ಗಂಭೀರತೆ ಮೆರೆಯಲಿ

ಈ ಮನವಾಗದಿರಲಿ ನಿತ್ಯ ಚಂಚಲತೆ
ವೈರಾಗ್ಯದ ಭಾವದಿ ತಾನು ಮೆರೆಯಲಿ
ಹೆಜ್ಜೆ ಹೆಜ್ಜೆಗೂ ಎಲ್ಲವೂ ಮರೆಯಲಿ
ಗಂಭೀರತೆ ಭಾವದಿ ತಾನು ಬೆರೆಯಲಿ

ಮೇಲಿಂದ ಮೇಲೆ ಅಲೆಗಳು ಬಂದಿರಲು
ಸಾಗರ ತಾನು ಭೋರ್ಗರೆಯದು
ನದಿಗಳೆಲ್ಲ ಸಮುದ್ರವ ಸೇರುತ್ತಿರಲು
ಧಿಕ್ಕಾರ ಭಾವದಿ ತಾ ಉಕ್ಕಿ ಹರಿಯದು

ವಿಷಯ ಭೋಗಾಸೆ ಅವರ ಕಾಡಿರಲು
ಸಂತ ಮಹಾಜನ ಮೈಲಿಗೆಯಾಗರು
ಕಷ್ಟಗಳೆ ನಿತ್ಯ ಅವರ ಮಳೆ ಆಗಿರಲು
ಮೌನದಿ ಪಡೆವರು ಭಯ ಭೀತರಾಗರು

ದುಃಖ ಸುಖಗಳೆಲ್ಲ ಬಿಸಿಲ ನೆರಳ ಭ್ರಾಂತಿ
ಹೀಗೆಂದು ಎಲ್ಲವೂ ಸುಲಭವಾಗಿರಲಿ
ಚಂಚಲತೆಯ ತಾಣದಿ ಅಚಲತೆ ತುಂಬಿಕಲಿ
ಮನ ಮಗಿಮಗಿಸುವ ಮಾಣಿಕ್ಯ ವಿಠಲನಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಓದುವರು ನನ್ನ ಕವಿತೆ?
Next post ಅರ್ಥ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…