Home / ಲೇಖನ / ಇತರೆ / ಅರ್ಥ

ಅರ್ಥ

ಯಸ್ಯಾರ್ಧಾಸ್ಸ ಮಹಾಭಾಗೋ ಯಸ್ಯಾರ್ಥಾ ಮಹಾಗುಣಾಃ |
ಹರ್ಷಃ ಕಾಮಶ್ಚ ದರ್ಪಶ್ಚ ಧರ್‍ಮಃ ಕ್ರೊಧಶ್ಚಮೋ ದಮಃ ||
ಅರ್ಧಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ ||

ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳು ಪುರುಷಾರ್ಥಗಳೆಂದು ಗಣಿಸಲ್ಪಟ್ಟಿರುವುವು. ಇವುಗಳೆಲ್ಲಲಾ ಅರ್ಥವು ಇಹಪರಸೌಖ್ಯಗಳಿಗೆ ಅತ್ಯಂತ ಸಾಧಕವಾದದ್ದು. ಧರ್ಮದಿಂದ ಯಾರು ಅರ್ಥವನ್ನು ಸಂಪಾದಿಸುವರೋ, ಹಾಗೆ ಸಂಪಾದಿಸಿದ ಅರ್ಥವನ್ನು ಯಾರು ಸರಿಯಾಗಿ ರಕ್ಷಿಸಿಕೊಳ್ಳುವರೋ, ಹಾಗೆ ರಕ್ಷಿಸಲ್ಪಟ್ಟ ಅರ್ಥವನ್ನು ಯಾರು ಧರ್ಮದಿಂದಲೂ, ವಿತರಣೆಯಿಂದಲೂ, ಮಿತವ್ಯಯಾಸಕ್ತಿಯಿಂದಲೂ ವ್ಯಯಮಾಡುವರೋ ಅವರು ಈ ಲೋಕದಲ್ಲಿ ಸುಖವಾಗಿರುವುದಲ್ಲದೆ, ಲೋಕಾಂತರದ ಸುಖವನ್ನು ಅಪ್ರಯತ್ನಪೂರ್ವಕವಾಗಿ ಹೊಂದುವರು. ಆದುದರಿಂದ ಧನವನ್ನು ಹೇಗೆ ಧರ್ಮದಿಂದ ಅರ್ಜಿಸಬೇಕೋ ಅದನ್ನು ತಿಳಿದುಕೊಳ್ಳುವುದು ಸರ್ವರಿಗೂ ಮುಖ್ಯ ಕರ್ತವ್ಯವು. ಧನವಂತನು ಕುಲೀನನೆಂಬುದಾಗಿಯೂ, ಚತುರನೆಂಬುದಾಗಿಯೂ, ಸಕಲ ಗುಣ ಸಂಪನ್ನನೆಂಬುದಾಗಿಯೂ, ವಿದ್ಯಾವಂತನೆಂಬುದಾಗಿಯೂ ಭಾವಿಸಲ್ಪಡುವನು. ದ್ರವ್ಯವಂತನನ್ನು ಸರ್ವರೂ ಆಶ್ರಯಿಸುವರು. ಧನಹೀನನಾದವನು ಸತ್ಕುಲಪ್ರಸೂತನಾಗಿದಾಗ್ಯೂ, ವಿದ್ಯಾವಂತನಾದಾಗ್ಯೂ, ಸದ್ಗುಣವುಳ್ಳವನಾದಾಗ್ಯೂ ಪೂಜ್ಯನಾಗುವುದು ಕಷ್ಟ. ತಂದೆತಾಯಿಗಳು, ಒದಹುಟ್ಟಿದವರು, ಹೆಂಡತಿ, ಮಕ್ಕಳು, ಬಂಧುಗಳು, ಸ್ನೇಹಿತರು ಇವರಲ್ಲಿ ಯಾರೂ ಧನಹೀನನನ್ನು ಲಕ್ಷ್ಯಮಾಡುವುದಿಲ್ಲ. ಅನ್ನ ವಸ್ತ್ರಗಳನ್ನು ಸಂಪಾದಿಸಿಕೊಂಡು ಪರಾಧೀನರಾಗದೆ ಕೂಡಿದಮಟ್ಟಿಗೆ ಸ್ವತಂತ್ರವಾಗಿ ಬದುಕುವ ಪ್ರಯತ್ನವನ್ನು ಮಾಡುವುದು ಸರ್‍ವರಿಗೂ ಮುಖ್ಯ ಕರ್ತವ್ಯವು. ಆದುದರಿಂದ ಧನಾರ್ಜನೆಯ ಉಪಾಯಗಳನ್ನು ತಿಳಿದುಕೊಂಡು ಅವುಗಳನ್ನು ಆಚರಣೆಗೆ ತಂದುಕೊಳ್ಳುವದು ಸರ್ವರಿಗೂ ಮುಖ್ಯ ಕರ್ತವ್ಯವು, ನಿರ್ಧನನಾದವನ ಮನೋರಥಗಳೆಲ್ಲವೂ ಬೇಸಿಗೆಕಾಲದ ತೊರೆಗಳಂತೆ ಶುಷ್ಕವಾಗುವುವು. ಸಮಸ್ತ ದುಃಖಗಳಿಗಿಂತಲೂ ದಾರಿದ್ರ್‍ಯವು ಅತ್ಯಂತ ದುಸ್ಸಹವಾದದ್ದು. ಆದುದರಿಂದಲೇ ಕುಂತಿಯು ತನ್ನ ಸೊಸೆಯಾದ ಸುಭದ್ರೆಗೆ ಆಶೀರ್ವಾದ ಮಾಡಿದಾಗ ಭಾಗ್ಯವಂತನನ್ನು ಹೆರು ಎಂದು ಹರಿಸಿದಳು. ಶೂರರಾಗಿಯೂ ಪಂಡಿತರಾಗಿಯೂ ಇದ್ದ ಮಕ್ಕಳನ್ನು ಪಡೆದಾಗ್ಯೂ ತನಗೂ ತನ್ನ ಮಕ್ಕಳಿಗೂ ವನವಾಸಾದಿ ಕಷ್ಟಗಳು ಪ್ರಾಸವಾದದ್ದನ್ನು ಸ್ಮರಿಸಿಕೊಂಡು ಕುಂತೀದೇವಿಯು ಈ ರೀತಿಯಲ್ಲಿ ಹರಸಿರಬಹುದು. ದ್ರವ್ಯವು ಸಂತೊಷಕ್ಕೂ, ಇಷ್ಟಾರ್ಥ ಪೂರ್ತಿಗೂ, ದರ್ಪಕ್ಕೂ, ಧರ್ಮಕ್ಕೂ, ಇಹಪರಸಾಧನೆಗಳಿಗೂ ಅತ್ಯಂತ ಸಾಧಕವಾಗುವುದು. ಈ ವಿಷಯಗಳನ್ನು ಪರ್ಯಾಲೋಚಿಸಿ ಎಲ್ಲಾ ವಿದ್ಯಾರ್ಥಿಗಳೂ ಧರ್ಮದಿಂದ ಧನವನ್ನು ಅರ್ಜಿಸುವುದನ್ನೂ ಆರ್ಜಿಸಿದ ದ್ರವ್ಯವನ್ನು ವ್ಯರ್ಥವಾಗಿ ಕಳಿಯದೆ ಇರುವುದನ್ನೂ ಅತ್ಯಾವಶ್ಯಕವಾದ ವ್ಯಯಗಳಿಗೆ ವಿನಿಯೋಗಿಸುವುದನ್ನೂ ತಿಳಿದುಕೊಳ್ಳುವುದು ಆವಶ್ಯಕ. ಈ ವಿಷಯಕ್ಕೆ ವಿದ್ಯಾರ್ಥಿಗಳ ಗಮನವು ಹೇಗೋ ಹಾಗೆ ಇತರರ ಗಮನವೂ ಕೊಡಲ್ಪಡುವುದೆಂದು ನಂಬಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...