Home / ಲೇಖನ / ಇತರೆ / ಅರ್ಥ

ಅರ್ಥ

ಯಸ್ಯಾರ್ಧಾಸ್ಸ ಮಹಾಭಾಗೋ ಯಸ್ಯಾರ್ಥಾ ಮಹಾಗುಣಾಃ |
ಹರ್ಷಃ ಕಾಮಶ್ಚ ದರ್ಪಶ್ಚ ಧರ್‍ಮಃ ಕ್ರೊಧಶ್ಚಮೋ ದಮಃ ||
ಅರ್ಧಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ ||

ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳು ಪುರುಷಾರ್ಥಗಳೆಂದು ಗಣಿಸಲ್ಪಟ್ಟಿರುವುವು. ಇವುಗಳೆಲ್ಲಲಾ ಅರ್ಥವು ಇಹಪರಸೌಖ್ಯಗಳಿಗೆ ಅತ್ಯಂತ ಸಾಧಕವಾದದ್ದು. ಧರ್ಮದಿಂದ ಯಾರು ಅರ್ಥವನ್ನು ಸಂಪಾದಿಸುವರೋ, ಹಾಗೆ ಸಂಪಾದಿಸಿದ ಅರ್ಥವನ್ನು ಯಾರು ಸರಿಯಾಗಿ ರಕ್ಷಿಸಿಕೊಳ್ಳುವರೋ, ಹಾಗೆ ರಕ್ಷಿಸಲ್ಪಟ್ಟ ಅರ್ಥವನ್ನು ಯಾರು ಧರ್ಮದಿಂದಲೂ, ವಿತರಣೆಯಿಂದಲೂ, ಮಿತವ್ಯಯಾಸಕ್ತಿಯಿಂದಲೂ ವ್ಯಯಮಾಡುವರೋ ಅವರು ಈ ಲೋಕದಲ್ಲಿ ಸುಖವಾಗಿರುವುದಲ್ಲದೆ, ಲೋಕಾಂತರದ ಸುಖವನ್ನು ಅಪ್ರಯತ್ನಪೂರ್ವಕವಾಗಿ ಹೊಂದುವರು. ಆದುದರಿಂದ ಧನವನ್ನು ಹೇಗೆ ಧರ್ಮದಿಂದ ಅರ್ಜಿಸಬೇಕೋ ಅದನ್ನು ತಿಳಿದುಕೊಳ್ಳುವುದು ಸರ್ವರಿಗೂ ಮುಖ್ಯ ಕರ್ತವ್ಯವು. ಧನವಂತನು ಕುಲೀನನೆಂಬುದಾಗಿಯೂ, ಚತುರನೆಂಬುದಾಗಿಯೂ, ಸಕಲ ಗುಣ ಸಂಪನ್ನನೆಂಬುದಾಗಿಯೂ, ವಿದ್ಯಾವಂತನೆಂಬುದಾಗಿಯೂ ಭಾವಿಸಲ್ಪಡುವನು. ದ್ರವ್ಯವಂತನನ್ನು ಸರ್ವರೂ ಆಶ್ರಯಿಸುವರು. ಧನಹೀನನಾದವನು ಸತ್ಕುಲಪ್ರಸೂತನಾಗಿದಾಗ್ಯೂ, ವಿದ್ಯಾವಂತನಾದಾಗ್ಯೂ, ಸದ್ಗುಣವುಳ್ಳವನಾದಾಗ್ಯೂ ಪೂಜ್ಯನಾಗುವುದು ಕಷ್ಟ. ತಂದೆತಾಯಿಗಳು, ಒದಹುಟ್ಟಿದವರು, ಹೆಂಡತಿ, ಮಕ್ಕಳು, ಬಂಧುಗಳು, ಸ್ನೇಹಿತರು ಇವರಲ್ಲಿ ಯಾರೂ ಧನಹೀನನನ್ನು ಲಕ್ಷ್ಯಮಾಡುವುದಿಲ್ಲ. ಅನ್ನ ವಸ್ತ್ರಗಳನ್ನು ಸಂಪಾದಿಸಿಕೊಂಡು ಪರಾಧೀನರಾಗದೆ ಕೂಡಿದಮಟ್ಟಿಗೆ ಸ್ವತಂತ್ರವಾಗಿ ಬದುಕುವ ಪ್ರಯತ್ನವನ್ನು ಮಾಡುವುದು ಸರ್‍ವರಿಗೂ ಮುಖ್ಯ ಕರ್ತವ್ಯವು. ಆದುದರಿಂದ ಧನಾರ್ಜನೆಯ ಉಪಾಯಗಳನ್ನು ತಿಳಿದುಕೊಂಡು ಅವುಗಳನ್ನು ಆಚರಣೆಗೆ ತಂದುಕೊಳ್ಳುವದು ಸರ್ವರಿಗೂ ಮುಖ್ಯ ಕರ್ತವ್ಯವು, ನಿರ್ಧನನಾದವನ ಮನೋರಥಗಳೆಲ್ಲವೂ ಬೇಸಿಗೆಕಾಲದ ತೊರೆಗಳಂತೆ ಶುಷ್ಕವಾಗುವುವು. ಸಮಸ್ತ ದುಃಖಗಳಿಗಿಂತಲೂ ದಾರಿದ್ರ್‍ಯವು ಅತ್ಯಂತ ದುಸ್ಸಹವಾದದ್ದು. ಆದುದರಿಂದಲೇ ಕುಂತಿಯು ತನ್ನ ಸೊಸೆಯಾದ ಸುಭದ್ರೆಗೆ ಆಶೀರ್ವಾದ ಮಾಡಿದಾಗ ಭಾಗ್ಯವಂತನನ್ನು ಹೆರು ಎಂದು ಹರಿಸಿದಳು. ಶೂರರಾಗಿಯೂ ಪಂಡಿತರಾಗಿಯೂ ಇದ್ದ ಮಕ್ಕಳನ್ನು ಪಡೆದಾಗ್ಯೂ ತನಗೂ ತನ್ನ ಮಕ್ಕಳಿಗೂ ವನವಾಸಾದಿ ಕಷ್ಟಗಳು ಪ್ರಾಸವಾದದ್ದನ್ನು ಸ್ಮರಿಸಿಕೊಂಡು ಕುಂತೀದೇವಿಯು ಈ ರೀತಿಯಲ್ಲಿ ಹರಸಿರಬಹುದು. ದ್ರವ್ಯವು ಸಂತೊಷಕ್ಕೂ, ಇಷ್ಟಾರ್ಥ ಪೂರ್ತಿಗೂ, ದರ್ಪಕ್ಕೂ, ಧರ್ಮಕ್ಕೂ, ಇಹಪರಸಾಧನೆಗಳಿಗೂ ಅತ್ಯಂತ ಸಾಧಕವಾಗುವುದು. ಈ ವಿಷಯಗಳನ್ನು ಪರ್ಯಾಲೋಚಿಸಿ ಎಲ್ಲಾ ವಿದ್ಯಾರ್ಥಿಗಳೂ ಧರ್ಮದಿಂದ ಧನವನ್ನು ಅರ್ಜಿಸುವುದನ್ನೂ ಆರ್ಜಿಸಿದ ದ್ರವ್ಯವನ್ನು ವ್ಯರ್ಥವಾಗಿ ಕಳಿಯದೆ ಇರುವುದನ್ನೂ ಅತ್ಯಾವಶ್ಯಕವಾದ ವ್ಯಯಗಳಿಗೆ ವಿನಿಯೋಗಿಸುವುದನ್ನೂ ತಿಳಿದುಕೊಳ್ಳುವುದು ಆವಶ್ಯಕ. ಈ ವಿಷಯಕ್ಕೆ ವಿದ್ಯಾರ್ಥಿಗಳ ಗಮನವು ಹೇಗೋ ಹಾಗೆ ಇತರರ ಗಮನವೂ ಕೊಡಲ್ಪಡುವುದೆಂದು ನಂಬಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...