕ್ಕುವ ಗಿಳಿ ಬಲ್ಲವೆ
ಗೂಡೊ ಬೀಡೊ ಎನುವಾ ಗೊತ್ತು?
ಬಸುರಲಿ ಸೋಸಿಲ್ಲವೆ ನೀ ಸೆರೆಯಾ?
ಹೊಸ ಹುಟ್ಟಿನ ಬಸಿರಾ ಸೆರೆಯರಿಯಾ!

ತನ್ನ ಕಡುಕನ್ನೆಲ್ಲ ಮುನ್ನ ಕಾದು,
ತಾಯಿಳೆಯ ಬಿಡುಗಡೆಗೆ ಕಾದು,
ನರತೆಯ ಸರಿಸೋದರತೆಗೆ ಕಾದು,
ಮನುಜನ ವಿಮೋಚನೆಗೆ ಕಾದು.
ಪೂಸತೆ ಭವಿಷ್ಯವ ನೊಸಯಿಸೆ ಕಾದು,
ಬದುಕಿದೊಂದು ಕೂಳುಗುಳವೆನೆ ಕಾದು.

ನೀನಜರಾಮರನಹೆಯಾ? ಕಾದು-
ನರರಿಗೆ ವೆರೆತಮರತಯೊಳವೆ?
ಕಂಚೊ ಕಲ್ಲೊ ಕತೆ ಕವಿತೆಯೊ ಕಾದು
ನಿನ್ನನುಳಿಸೆ ನಿನಗಿನ್ನಳಿವೆ?
ಗೆದ್ದರೆ ಹೊಸ ಹೊತ್ತೆದ್ದುದು ಮುಂದೆ.
ಬಿದ್ದರೆ ನೇಸರಿನುದ್ದಕೆ ನಿಂದೆ!

ನಿನಗೆ ಕಾದೆನುವೆನಿದೊ ಧರ್‍ಮರಣಂ,
ಪರಾಕ್ರಮಣವದು ರಣವಲ್ಲ,
ವರರ ಬಿಡುವಿನವಹರಣವೆ ಮರಣಂ-
ಬಿಡುವ ತುಡುಕಿ ಕೆಡದವರಿಲ್ಲ.
ಬಿಡುಗಡೆ ಎನೆ ಜನಜನತೆಯ ಸೊತ್ತು,
ಕಳೆವನು ಸೆಳೆವನು ನಿಯತಿಯ ತುತ್ತು.

ಸಗ್ಗದಿಂದ ಸೋನೆಯಂತ ಸುರಿಯದು,
ಬಿಡುಗಡೆ ಗಡ ಬಾರದು ಬರಿದೆ!
ಕಾಯ್ವೊಡೆಯಗೆ ಬರಿ ಬಾಯಿಗೆ ದೊರೆಯದು-
ಕಾದದ ಕೆಯ್ಗೆಂದಿಗುಮರಿದೆ!
ದುಡಿಯದೆ ಪಡೆದಾ ಬಿಡುಗಡೆಯಲ್ಲ-
ರಣಹೇಡಿಗೆ ದೇವರ ನೆರವಿಲ್ಲ.

ಆಯುಧವಿಲ್ಲೆಂದೆದೆಗೆಡಬೇಡ-
ಯೋಧನೆತ್ತಲತ್ತಲೆ ಕತ್ತಿ!
ಸಾಧಕನೆ ತನ್ನ ಸಾಧನ, ನೋಡ!
ಹೇಡಿ ಏವನಾಯುದ್ಧದತ್ತಿ?
ಮನದೊರೆಯಲಿ ನಿನಗನುತಹ ಸಿರಿಯ
ಹೊತ್ತು ಕಾವ ಬಗೆಗತ್ತಿಯ ಹಿರಿಯ!

ನೆರವಿಗೆ ಯಾರೆಂದೇತಕ ಖನ್ನ
ಕಾದಿಸುವೊಡೆಯನೆ ಜತೆಗಿಲ್ಲಾ?
ಎಂದಿನಿಂದ ಕಾದವನಿದೊ! ನಿನ್ನ
ನುಳಿದು ತಾನೆ ಕಾದುವನಲ್ಲ.
ಕಂಡಿಸೆದೆಯನಿಡು ಗಂಡಡಿ ಮುಂದೆ
ನೂಕು ರವೀಂದು ಪತಾಕೆಯ ಹಿಂದೆ

ಕೇಳದೆ ಜಗದಿ ಗೋಳಿನ ಕಾಳ?
ಕಳಕಳಿಸದೆ ನಿನ್ನೆದೆಯಾರ?
ನಾಳೆ ಎಂಬ ಜಡಗೆಂದಿಗು ನಾಳ.
ಬಂದೆನೆಂಬ ಕುದುರೆಗೆ ಹಾರ!
ನೆಟ್ಟನೆ ರಣರಂಗದಿ ಮುಂಬರಿಯೊ,
ಜಯ ಶಾಂತಿ ಎಂದಶಾಂತಿಯನಿರಿಯಾ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...