Home / ಕಥೆ / ಸಣ್ಣ ಕಥೆ / ಶ್ವೇತವರಾಹಸ್ವಾಮಿಯ ವಿಗ್ರಹ

ಶ್ವೇತವರಾಹಸ್ವಾಮಿಯ ವಿಗ್ರಹ

ಚಿಕ್ಕದೇವರಾಜ ಒಡೆಯರು ರಾಜ್ಯವನ್ನಾಳುತ್ತಿದ್ದಾಗ ತಂಜಾವೂರಿನಲ್ಲಿ ವೆಂಕೋಜಿಯ ಮಗ ಸಾಹುಜಿ ಎಂಬಾತನು ಆಳುತ್ತಿದ್ದನು. ಒಂದು ದಿನ ಈ ಸಾಹುಜಿಯು “ಈ ಚಿಕ್ಕದೇವರಾಜನದು ಎಷ್ಟು ಗರ್ವ! ಅವನ ಸಂಸ್ಥಾನದಲ್ಲಿ ಮೇಲುಕೋಟೆಯೊಂದು ವಿನಾ ಪ್ರಸಿದ್ದ ವಿಷ್ಣು ಕ್ಷೇತ್ರವನ್ನಾವುದೂ ಇಲ್ಲ. ನಮ್ಮ ದೇಶದಲ್ಲಾದರೋ ಶ್ರೀರಂಗ, ಶ್ರೀಮುಷ್ಟ, ಕುಂಭಕೋಣ, ಕಂಚಿ, ಮನ್ನಾರಗುಡಿ ಮುಂತಾದ ವಿಷ್ಟು ಕ್ಷೇತ್ರಗಳೇ ಅಲ್ಲದೆ ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ಮುಂತಾದ ಶಿವಕ್ಷೇತ್ರಗಳೂ ಇನ್ನೂ ಅನೇಕ ಪುಣ್ಯಸ್ಥಳಗಳೂ ಇವೆ. ಇವನದೇನು ಹೆಚ್ಚು-ಇವನ ಸಣ್ಣ ರಾಜ್ಯದ್ದೇನು ದೊಡ್ಡಸ್ತಿಕೆ?” ಎಂದು ಹಂಗಿಸಿ ಮಾತನಾಡಿದನು. ಈ ವರ್ತಮಾನವನ್ನು ಕೇಳಿ ಚಿಕ್ಕದೇವ ರಾಜಒಡೆಯರು ಖಿನ್ನತೆಯನ್ನೂ ಕೋಪವನ್ನೂ ಧರಿಸಿ ಯೋಚಿಸಿ, ಕಡೆಗೆ ಉಪಾಯದಿಂದ ಶ್ರೀಮುಷ್ಟದಲ್ಲಿದ್ದ ಶ್ವೇತವರಾಹಸ್ವಾಮಿಯ ಮೂರ್ತಿಯನ್ನು ತರಿಸಿಕೊಳ್ಳಬೇಕೆಂದು ನಿಶ್ಚಯಿಸಿದರು. ಕೂಡಲೆ ಜಾಣರೂ ಯುಕ್ತಿವಂತರೂ ಆಗಿದ್ದ ಜನರು ಕೆಲವರನ್ನು ಕರೆಯಿಸಿ, ಅವರಿಗೆ ದ್ರವ್ಯವನ್ನು ಕೊಟ್ಟು, ರಹಸ್ಯವಾಗಿ ಆ ವಿಗ್ರಹವನ್ನು ತರಲು ಕೊಟ್ಟು ಕಳುಹಿಸಿದರು. ಅವರು ಶ್ರೀಮುಷ್ಟಕ್ಕೆ ಹೋಗಿ ಅಲ್ಲಿಯ ಅರ್ಚಕ ಮುಂತಾದವರಿಗೆ ಹಣವನ್ನು ಕೊಟ್ಟು, ರಾತ್ರಿ ವೇಳೆಯಲ್ಲಿ ಯಾರೂ ಅರಿಯದಂತೆ ಆ ಶ್ವೇತವರಾಹಸ್ವಾಮಿಯ ಪ್ರತಿಮೆಯನ್ನು ಬಿಜಮಾಡಿಸಿಕೊಂಡು ಶ್ರೀರಂಗಪಟ್ಟಣವನ್ನು ಸೇರಿದರು. ಆಗ ದೊರೆಗಳು ಆನಂದಪಟ್ಟು ಅರಮನೆಯ ಬಲಗಡೆಯಲ್ಲಿ ವಿಚಿತ್ರವಾದ ಒಂದು ಗುಡಿಯನ್ನು ಕಟ್ಟಿಸಿ ಅಲ್ಲಿ ಅದನ್ನು ಪ್ರತಿಷ್ಠೆ ಮಾಡಿಸಿದರು.
*****
[ವಂಶರತ್ನಾಕರ ೧೧೦-೧೧೧, ಮತ್ತು ವಂಶಾವಳಿ ಪುಟ ೧೩೯-೧೪೦. ವಿಚಾರಕ್ಕೆ ಹೊಸ ಗೆಜಟಿಯರ್ ಸಂ. ೨, ಭಾಗ ೪ ಮತ್ತು ಡಾ|| ಯಸ್. ಕೃಷ್ಣ ಸ್ವಾಮಯ್ಯ೦ಗಾರ್ಯರು ಬರೆದ ಲೇಖನಗಳನ್ನು ನೋಡಬೇಕು.]

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...