Home / ಲೇಖನ / ಇತರೆ / ಧರ್ಮದ ಮಹತ್ವತೆ

ಧರ್ಮದ ಮಹತ್ವತೆ

ನಮ್ಮ ಬಾಳಿನಲ್ಲಿ ಧರ್ಮಕ್ಕೆ ಅತ್ಯಂತ ಮಹತ್ವ ನೀಡಬೇಕು. ಶ್ರೀ ಬಸವಣ್ಣನವರು ಹೇಳಿದ ಹಾಗೆ ‘ದಯವಿಲ್ಲದ ಧರ್ಮದೇವುದಯ್ಯ’ ಎಂದು ತಮ್ಮ ವಚನಗಳಲ್ಲಿ ಕೇಳುತ್ತಾರೆ. ಧರ್ಮ ಎಂದರೆ ನಮಗೆ ಸನ್ಮಾರ್ಗದತ್ತ ನಡೆಸುವುದೇ ಧರ್ಮ ಎನಿಸುತ್ತದೆ. ಹೊರತುಪಡಿಸಿ ಮೂಢ ನಂಬಿಕೆಗಳೆಲ್ಲ ಆಚರಣೆದಲ್ಲಿ ತರುವುದೆಂದರ್ಥವಲ್ಲ. ಜಗತ್ತಿನ ಧರ್ಮಗಳಲ್ಲೆಲ್ಲ ಮಾನವೀಯ ಸಂಬಂಧಗಳನ್ನು ಜೋಡಿಸಿಕೊಂಡಿವೆ. ಎಲ್ಲಿ ಸತ್ಯ, ನ್ಯಾಯ, ಮಾನವೀಯತೆ ಇದೆಯೊ ಅದೇ ಧರ್ಮ. ಎಲ್ಲ ಧರ್ಮಗಳು ವಿನಯವನ್ನು ಕಟ್ಟಿಕೊಡುತ್ತವೆ.

ನಯಸೇನನ ‘ಧರ್ಮಾಮೃತಂ’ ದಲ್ಲಿ ‘ಧರ್ಮವೇ ತಂದೆ, ಧರ್ಮವೇ ಪ್ರಿಯೆ, ಧರ್ಮವೇ ಬಂಧು ವರ್ಗ, ಸದ್ಧರ್ಮವೇ ಮುತ್ತಜ್ಜ, ಉತ್ತಮ ಅಜ್ಜ, ಹೇಗೆ ನೋಡಿದರೂ ಧರ್ಮವೇ ಮುಖ್ಯ ಎಂಬುದಾಗಿ ಸುಖವನ್ನು ಬಯಸುವಾತನು ಪರಿಭಾವಿಸುತ್ತಿರಲಿ’ ಎಂದು ಹೇಳಿದೆ. ಹಾಗೆ ನಾವು ಸದಾ ಸದ್ಧರ್ಮ, ಸದ್ವಿನಯದಲ್ಲಿ ಜೀವನ ಕಳೆಯಲು ಪ್ರಯತ್ನಿಸಬೇಕು.

ಶೃದ್ಧೆ ಆಚರಣೆಯಲ್ಲಿ ಬಾಳುವುದು ಇನ್ನೊಬ್ಬರಿಗೆ ನೋವಾಗದಂತೆ ನೋಡಿಕೊಳ್ಳುವುದು ನಡೆ-ನುಡಿಯಲ್ಲಿ ಏಕಸಾಮ್ಯ ತುಂಬಿಕೊಳ್ಳುವುದು, ಮನುಷ್ಯ ಮನುಷ್ಯರಿಗೆ ಸಹಕರಿಸುವುದು ಧರ್ಮವಾಗುತ್ತದೆ. ಒಬ್ಬರು ಕಷ್ಟಕಾಲದಲ್ಲಿದ್ದಾಗ ಸಹಕರಿಸುವುದು, ದುಃಖದಲ್ಲಿದ್ದದವರಿಗೆ ಸಾಂತ್ವನ ಹೇಳುವುದು, ವಯಸ್ಸಾದವರಿಗೆ ಊರುಗೋಲಾಗಿ ಉಪಕಾರ ಮಾಡುವುದೆಲ್ಲವೂ ಸಹಜ ಧರ್ಮವಾಗುತ್ತದೆ.

ಇವತ್ತು ಲೋಕದಲ್ಲಿ ಕೊಲೆ-ಸುಲಿಗೆ, ಸುಳ್ಳು ಮೋಸ ಸ್ವಾರ್ಥ, ಸ್ವಹಿತಪರ ಆಶ್ವಾಸನೆಗಳು ಮಿತಿಮೀರಿವೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡಲು ಸಿದ್ಧನಾಗಿಹನು, ಅವನು ಧರ್ಮವನ್ನು ಕಡೆಗಣಿಸಿಹನು.

ನಮ್ಮ ಪಾಪ ಕರ್ಮಗಳಿಗೆ ಅಂಕುಶವಾಗಿರಬೇಕಾದುದೇ ಧರ್ಮ ಎನಿಸುತ್ತದೆ. ಜಾತಿ-ಪಂಗಡಗಳ ಸೂತಕದಿಂದ ಮುಕ್ತವಾಗಿ ಪತನದತ್ತ ಜಾರುತ್ತಿರುವ ವ್ಯಕ್ತಿಯನ್ನು ಅಪ್ಪಿ ಸನ್ಮಾರ್ಗಕ್ಕೆ ಎಳೆಸುವುದೇ ಧರ್ಮವಾಗುತ್ತದೆ.

ಗಾಂಧೀಜಿಯವರು ನಮ್ಮಲ್ಲಿರುವ ದೋಷಗಳಿಗೆ ಮುಕ್ತವಾಗಿಸುವ ಕರ್ತವ್ಯಕ್ಕೆ ಧರ್ಮ ಎಂದು ಕರೆದರು. ಯಾರಲ್ಲಿ ಅಂತಃಕರಣ, ಪ್ರೀತಿ, ಅನುಕಂಪ ಇಲ್ಲವೋ ಅವರಲ್ಲಿ ಧರ್ಮವೆಂಬುದು ಕನ್ನಡಿಯೊಳಗಿನ ಗಂಟು ಎಂದು ಹೇಳಬಹುದು.

ನಮ್ಮ ಪೂರ್ವಜರು ಈ ಲೋಕದಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳಲೆಂದೇ ಈ ಧರ್ಮವೆಂಬ ಕಟ್ಟುಪಾಡು ನಮಗೆ ಹಾಕಿದರು. ಎಲ್ಲ ಧರ್ಮಗಳು ಸಮಾನತೆ ಮತ್ತು ಸತ್ಯವನ್ನೇ ಸಾರಿವೆ. ಅಂಥ ಧರ್ಮವೇ ನಮ್ಮ ಬದುಕು ಬೆಳಗಿಸಲು ಕಾರಣವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...