Home / ಕವನ / ಕವಿತೆ / ಉನ್ಮಾದ ಗೀತ

ಉನ್ಮಾದ ಗೀತ

ಹೃದಯದೊಳಗುನ್ಮಾದ ತುಂಬಿದೆ ಕಾಲಿನೊಳಗುರಿಯೆದ್ದಿದೆ
ಮರಣ ಮೂರ್ಛಿತ ಮನವು ಹರಣದ ಬಲಿತ ಗರಿಗಳ ಪಡೆದಿದೆ

ಕಟ್ಟುಗಳ ಕಿರಿಗೂಡಗೋರಿಯ ಮುರಿದು ಮೇಲಕೆ ನೆಗೆಯುವೆ
ಇನ್ನು ನಿಲ್ಲೆನು ನಾನು ಇಲ್ಲಿಗೆ ಬಾನಿನಂಚನೆ ಮುಟ್ಟುವೆ

ಯಾರು ತಡೆವರು ನನ್ನನು? ಯಾರು ಕಟ್ಟುವರೆನ್ನನು?
ಕಿರಣಗಳು ಕೊರೆದಿರುವ ದಾರಿಯ ಹಿಡಿದು ನಾ ಮುನ್ನಡೆವೆನು.

ನೂರು ಜನುಮದ ನೋವದಿಂದಿಗೆ ಮನಕೆ ಕಾವನು ಕೊಟ್ಟಿದೆ
ನೂರು ಬಾಳಿನ ಬೇವದೀಗಳೆ ಎದೆಗೆ ಕಸುವನ್ನೂಡಿದೆ.

ನೋಡುಮನದಲಿ ಬೇಗೆ ಎದ್ದಿದೆ ಕುಣಿವ ಕಡಲೇನೊಳಗಿದೆ
ಸಾವ ಭಯವನು ಬಿಟ್ಟಿದೆ, ವೀರರೋಜವ ತೊಟ್ಟಿದೆ

ಸಪ್ತಸಾಗರ ದಾಟುವಾ ಗೌರಿಶಂಕರ ಮೆಟ್ಟುವಾ
ತೊವಲು ದಿಟ್ಟಿಯು ತಟ್ಟದಾಕಿರುಚಿಕ್ಕೆನಾಡನು ಮುಟ್ಟುವಾ

ಬಯಕೆ ಬಲಿತಿರೆ ನಿಲ್ಲಬಹುದೆ ನಿಂತ ನೆಲವನು ನಂಬುತ
ತಡೆಯಬಹುದೆ ಸಂದ ದುಃಖದ ಇರಿತವನ್ನೇ ನೆನೆಯುತ

ಜನದ ಸಂದಣಿ ತೊರೆವೆನು, ಜಗದ ಗದ್ದಲ ಮರೆವೆನು
ಬಾನ ಹೊಳೆಯಲಿ ತೇಲಲೆನ್ನಯ ಕಿರಿಯ ನಾವೆಯ ಬಿಡುವೆನು.

ಇರುಳು ಕಳೆಯಲಿ ಹಗಲು ಅಳಿಯಲಿ ಕಾಲಜಾರಲಿ ಸವೆಯುತ
ಕಾಣದಂತಹದನ್ನೆ ಅರಸುವೆ ಕಾಲನನ್ನೇ ಮೆಟ್ಟುತ.

ಅಳಿವ ಗಳಿಗೆಗಳಿಂದಲೂ ಎಳೆಯುವೆನು ಅಮರರ ಸಿರಿಯನು
ಬೆಳೆದು ಮುಟ್ಟುವೆ ಮುಗಿಲಿನೇರನು ಬಯಸಿ ನಾಕದ ನೆರೆಯನು

ಅದರ ಕರೆಯೇ ತಲೆಯ ಕೆಣಕಿದೆ ಹೃದಯ ಗುಹೆಯನು ತುಂಬಿದೆ
ಒಡಲಿನಲಿ ದಳ್ಳುರಿಯ ಬಳ್ಳಿಯ ಹರಡಿ ನನ್ನನು ನೋಂತಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...