ಯಾರು ಓದುವರು ನನ್ನ ಕವಿತೆ?

ಯಾರು ಓದುವರು ನನ್ನ ಕವಿತೆ?
ಯಾರು ಹಾಡುವರು ನನ್ನ ಕವಿತೆ?|
ಯಾರು ಓದದಿದ್ದರೇನು
ಯಾರು ಹಾಡದಿದ್ದರೇನು|
ಬರೆಯುವೆ ನನ್ನ ಆನಂದಕೆ
ಬರೆಯುವೆ ನನ್ನಯಾ ಸಂತೋಷಕೆ|
ಬರೆಯುವೆ ಕನ್ನಡ ಪರಂಪರೆಯ
ಉಳಿಸಿ ಬೆಳೆಸಿದ ಹೆಮ್ಮೆಯ ಆತ್ಮತೃಪ್ತಿಗೆ||

ನೂರಾರು ಕನ್ನಡ ಕವಿಗಳ
ಸಾಹಿತ್ಯವ ಓದುವೆ
ಅವರಂತೆ ಬರೆಯಲು
ನಾ ಪ್ರಯತ್ನಿಸುವೆ|
ಅವರೆಲ್ಲರ ಕನ್ನಡತನವ
ಕಲಿಯಲಿಚ್ಚಿಸುವೆ
ಅವರಂತೆ ಕನ್ನಡ ಮೈಗೂಡಿಸಿ
ಬಾಳಲು ಆಶಿಸುವೆ ||

ಕನ್ನಡವಾಗಿದೆನ್ನ ಈ ತನು ಮನ
ಕನ್ನಡವಾಗಿದೆನ್ನ ಜೀವನ|
ಕನ್ನಡ ಬೆಳೆಸಲನುವಾಗಿ
ಸಾಗಿದೆನ್ನ ಅಳಿಲು ಸೇವೆ|
ಕುಗ್ಗದೆಂದಿಗೂ ಕರಗದೆಂದಿಗೂ
ಬತ್ತದೆಂದಿಗೂ ಬಾಡದೆಂದಿಗೂ
ಆರದೆಂದಿಗೂ ಈ ಮಹದಾಸೆ|
ಕನ್ನಡವೆಂದಿಗೂ ಅಳಿಯುವುದಿಲ್ಲ
ಕನ್ನಡ ಅಳಿಸಲು ಸಾಧ್ಯವಿಲ್ಲ|
ಕನ್ನಡಕ್ಕಿಂತ ಸುಂದರ, ಸುಮಧುರ
ಮುದ್ದಾದ ಲಿಪಿಯ ಭಾಷೆ ಇನ್ನೊಂದಿಲ್ಲ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಹುಡುಗಾಟ
Next post ಗಂಭೀರತೆ ಮೆರೆಯಲಿ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys