Home / ಕವನ / ಅನುವಾದ / ಸೃಷ್ಟಿ

ಸೃಷ್ಟಿ

ಮೂಲ: ಮಣೀಂದ್ರ ಗುಪ್ತ

“ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ
ಆಗಬೇಕಿದೆ ಅಂತ ಇಟ್ಟುಕೊ
ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ
ಹೇಳು ನೋಡೋಣ ಆ ಹೊಸಗೋಲದಲ್ಲಿ
ಏನೇನಿರಬೇಕು ಅಂತ ಬಯಸುತ್ತೀಯೆ ನೀನು?”

“ಸೂರ್ಯ, ಚಂದ್ರ, ಗಾಳಿ, ನದಿ ಸರೋವರಗಳು.
ಅಂದ ಹಾಗೇ ಮರೆತೆ
ಚಿಗುರು, ಹೂ ಮರಗಳು”

“ನೀನಿರುವುದಿಲ್ಲವೇ ?”

“ಎಲ್ಲಾದರೂ ಉಂಟೆ? ಹೇಳುವ ಅಗತ್ಯವಿದೆಯೆ?
ನಾನು ಇದ್ದೇ ಇರುವೆ”

“ಇನ್ನೂ ಏನಾದರೂ?”

“ಮುಗಿಲು ಅವಕ್ಕೆ ಬಣ್ಣ
ನೀರಲ್ಲಿ ಮೀನುಗಳು, ಗಾಳಿಯಲ್ಲಿ ಹಕ್ಕಿಗಳು”

“ಋತುಗಳು ಸ್ವಪ್ನಗಳು ನೆನಪುಗಳು ಮರವೆಗಳು
ಬೇಡವೆ ಇವೆಲ್ಲ?”

“ಸ್ವಲ್ಪ ಯೋಚಿಸಿ ಎಲ್ಲ ಮತ್ತೆ ಹೇಳುವೆ ತಾಳು
ತಪ್ಪಾಗಬಾರದಲ್ಲ”

“ಮೋಹಕ ಬೆಳಗಿನ ದೃಶ್ಯ, ಮಧ್ಯಾಹ್ನ, ಸಂಜೆ?
ನವಿಲಗರಿ ಕಾಂತಿಯ ಮುಗಿಲಮರೆ ಶಿಖರ?
ಹಣ್ಣುಗಳು, ಮಗುವಿಗೆ ಬಾಯ್ಬಿಡುವ ಹೆಣ್ಣುಗಳು?
ಹಬ್ಬ ಹರಿದಿನಗಳು, ಮದ್ದುಗುಂಡುಗಳು,
ಯುದ್ಧ ಜಯ ಸೋಲುಗಳು?
ಬೇಡವೆ ಹೊಟೇಲುಗಳು, ಜಿಂಕೆಗಳು ಕುದುರೆಗಳು,
ರೈಲು ಕಾರುಗಳು?”

“ಆಹ! ಬೇಡದೆ ಉಂಟೆ?”

“ನೃತ್ಯ ಸಂಗೀತ ಚಿತ್ರ, ಕಟು ತೀಕ್ಷ್ಯ ಮಧುಗಳು?
ಜೇನಿನ ರುಚಿ ಮರೆಸುವ ಸಲ್ಲಾಪ ಸುರತಗಳು?
ಹಕ್ಕಿಗಳ ಸಿಕ್ಕಿಸಿ ನೆಲಕ್ಕೆಳೆವ ಬಲೆಗಳು?”

“ಎಂಥದೋ ತೊಡಕಾದ ಬಲೆಯೊಳಗೆ ನನ್ನನ್ನು
ಸಿಕ್ಕಿಸುತ್ತಿರುವೆ.
ದಟ್ಟಮಾವಿನ ಮರದ ಹಚ್ಚನೆಯ ತೋಪಿನಲ್ಲಿ
ದಿಕ್ಕುಕಾಣದೆ ನಾನು ನಿಂತಿದ್ದೇನೆ.
ಸತ್ತ ಹುಡುಗನನ್ನು ಸುಡಲು ಒಯ್ಯುತ್ತಿರುವೆ
ಸುತ್ತಲೂ ಸಂಜೆಕಾಂತಿಯ ತೊಯಿಸಿ ಸುರಿವ ಮಳೆ
ಮೋಹಕ ಭಯಾನಕ!
ಕಾಪಾಡು ದೇವರೇ
ಹೋಗಬೇಕಿದೆ ನಾನು ಸುಡುವ ಜಾಗಕ್ಕೆ, ನನ್ನ ಕೆಲಸಕ್ಕೆ”

“ಸರಿ, ಹೋಗು, ಯೋಚಿಸು
ವಿಶ್ವವನು ಸೃಷ್ಟಿಸಿದ ದೈವ ನಿನಗಿಂತ ಎಷ್ಟು
ಎತ್ತರದ ಕವಿಯೆಂದು”
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...