ನೀ ನಗಲೇನು ಮನವೆ

ನೀ ನಗಲೇನು ಮನವೆ
ಅಳಲೇನು ಮೌನ ತಾಳಲೇನು
ಹಸಿವು ಕಾಡದೆ ಬಿಡುವುದೇ ||

ಊಟ ಬಟ್ಟೆ ತಳಕು ಬಳುಕು
ನೋವುಂಡ ಮನವು
ಹಸಿವ ಅಡಗಿ ನಿಲ್ಲ ಬಲ್ಲುದೇ ||

ಮಮತೆ ವಾತ್ಸಲ್ಯಗಳು
ಹೃದಯ ತುಂಬಿದರೇನು
ಹಸಿವು ಅದನು ಮೆಟ್ಟಲಹುದೇ ||

ಜ್ಞಾನಕ್ಕೆ ವಿದ್ಯೆಯ ಹಸಿವು
ಭಕ್ತನಿಗೆ ಭಕ್ತಿ ಭಾವದ ಹಸಿವು
ಯೋಗಿಗೆ ಮುಕ್ತಿಯ ಹಸಿವು ||

ಇಳೆಗೆ ಮಳೆ ತಣಿವ ಹಸಿವು
ಬಡತನ ಸಿರಿತನದ ಜೀವ
ಜೀವಿಗೆ ಹಸಿವೆಂಬುದೆ ಜೀವನವು ||

ಎಲ್ಲಾ ಬಲ್ಲವ ಪರಶಿವನಿರಲು
ನಗಲು ಅಳಲು ಹಸಿವಿಗೆ
ಅನ್ನದಗುಳೇ ಸಾಕಾರವು ನಿತ್ಯ
ನೂತನ ವಸಂತವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರ್ಥ
Next post ಸ್ವಗತ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…